AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಫ್ಲಿಪ್​ಕಾರ್ಟ್​ನಿಂದ ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನು ಪಡೆದ ಗ್ರಾಹಕ

Flipcart : ಆರ್ಡರ್​ ಬಾಕ್ಸ್​ ಓಪನ್ ಮಾಡದೆ ಡೆಲಿವರಿ ಏಜೆಂಟ್​ಗೆ ಒಟಿಪಿ ಕೊಟ್ಟಿದ್ದು ನಿಮ್ಮದೇ ತಪ್ಪು. ಈ ವಿಷಯವಾಗಿ ನಾವು ಏನೂ ಸಹಾಯ ಮಾಡಲಾಗದು ಎಂದು ಫ್ಲಿಪ್​ಕಾರ್ಟ್​ ಕಸ್ಟಮರ್ ಸಪೋರ್ಟ್ ವಿಭಾಗವು ತನ್ನ ಗ್ರಾಹಕರಿಗೆ ಹೇಳಿದೆ.

Viral : ಫ್ಲಿಪ್​ಕಾರ್ಟ್​ನಿಂದ ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನು ಪಡೆದ ಗ್ರಾಹಕ
ಫ್ಲಿಪ್​ಕಾರ್ಟ್​ ಕಳಿಸಿದ ಘಡಿ ಸಾಬೂನು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 27, 2022 | 2:30 PM

Viral : ಏನೋ ಆರ್ಡರ್ ಮಾಡಿದರೆ ಇನ್ನೇನೋ ಸಾಮಾನು ಬಂದು ತಲುಪಿರುತ್ತದೆ. ಈಗಾಗಲೇ ಇಂಟರ್​ನೆಟ್​ನಲ್ಲಿ ಆನ್​ಲೈನ್​ ಶಾಪಿಂಗ್​ನಲ್ಲಿ ಆಗುವ ಇಂಥ ಅಚಾತುರ್ಯಗಳ ಬಗ್ಗೆ ಸಾಕಷ್ಟು ಓದಿರುತ್ತೀರಿ. ಇತ್ತೀಚೆಗೆ ಫ್ಲಿಪ್​ಕಾರ್ಟ್​ನ​ ಬಿಗ್ ಬಿಲಿಯನ್ ಡೇಸ್ ಸೇಲ್​ ನಡೆಯುತ್ತಿರುವ ಸಂದರ್ಭದಲ್ಲಿ ಗ್ರಾಹಕರೊಬ್ಬರು ತಮ್ಮ ತಂದೆಗೆ ಲ್ಯಾಪ್‌ಟಾಪ್  ಆರ್ಡರ್ ಮಾಡಿದ್ದರು. ಆದರೆ ಅವರ ತಂದೆಗೆ ಡೆಲಿವರಿ ಬಾಕ್ಸ್​ ಸರಿಯಾದ ಸಮಯಕ್ಕೇನೋ ತಲುಪಿತು. ಆದರೆ ಒಳಗಿದ್ದದ್ದು ಲ್ಯಾಪ್​ಟಾಪ್​ನ ಬದಲಾಗಿ ಘಡಿ ಸಾಬೂನುಗಳು!

ಯಶಸ್ವಿ ಶರ್ಮಾ ಎನ್ನುವವರು ತಮ್ಮ ತಂದೆಗೆ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದರು. ಆದರೆ ಅವರ ತಂದೆಗೆ ತಲುಪಿದ್ದು ಸಾಬೂನುಗಳು. ಯಶಸ್ವಿ ಅವರ ತಂದೆಗೆ ಫ್ಲಿಪ್​ಕಾರ್ಟ್​ನ ಓಪನ್-ಬಾಕ್ಸ್ ಪರಿಕಲ್ಪನೆ ಬಗ್ಗೆ ತಿಳಿದಿರಲಿಲ್ಲ. (ಭಾರತೀಯರಿಗೆ ಈ ಪರಿಕಲ್ಪನೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ). ಓಪನ್ ಬಾಕ್ಸ್ ಕಾನ್ಸೆಪ್ಟ್​ ಎಂದರೆ ಆರ್ಡರ್ ಮಾಡಿದ ವಸ್ತುವನ್ನು ಡೆಲಿವರಿ ಏಜೆಂಟ್​ ಎದುರೇ ಪರಿಶೀಲಿಸಿ ನಂತರ ಒಟಿಪಿ ನೀಡಬೇಕು.

ಆದರೆ, ಪ್ರಿಪೇಯ್ಡ್ ಡೆಲಿವರಿಗಳಿಗೆ ಆರ್ಡರ್​ ಪ್ಯಾಕ್​ ಸ್ವೀಕರಿಸಿದ ನಂತರ ಒಟಿಪಿ ಕೊಡಬೇಕೆಂದು ಯಶಸ್ವಿ ಅವರ ತಂದೆ ಭಾವಿಸಿದರು. ಆದ್ದರಿಂದ ಡೆಲಿವರಿ ಏಜೆಂಟ್​ ಆರ್ಡರ್ ಬಾಕ್ಸ್​ ಕೊಡುತ್ತಿದ್ದಂತೆ ಅವರು ಒಟಿಪಿ ಕೊಟ್ಟುಬಿಟ್ಟರು.  ಈ ವಿಷಯವಾಗಿ ಕಸ್ಟಮರ್ ಸಪೋರ್ಟ್​ ವಿಭಾಗಕ್ಕೆ ಯಶಸ್ವಿ ದೂರು ಸಲ್ಲಿಸಿದಾಗ, ಆರ್ಡರ್​ ಬಾಕ್ಸ್​ ತೆರೆಯದೆ ಒಟಿಪಿ ಹಂಚಿಕೊಂಡಿದ್ದು ನಿಮ್ಮ ತಂದೆಯದೇ ತಪ್ಪು ಎಂದು ಆರೋಪಿಸಿದರು. ಆದರೆ ಡೆಲಿವರಿ ಏಜೆಂಟ್​ ಈ ಬಾಕ್ಸ್​ ತಲುಪಿಸುವ ವೇಳೆ ಸೆರೆಯಾದ ಸಿಸಿಟಿವಿ ದೃಶ್ಯಗಳ ಸಾಕ್ಷಿ ನನ್ನ ಬಳಿ ಇದೆ ಎಂದಿದ್ದಾರೆ ಯಶಸ್ವಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಎಲ್ಲ ವಿಷಯವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Man Claims Flipkart Sent Him Ghadi Detergent Instead of Laptop Says Customer Support is Blaming Him See Post

‘ಈಗ ನೀವು ಆರ್ಡರ್​ ಮಾಡಿದ ವಸ್ತು ನಿಮ್ಮನ್ನು ತಲುಪಲಾರದು. ಏಕೆಂದರೆ ಬಾಕ್ಸ್​ನೊಳಗೆ ಲ್ಯಾಪ್​ಟಾಪ್​ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನೀವು ಡೆಲಿವರಿ ಏಜೆಂಟ್​ಗೆ ಒಟಿಪಿ ನೀಡಬೇಕಿತ್ತು. ಈ ವಿಷಯವನ್ನು ಮತ್ತೆ ಎಳೆದಾಡುವಲ್ಲಿ ಅರ್ಥವಿಲ್ಲ, ಇದನ್ನು ಇಲ್ಲಿಗೆ ಮುಗಿಸಲಾಗುವುದು’ ಎಂದು ಕಸ್ಟಮರ್​ ಸಪೋರ್ಟ್​ ವಿಭಾಗವು ಉತ್ತರಿಸಿದೆ.

‘ನನ್ನ ತಂದೆಯದೇ ತಪ್ಪು ಎಂದು ಫ್ಲಿಪ್​ಕಾರ್ಟ್​ ವಾದಿಸುತ್ತಿದೆ. ಆದರೆ ಡೆಲಿವರಿ ಏಜೆಂಟ್​ ಓಪನ್ ಬಾಕ್ಸ್ ಪರಿಕಲ್ಪನೆಯ​ ಬಗ್ಗೆ ಮೊದಲೇ ಯಾಕೆ ನನ್ನ ತಂದೆಗೆ ತಿಳಿಸಲಿಲ್ಲ? ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಮೊದಲು ಕೊನೆಯ ಪ್ರಯತ್ನವೆಂಬಂತೆ ಇಲ್ಲಿ ಇದನ್ನು ಪೋಸ್ಟ್ ಮಾಡುತ್ತಿದ್ದೇನೆ. ಮಧ್ಯಮ ವರ್ಗದ ಭಾರತೀಯರಿಗೆ ಇಷ್ಟು ಮೌಲ್ಯದ ಲ್ಯಾಪ್​ಟಾಪ್ ಖರೀದಿಯಿಂದ ಉಂಟಾದ ನಷ್ಟವನ್ನು ಸುಲಭವಾಗಿ ಭರಿಸಿಕೊಳ್ಳಲಾಗದು.’ ಎಂದು ಯಶಸ್ವಿ ಈ ನೋಟ್​ನಲ್ಲಿ ಬರೆದಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:05 pm, Tue, 27 September 22

ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ