AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್‌ ಸ್ಕೂಲಂಥ ಸ್ಕೂಲಿಲ್ಲ ನಮ್‌ ಮಿಸ್ಸಂಥ ಮಿಸ್ಸಿಲ್ಲ’ ಯಾಕೆ ಅಂತ ನೋಡಿ ಈ ವಿಡಿಯೋ

Bihar : ನೀವು ಹೇಗೆ ಪಾಠ ಮಾಡುತ್ತಿದ್ದೀರಿ ಎನ್ನುವುದು ಮಕ್ಕಳ ಮುಖದ ಮೇಲೆ ಪ್ರತಿಫಲಿಸುವಂತಿರಬೇಕು, ಈ ಮಕ್ಕಳ ಮುಖದಲ್ಲಿ ಅರಳಿರುವ ಮಂದಹಾಸದಂತೆ. ಎಷ್ಟು ಲವಲವಿಕೆಯಿಂದ ಕಲಿಸುತ್ತಿದ್ದಾರೆ ನೋಡಿ ಬಿಹಾರದ ಖುಷ್ಬೂ ಟೀಚರ್​.

‘ನಮ್‌ ಸ್ಕೂಲಂಥ ಸ್ಕೂಲಿಲ್ಲ ನಮ್‌ ಮಿಸ್ಸಂಥ ಮಿಸ್ಸಿಲ್ಲ’ ಯಾಕೆ ಅಂತ ನೋಡಿ ಈ ವಿಡಿಯೋ
ಬಿಹಾರದ ಶಿಕ್ಷಕಿ ಖುಷ್ಬೂ ಕುಮಾರಿ ಮಕ್ಕಳೊಂದಿಗೆ
TV9 Web
| Updated By: ಶ್ರೀದೇವಿ ಕಳಸದ|

Updated on:Nov 24, 2022 | 4:54 PM

Share

Viral Video : ಶಿಕ್ಷಕ ವೃತ್ತಿ ಎಲ್ಲಕ್ಕಿಂತಲೂ ಮಿಗಿಲಾದುದು. ಮಕ್ಕಳ ಎಳೆಯ ಮನಸ್ಸುಗಳಿಗೆ ಸ್ಪಂದಿಸುತ್ತ ಅವುಗಳಿಗೆ ಆಕಾರ ಕೊಡುವ ಕೆಲಸವಿದೆಯಲ್ಲ ಅದು ಬಹಳ ಪ್ರೀತಿ, ಶ್ರದ್ಧೆ ಮತ್ತು ಕಾಳಜಿಯಿಂದ ಕೂಡಿರುವಂಥದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಬಿಹಾರದ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹಾಡು ನೃತ್ಯದ ಮೂಲಕ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಐಎಎಸ್​ ಅಧಿಕಾರಿ ದೀಪಕ್ ಕುಮಾರ್ ಸಿಂಗ್​ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಇನ್ನಿಲ್ಲದಂತೆ ಈ ದೃಶ್ಯವನ್ನು ಆನಂದಿಸುತ್ತಿದ್ದಾರೆ.

ಈ ಶಿಕ್ಷಕಿ ಬಿಹಾರದ ಬಂಕಾ ಮೂಲದವರು. ಖುಷ್ಬೂ ಕುಮಾರಿ ಈಕೆಯ ಹೆಸರು. ಪಾಠ ಎನ್ನುವುದು ನಾಲ್ಕು ಗೋಡೆಗಳ ಮಧ್ಯೆ ಅಲ್ಲ, ಅದರಾಚೆ ಎನ್ನುವುದನ್ನು ಈಕೆ ಅಕ್ಷರಶಃ ಪಾಲಿಸುತ್ತಿದ್ಧಾರೆ. ಆಟದ ಮೈದಾನ, ಗಿಡಗಂಟಿಗಳ ಮಧ್ಯೆಯೆಲ್ಲ ಓಡಾಡಿ ಮಕ್ಕಳೊಂದಿಗೆ ಮಗುವಾಗಿ ಈ ಶಿಕ್ಷಕಿ ಪಾಠ ಹೇಳಿ ಕೊಡುತ್ತಿದ್ದಾರೆ. ಇಂಥ ಆಹ್ಲಾದಕರ ಘಳಿಗೆಗಳು ಮಕ್ಕಳನ್ನು ಮತ್ತಷ್ಟು ಉತ್ತೇಜಿಸುತ್ತವೆ. ಶಾಶ್ವತವಾಗಿ ಪಾಠವೂ ಆಟವೂ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ.

22,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ನೆಟ್ಟಿಗರಂತೂ ಈ ಕ್ರಮವನ್ನು ಬಹಳ ಶ್ಲಾಘಿಸುತ್ತಿದ್ಧಾರೆ. ಎಲ್ಲ ಮಕ್ಕಳಿಗೂ ಇಂಥ ಶಿಕ್ಷಕರೇ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಹೊಸದಾಗಿ ಕೆಲಸಕ್ಕೆ ಸೇರಿದ ಇಂಥ ಕೆಲವೇ ಕೆಲ ಶಿಕ್ಷಕ-ಶಿಕ್ಷಕಿಯರು ಹೀಗೆ ಉತ್ಸಾಹವನ್ನು ಹೊಂದಿದ್ದಾರೆ. ಉಳಿದವರೂ ಇಂಥ ಉತ್ಸಾಹವನ್ನು ಪಡೆದುಕೊಳ್ಳಲಿ ಎಂದು ಒಬ್ಬರು ಹೇಳಿದ್ದಾರೆ. ಅನೇಕರು ಈ ವಿಡಿಯೋ ಕೊಂಡಾಡಿದ್ದಾರೆ.

ಮಕ್ಕಳ ಶಿಕ್ಷಣ, ಆರೋಗ್ಯ, ಸಂತೋಷದ ಹಿಂದೆ ದೇಶದ ಉನ್ನತಿ ಇದೆ. ಹಾಗಾಗಿ ಶಿಕ್ಷಕರು ಮನಸ್ಸಿಟ್ಟು ಮಕ್ಕಳನ್ನು ಪೋಷಿಸಬೇಕು. ಅಲ್ಲವೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:52 pm, Thu, 24 November 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ