AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!

Meesho : ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋ ಆಫರ್​ ಕೇವಲ ರೂ. 10,212. ಮುಂದೇನಾಯಿತು? ವಿಡಿಯೋ ನೋಡಿ.

Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!
ಪಾರ್ಸೆಲ್​ನಲ್ಲಿ ಆಲೂಗಡ್ಡೆ!
TV9 Web
| Edited By: |

Updated on:Sep 27, 2022 | 4:24 PM

Share

Viral Video : ಹಬ್ಬದ ಸೀಸನ್​ ಬರುತ್ತಿದ್ದಂತೆ ಆನ್​ಲೈನ್​ ಶಾಪಿಂಗ್ ವೆಬ್​,​ ಆ್ಯಪ್​ಗಳು ಪೈಪೋಟಿಯ ಮೇಲೆ ರಿಯಾಯ್ತಿ, ಕೊಡುಗೆಗಳನ್ನು ಕೊಡಲು ಮುಗಿಬೀಳುತ್ತವೆ. ಆರ್ಡರ್ ಮಾಡಿದ ಸಾಮಾನುಗಳಿಗಾಗಿ ಕುತೂಹಲದಿಂದ ಕಾಯುತ್ತ ಕುಳಿತುಕೊಳ್ಳುವ ಈ ಆ್ಯಪ್​ಗಳು ಕೆಲವೊಮ್ಮೆ ಅರಗಿಸಿಕೊಳ್ಳಲಾರದಂಥ ಸರ್ಪ್ರೈಝ್ ನೀಡಿಬಿಡುತ್ತವೆ. ದೆಹಲಿಯ ವ್ಯಕ್ತಿಯೊಬ್ಬರು ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನುಗಳನ್ನು ಪಡೆದದ್ದನ್ನು ಓದಿದ್ದೀರಿ. ಅಂಥದೇ ಇನ್ನೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಮೀಶೋ ಅಪ್ಲಿಕೇಶನ್ ಮೂಲಕ ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದ ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನ್​ಕುಮಾರ್, ಕ್ಯಾಮೆರಾ​ ಬದಲಾಗಿ ಒಂದು ಕೇಜಿ ಆಲೂಗಡ್ಡೆಯನ್ನು ಪಡೆದ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಗ್ರಾಹಕರು ಪಾರ್ಸೆಲ್​ ತೆರೆಯಲು ಮಿಶೋ ಡೆಲಿವರಿ ಏಜೆಂಟ್​ಗೆ ಹೇಳುತ್ತಾರೆ. ಡೆಲಿವರಿ ಏಜೆಂಟ್​ ತೆರೆದು ನೋಡಿದಾಗ ಆದಲ್ಲಿ ಡ್ರೋನ್​ ಕ್ಯಾಮೆರಾ ಬದಲಾಗಿ ಒಂದು ಕೇಜಿ ತೂಗುವ 10 ಆಲೂಗಡ್ಡೆಗಳು ಕಾಣಿಸುತ್ತವೆ. ಈ ವಿಷಯವಾಗಿ ನನಗೇನು ಗೊತ್ತಿಲ್ಲ ಎಂದು ಡೆಲಿವರಿ ಏಜೆಂಟ್​ ಹೇಳುತ್ತಾನೆ.

ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋನಲ್ಲಿ ಕೇವಲ ರೂ. 10,212. ಆಗ ಅನುಮಾನಗೊಂಡ ಚೇತನ್​ಕುಮಾರ್ ಆರ್ಡರ್ ಮಾಡುವ ಮೊದಲು ಕಂಪೆನಿಯವನ್ನು ಸಂಪರ್ಕಿಸಿ ರಿಯಾಯ್ತಿ ದರವನ್ನು ಖಚಿತಪಡಿಸಿಕೊಂಡಿದ್ದಾರೆ. ಹೌದು ಇದು ಆಫರ್ ಎಂದು ಮೀಶೋ ತಿಳಿಸಿದೆ. ಆನಂತರವೇ ಆನ್​ಲೈನ್​ಮೂಲಕ ಪೂರ್ತಿ ಹಣಪಾವತಿ ಮಾಡಿದ್ಧಾರೆ. ಆದರೆ ನಂತರ ಈ ಫಜೀತಿ!

ಹುಷಾರು ಈ ಆಫರ್​ಗಳಿಗೆ ಮೊರೆ ಹೋಗಿ ಹಣ ಕಳೆದುಕೊಂಡೀರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:21 pm, Tue, 27 September 22

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ