AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!

Meesho : ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋ ಆಫರ್​ ಕೇವಲ ರೂ. 10,212. ಮುಂದೇನಾಯಿತು? ವಿಡಿಯೋ ನೋಡಿ.

Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!
ಪಾರ್ಸೆಲ್​ನಲ್ಲಿ ಆಲೂಗಡ್ಡೆ!
TV9 Web
| Edited By: ಶ್ರೀದೇವಿ ಕಳಸದ|

Updated on:Sep 27, 2022 | 4:24 PM

Share

Viral Video : ಹಬ್ಬದ ಸೀಸನ್​ ಬರುತ್ತಿದ್ದಂತೆ ಆನ್​ಲೈನ್​ ಶಾಪಿಂಗ್ ವೆಬ್​,​ ಆ್ಯಪ್​ಗಳು ಪೈಪೋಟಿಯ ಮೇಲೆ ರಿಯಾಯ್ತಿ, ಕೊಡುಗೆಗಳನ್ನು ಕೊಡಲು ಮುಗಿಬೀಳುತ್ತವೆ. ಆರ್ಡರ್ ಮಾಡಿದ ಸಾಮಾನುಗಳಿಗಾಗಿ ಕುತೂಹಲದಿಂದ ಕಾಯುತ್ತ ಕುಳಿತುಕೊಳ್ಳುವ ಈ ಆ್ಯಪ್​ಗಳು ಕೆಲವೊಮ್ಮೆ ಅರಗಿಸಿಕೊಳ್ಳಲಾರದಂಥ ಸರ್ಪ್ರೈಝ್ ನೀಡಿಬಿಡುತ್ತವೆ. ದೆಹಲಿಯ ವ್ಯಕ್ತಿಯೊಬ್ಬರು ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನುಗಳನ್ನು ಪಡೆದದ್ದನ್ನು ಓದಿದ್ದೀರಿ. ಅಂಥದೇ ಇನ್ನೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಮೀಶೋ ಅಪ್ಲಿಕೇಶನ್ ಮೂಲಕ ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದ ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನ್​ಕುಮಾರ್, ಕ್ಯಾಮೆರಾ​ ಬದಲಾಗಿ ಒಂದು ಕೇಜಿ ಆಲೂಗಡ್ಡೆಯನ್ನು ಪಡೆದ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಗ್ರಾಹಕರು ಪಾರ್ಸೆಲ್​ ತೆರೆಯಲು ಮಿಶೋ ಡೆಲಿವರಿ ಏಜೆಂಟ್​ಗೆ ಹೇಳುತ್ತಾರೆ. ಡೆಲಿವರಿ ಏಜೆಂಟ್​ ತೆರೆದು ನೋಡಿದಾಗ ಆದಲ್ಲಿ ಡ್ರೋನ್​ ಕ್ಯಾಮೆರಾ ಬದಲಾಗಿ ಒಂದು ಕೇಜಿ ತೂಗುವ 10 ಆಲೂಗಡ್ಡೆಗಳು ಕಾಣಿಸುತ್ತವೆ. ಈ ವಿಷಯವಾಗಿ ನನಗೇನು ಗೊತ್ತಿಲ್ಲ ಎಂದು ಡೆಲಿವರಿ ಏಜೆಂಟ್​ ಹೇಳುತ್ತಾನೆ.

ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋನಲ್ಲಿ ಕೇವಲ ರೂ. 10,212. ಆಗ ಅನುಮಾನಗೊಂಡ ಚೇತನ್​ಕುಮಾರ್ ಆರ್ಡರ್ ಮಾಡುವ ಮೊದಲು ಕಂಪೆನಿಯವನ್ನು ಸಂಪರ್ಕಿಸಿ ರಿಯಾಯ್ತಿ ದರವನ್ನು ಖಚಿತಪಡಿಸಿಕೊಂಡಿದ್ದಾರೆ. ಹೌದು ಇದು ಆಫರ್ ಎಂದು ಮೀಶೋ ತಿಳಿಸಿದೆ. ಆನಂತರವೇ ಆನ್​ಲೈನ್​ಮೂಲಕ ಪೂರ್ತಿ ಹಣಪಾವತಿ ಮಾಡಿದ್ಧಾರೆ. ಆದರೆ ನಂತರ ಈ ಫಜೀತಿ!

ಹುಷಾರು ಈ ಆಫರ್​ಗಳಿಗೆ ಮೊರೆ ಹೋಗಿ ಹಣ ಕಳೆದುಕೊಂಡೀರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:21 pm, Tue, 27 September 22

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ