AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!

Meesho : ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋ ಆಫರ್​ ಕೇವಲ ರೂ. 10,212. ಮುಂದೇನಾಯಿತು? ವಿಡಿಯೋ ನೋಡಿ.

Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!
ಪಾರ್ಸೆಲ್​ನಲ್ಲಿ ಆಲೂಗಡ್ಡೆ!
TV9 Web
| Edited By: ಶ್ರೀದೇವಿ ಕಳಸದ|

Updated on:Sep 27, 2022 | 4:24 PM

Share

Viral Video : ಹಬ್ಬದ ಸೀಸನ್​ ಬರುತ್ತಿದ್ದಂತೆ ಆನ್​ಲೈನ್​ ಶಾಪಿಂಗ್ ವೆಬ್​,​ ಆ್ಯಪ್​ಗಳು ಪೈಪೋಟಿಯ ಮೇಲೆ ರಿಯಾಯ್ತಿ, ಕೊಡುಗೆಗಳನ್ನು ಕೊಡಲು ಮುಗಿಬೀಳುತ್ತವೆ. ಆರ್ಡರ್ ಮಾಡಿದ ಸಾಮಾನುಗಳಿಗಾಗಿ ಕುತೂಹಲದಿಂದ ಕಾಯುತ್ತ ಕುಳಿತುಕೊಳ್ಳುವ ಈ ಆ್ಯಪ್​ಗಳು ಕೆಲವೊಮ್ಮೆ ಅರಗಿಸಿಕೊಳ್ಳಲಾರದಂಥ ಸರ್ಪ್ರೈಝ್ ನೀಡಿಬಿಡುತ್ತವೆ. ದೆಹಲಿಯ ವ್ಯಕ್ತಿಯೊಬ್ಬರು ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನುಗಳನ್ನು ಪಡೆದದ್ದನ್ನು ಓದಿದ್ದೀರಿ. ಅಂಥದೇ ಇನ್ನೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಮೀಶೋ ಅಪ್ಲಿಕೇಶನ್ ಮೂಲಕ ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದ ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನ್​ಕುಮಾರ್, ಕ್ಯಾಮೆರಾ​ ಬದಲಾಗಿ ಒಂದು ಕೇಜಿ ಆಲೂಗಡ್ಡೆಯನ್ನು ಪಡೆದ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಗ್ರಾಹಕರು ಪಾರ್ಸೆಲ್​ ತೆರೆಯಲು ಮಿಶೋ ಡೆಲಿವರಿ ಏಜೆಂಟ್​ಗೆ ಹೇಳುತ್ತಾರೆ. ಡೆಲಿವರಿ ಏಜೆಂಟ್​ ತೆರೆದು ನೋಡಿದಾಗ ಆದಲ್ಲಿ ಡ್ರೋನ್​ ಕ್ಯಾಮೆರಾ ಬದಲಾಗಿ ಒಂದು ಕೇಜಿ ತೂಗುವ 10 ಆಲೂಗಡ್ಡೆಗಳು ಕಾಣಿಸುತ್ತವೆ. ಈ ವಿಷಯವಾಗಿ ನನಗೇನು ಗೊತ್ತಿಲ್ಲ ಎಂದು ಡೆಲಿವರಿ ಏಜೆಂಟ್​ ಹೇಳುತ್ತಾನೆ.

ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋನಲ್ಲಿ ಕೇವಲ ರೂ. 10,212. ಆಗ ಅನುಮಾನಗೊಂಡ ಚೇತನ್​ಕುಮಾರ್ ಆರ್ಡರ್ ಮಾಡುವ ಮೊದಲು ಕಂಪೆನಿಯವನ್ನು ಸಂಪರ್ಕಿಸಿ ರಿಯಾಯ್ತಿ ದರವನ್ನು ಖಚಿತಪಡಿಸಿಕೊಂಡಿದ್ದಾರೆ. ಹೌದು ಇದು ಆಫರ್ ಎಂದು ಮೀಶೋ ತಿಳಿಸಿದೆ. ಆನಂತರವೇ ಆನ್​ಲೈನ್​ಮೂಲಕ ಪೂರ್ತಿ ಹಣಪಾವತಿ ಮಾಡಿದ್ಧಾರೆ. ಆದರೆ ನಂತರ ಈ ಫಜೀತಿ!

ಹುಷಾರು ಈ ಆಫರ್​ಗಳಿಗೆ ಮೊರೆ ಹೋಗಿ ಹಣ ಕಳೆದುಕೊಂಡೀರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:21 pm, Tue, 27 September 22

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!