AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋರ್​ ಆಗಿದೆ ಎಂದು 7 ಕೋಟಿ ಬೆಲೆ ಬಾಳುವ ಪೇಂಟಿಂಗ್ ಮೇಲೆ​ ಕಣ್ಣಿನ ಚಿತ್ರ ಬಿಡಿಸಿ ಪೇಚಿಗೆ ಸಿಲುಕಿದ ಸೆಕ್ಯುರಿಟಿ ಗಾರ್ಡ್​

ಬೋರ್​ ಆಗಿದೆ ಎಂದು ಮುಖವಿರದ ಪೇಂಟಿಂಗ್​ ಒಂದಕ್ಕೆ ಸೆಕ್ಯುರಿಟಿ ಕಾರ್ಡ್ ಒಬ್ಬ  ಪೇಂಟಿಂಗ್​ ಮೇಲೆ ಕಣ್ಣನ್ನು ಚಿತ್ರಿಸಿದ್ದಾನೆ. ಸದ್ಯ ಈತನನ್ನು ಚಿತ್ರವನ್ನು ವಿರೂಪಗೊಳಿಸಿದ್ದಾನೆ ಎಂದು ಕೆಲಸದಿಂದ ವಜಾಗೊಳಿಸಲಾಗಿದೆ.

ಬೋರ್​ ಆಗಿದೆ ಎಂದು 7 ಕೋಟಿ ಬೆಲೆ ಬಾಳುವ ಪೇಂಟಿಂಗ್ ಮೇಲೆ​ ಕಣ್ಣಿನ ಚಿತ್ರ ಬಿಡಿಸಿ ಪೇಚಿಗೆ ಸಿಲುಕಿದ ಸೆಕ್ಯುರಿಟಿ ಗಾರ್ಡ್​
ಪೇಂಟಿಂಗ್​
TV9 Web
| Edited By: |

Updated on:Feb 10, 2022 | 4:10 PM

Share

ಕೆಲಸಕ್ಕೆ ಬಂದ ಸೆಕ್ಯುರಿಟಿ ಗಾರ್ಡ್ (Security Guard)​ ಒಬ್ಬ ಮಾಡಲು ಏನೂ ಕೆಲಸವಿಲ್ಲದೆ ಬೋರ್​ ಬಂದಿದೆ ಎಂದು ರಷ್ಯಾದ ಆರ್ಟ್​ ಗ್ಯಾಲರಿಯಲ್ಲಿ (Art Gallery) 7 ಕೋಟಿ ರೂ. ಬೆಲೆಬಾಳುವ ಮುಖದ ಭಾಗಗಳನ್ನು ಬಿಡಿಸದ ವರ್ಣಚಿತ್ರದ  (Painting) ಮೇಲೆ ಕಣ್ಣನ್ನು ಬಿಡಿಸಿದ್ದಾನೆ.  ವರ್ಣಚಿತ್ರಗಳು ಅಥವಾ ಆರ್ಟ್​ ಗ್ಯಾಲರಿಯಲ್ಲಿರುವ ಚಿತ್ರಗಳು ಅದರದ್ದೇ ಆದ ಅರ್ಥವನ್ನು ಹೊಂದಿರುತ್ತದೆ. ಮುಖವಿರಲಿ, ಇಲ್ಲದೆ ಇರಲಿ, ಬಿಳಿ ಹಾಳೆಯ ಮೇಲೆ ಒಂದು ಗೆರೆ ಎಳೆದಿದ್ದರೂ ಆ  ಪೇಂಟಿಗ್​ ಕೋಟಿ ರೂಗಳಿಗೆ ಮಾರಾಟವಾದ ಉದಾಹರಣೆಗಳಿವೆ. ಹೀಗಿದ್ದಾಗ ಬೋರ್​ ಆಗಿದೆ ಎಂದು ಮುಖವಿರದ ಪೇಂಟಿಂಗ್​ ಒಂದಕ್ಕೆ ಸೆಕ್ಯುರಿಟಿ ಕಾರ್ಡ್ ಒಬ್ಬ  ಪೇಂಟಿಂಗ್​ ಮೇಲೆ ಕಣ್ಣನ್ನು ಚಿತ್ರಿಸಿದ್ದಾನೆ. ಸದ್ಯ ಈತನನ್ನು ಚಿತ್ರವನ್ನು ವಿರೂಪಗೊಳಿಸಿದ್ದಾನೆ ಎಂದು ಕೆಲಸದಿಂದ ವಜಾಗೊಳಿಸಲಾಗಿದೆ.

ರಷ್ಯಾದ ಯೆಕಟೆರಿನ್ಬರ್ಗ್ ಪ್ರದೇಶದ ಯೆಲ್ಟ್ಸಿನ್ ಎನ್ನುವ ಆರ್ಟ್​ ಗ್ಯಾಲರಿಲ್ಲಿ ಈ ಘಟನೆ ನಡೆದಿದೆ. ಚಿತ್ರದ ಮೇಲೆ ಕಣ್ಣನ್ನು ಬಿಡಿಸಿದ ಸೆಕ್ಯುರಿಟಿ ಗಾರ್ಡ್​ ಅನ್ನು ವಜಾಗೊಳಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ವಿರೂಪಗೊಳಿಸಿದ ಚಿತ್ರವನ್ನು 1930ರಲ್ಲಿ ರಚಿಸಲಾಗಿತ್ತು ಎನ್ನಲಾಗಿದ್ದು ಸುಮಾರು 7.5 ಕೋಟಿ ರೂಗಳಿಗೆ  ಇನ್ಸುರೆನ್ಸ್​ ಮಾಡಿಸಲಾಗಿದ್ದು, ಪ್ರದರ್ಶನಕ್ಕೆ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ. 

ಸದ್ಯ ಸೆಕ್ಯುರಿಟಿ ಗಾರ್ಡ್​ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ ಆರೋಪ ಸಾಬೀತಾದರೆ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.  ಆತ ಚಿತ್ರದ ಮೇಲೆ ಕಣ್ಣುಗಳನ್ನು ಬಿಡಿಸಲು  ಬಾಲ್​ ಪೆನ್​ಗಳನ್ನು ಬಳಕೆ ಮಾಡಿದ್ದು, ಎರಡು ಚಿತ್ರಗಳಿಗೆ ಕಣ್ಣನ್ನು ಬಿಡಿಸಿದ್ದಾನೆ ಎಂದು ಹೇಳಲಾಗಿದೆ.  ಚಿತ್ರಬಿಡಿಸಿದ ಕಣ್ಣುಗಳ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:

ಪ್ರಯಾಣಿಕನೊಂದಿಗೆ ಬಂದ ಹುಂಜಕ್ಕೂ 30 ರೂ. ಟಿಕೆಟ್​ ನೀಡಿದ ಕಂಡಕ್ಟರ್​​: ಆಮೇಲಾಗಿದ್ದೇನು ಗೊತ್ತಾ?

Published On - 4:08 pm, Thu, 10 February 22

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ