AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕನೊಂದಿಗೆ ಬಂದ ಹುಂಜಕ್ಕೂ 30 ರೂ. ಟಿಕೆಟ್​ ನೀಡಿದ ಕಂಡಕ್ಟರ್​​: ಆಮೇಲಾಗಿದ್ದೇನು ಗೊತ್ತಾ?

ತೆಲಂಗಾಣದ ಬಸ್​ನಲ್ಲಿ  ಕಂಡಕ್ಟರ್​ ಒಬ್ಬ ಪ್ರಯಾಣಿಕನೊಂದಿಗೆ ಬಂದಿದ್ದ ಹುಂಜಕ್ಕೆ ಟಿಕೇಟ್​ ನೀಡಿದ್ದಾನೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪ್ರಯಾಣಿಕನೊಂದಿಗೆ ಬಂದ ಹುಂಜಕ್ಕೂ 30 ರೂ. ಟಿಕೆಟ್​ ನೀಡಿದ ಕಂಡಕ್ಟರ್​​: ಆಮೇಲಾಗಿದ್ದೇನು ಗೊತ್ತಾ?
ಹುಂಜ
TV9 Web
| Edited By: |

Updated on:Feb 10, 2022 | 2:40 PM

Share

ಕೆಲವೊಮ್ಮೆ ಸರಿ ಎಂದುಕೊಂಡು ಮಾಡಿದ ಕೆಲಸಗಳು ಅಪರಾಧ ಮತ್ತು ಅಪವಾದಕ್ಕೆ ಕಾರಣವಾಗುತ್ತದೆ. ಇಲ್ಲೊಂದು ಅಂತಹದ್ದೆ ಘಟನೆ ನಡೆದ ಬಗ್ಗೆ ವರದಿಯಾಗಿದೆ. ತೆಲಂಗಾಣದ ಬಸ್​ನಲ್ಲಿ  ಕಂಡಕ್ಟರ್​ ಒಬ್ಬ ಪ್ರಯಾಣಿಕನೊಂದಿಗೆ ಬಂದಿದ್ದ ಹುಂಜಕ್ಕೆ(Rooster) ಟಿಕೇಟ್ (Ticket)​ ನೀಡಿದ್ದಾನೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ ಬಸ್​ಗಳಲ್ಲಿ ಪ್ರಾಣಿಗಳನ್ನು ಸೇರಿಸುವಂತಿಲ್ಲ. ಹೀಗಿದ್ದಾಗಲೂ ಕಂಡಕ್ಟರ್ (Conducter)​ ಪ್ರಯಾಣಿಕ ಹುಂಜವನ್ನು ಹಿಡಿದುಕೊಂಡಿದ್ದರೂ ಅವರನ್ನು ಬಸ್​ನಿಂದ ಇಳಿಸದೆ  ಟಿಕೆಟ್​ ನೀಡಿದ್ದು ಸಾರಿಗೆ ನಿಯಮದ ಪ್ರಕಾರ ತಪ್ಪು ಎಂದು ಕಂಡಕ್ಟರ್​ ವಿರುದ್ದ ಕ್ರಮ ಕೈಗೊಂಡ ಘಟನೆ ನಡೆದಿದೆ.

ಈ ಘಟನೆ ನಡೆದಿದ್ದು ತೆಲಂಗಾಣದ ಸುಲ್ತಾನಾಬಾದ್​ ಸರ್ಕಾರಿ ಬಸ್​ನಲ್ಲಿ. ತ್ರಿಪಾಟಿ ಎನ್ನುವ ಬಸ್​ ಕಂಡಕ್ಟರ್​ಗೆ ಪ್ರಯಾಣಿಕ ಬಸ್​ ಹತ್ತಿದ ಮೇಲೆ ಸ್ವಲ್ಪ ದೂರ ಮುಂದೆ ಹೋದ ಮೇಲೆ ಆತನ ಜತೆ ಹುಂಜ ಇರುವುದು ಗಮನಕ್ಕೆ ಬಂದಿದೆ. ಈ ವೇಳೆ ಕಂಡಕ್ಟರ್​​ ಭೂಮಿಯ ಮೇಲೆ ಜೀವ ಇರುವ ಎಲ್ಲಾ ಜೀವಿಗಳಿಗೂ ಟಿಕೆಟ್​ ನೀಡಲಾಗುತ್ತದೆ ಎಂದು ಹುಂಜಕ್ಕೂ 30 ರೂ. ಟಿಕೆಟ್​ ನೀಡಿದ್ದಾನೆ. ಈ ಘಟನೆಯ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ತೆಲಂಗಾಣ ರಸ್ತೆ ಸಾರಿಗೆ ಸಂಸ್ತೆಯ ಅಧಿಕಾರಿಗಳು ಕಂಡಕ್ಟರ್​ ವಿರುದ್ಧ ಗರಂ ಆಗಿದ್ದಾರೆ.

ಘಟನೆಯ ಕುರಿತು ಅಧಿಕಾರಿಯೊಬ್ಬರು ಪ್ರತಿಕ್ರಯಿಸಿ, ಪ್ರಯಾಣಿಕನ ಜತೆ ಹುಂಜ ಇರುವುದನ್ನು ಗಮನಿಸಿದ ಮೇಲೆ  ಆತನನ್ನು ಬಸ್​ನಿಂದ ಕೆಳಗೆ ಇಳಿಸಬೇಕಿತ್ತು ಆದರೆ ಅದರ ಬದಲು ಟಿಕೆಟ್​ ನೀಡಿದ್ದಾರೆ. ಪ್ರಾಣಿಗಳನ್ನು ಬಸ್​ನಲ್ಲಿ ಹತ್ತಿಸುವಂತಿಲ್ಲ. ಹೀಗಿದ್ದರೂ ಇರಿಸಿಕೊಂಡು ತಪ್ಪು ಮಾಡಿದ್ದಾರೆ, ಅದೂ ಅಲ್ಲದೆ ಟಿಕೆಟ್​​ ಕೂಡ ನೀಡಿ ಮತ್ತೊಂದು ತಪ್ಪು ಮಾಡಿದ್ದಾರೆ. ಹೀಗಾಗಿ ಕಂಡಕ್ಟರ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸದ್ಯ ಕಂಡಕ್ಟರ್ ಹುಂಜಕ್ಕೆ ಟಿಕೆಟ್​ ನೀಡಿದ ವಿಡಿಯೋ ಮತ್ತು ವಿಚಾರ ಎಲ್ಲೆಡೆ ವೈರಲ್​ ಆಗಿದೆ.

ಇದನ್ನೂ ಓದಿ:

ಇದು 100 ವರ್ಷಗಳ ಹಳೆಯ ಮೊಟ್ಟೆ: ಶತಮಾನದ ಮೊಟ್ಟೆಯ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ

Published On - 2:36 pm, Thu, 10 February 22

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!