AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕನೊಂದಿಗೆ ಬಂದ ಹುಂಜಕ್ಕೂ 30 ರೂ. ಟಿಕೆಟ್​ ನೀಡಿದ ಕಂಡಕ್ಟರ್​​: ಆಮೇಲಾಗಿದ್ದೇನು ಗೊತ್ತಾ?

ತೆಲಂಗಾಣದ ಬಸ್​ನಲ್ಲಿ  ಕಂಡಕ್ಟರ್​ ಒಬ್ಬ ಪ್ರಯಾಣಿಕನೊಂದಿಗೆ ಬಂದಿದ್ದ ಹುಂಜಕ್ಕೆ ಟಿಕೇಟ್​ ನೀಡಿದ್ದಾನೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪ್ರಯಾಣಿಕನೊಂದಿಗೆ ಬಂದ ಹುಂಜಕ್ಕೂ 30 ರೂ. ಟಿಕೆಟ್​ ನೀಡಿದ ಕಂಡಕ್ಟರ್​​: ಆಮೇಲಾಗಿದ್ದೇನು ಗೊತ್ತಾ?
ಹುಂಜ
TV9 Web
| Edited By: |

Updated on:Feb 10, 2022 | 2:40 PM

Share

ಕೆಲವೊಮ್ಮೆ ಸರಿ ಎಂದುಕೊಂಡು ಮಾಡಿದ ಕೆಲಸಗಳು ಅಪರಾಧ ಮತ್ತು ಅಪವಾದಕ್ಕೆ ಕಾರಣವಾಗುತ್ತದೆ. ಇಲ್ಲೊಂದು ಅಂತಹದ್ದೆ ಘಟನೆ ನಡೆದ ಬಗ್ಗೆ ವರದಿಯಾಗಿದೆ. ತೆಲಂಗಾಣದ ಬಸ್​ನಲ್ಲಿ  ಕಂಡಕ್ಟರ್​ ಒಬ್ಬ ಪ್ರಯಾಣಿಕನೊಂದಿಗೆ ಬಂದಿದ್ದ ಹುಂಜಕ್ಕೆ(Rooster) ಟಿಕೇಟ್ (Ticket)​ ನೀಡಿದ್ದಾನೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ ಬಸ್​ಗಳಲ್ಲಿ ಪ್ರಾಣಿಗಳನ್ನು ಸೇರಿಸುವಂತಿಲ್ಲ. ಹೀಗಿದ್ದಾಗಲೂ ಕಂಡಕ್ಟರ್ (Conducter)​ ಪ್ರಯಾಣಿಕ ಹುಂಜವನ್ನು ಹಿಡಿದುಕೊಂಡಿದ್ದರೂ ಅವರನ್ನು ಬಸ್​ನಿಂದ ಇಳಿಸದೆ  ಟಿಕೆಟ್​ ನೀಡಿದ್ದು ಸಾರಿಗೆ ನಿಯಮದ ಪ್ರಕಾರ ತಪ್ಪು ಎಂದು ಕಂಡಕ್ಟರ್​ ವಿರುದ್ದ ಕ್ರಮ ಕೈಗೊಂಡ ಘಟನೆ ನಡೆದಿದೆ.

ಈ ಘಟನೆ ನಡೆದಿದ್ದು ತೆಲಂಗಾಣದ ಸುಲ್ತಾನಾಬಾದ್​ ಸರ್ಕಾರಿ ಬಸ್​ನಲ್ಲಿ. ತ್ರಿಪಾಟಿ ಎನ್ನುವ ಬಸ್​ ಕಂಡಕ್ಟರ್​ಗೆ ಪ್ರಯಾಣಿಕ ಬಸ್​ ಹತ್ತಿದ ಮೇಲೆ ಸ್ವಲ್ಪ ದೂರ ಮುಂದೆ ಹೋದ ಮೇಲೆ ಆತನ ಜತೆ ಹುಂಜ ಇರುವುದು ಗಮನಕ್ಕೆ ಬಂದಿದೆ. ಈ ವೇಳೆ ಕಂಡಕ್ಟರ್​​ ಭೂಮಿಯ ಮೇಲೆ ಜೀವ ಇರುವ ಎಲ್ಲಾ ಜೀವಿಗಳಿಗೂ ಟಿಕೆಟ್​ ನೀಡಲಾಗುತ್ತದೆ ಎಂದು ಹುಂಜಕ್ಕೂ 30 ರೂ. ಟಿಕೆಟ್​ ನೀಡಿದ್ದಾನೆ. ಈ ಘಟನೆಯ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ತೆಲಂಗಾಣ ರಸ್ತೆ ಸಾರಿಗೆ ಸಂಸ್ತೆಯ ಅಧಿಕಾರಿಗಳು ಕಂಡಕ್ಟರ್​ ವಿರುದ್ಧ ಗರಂ ಆಗಿದ್ದಾರೆ.

ಘಟನೆಯ ಕುರಿತು ಅಧಿಕಾರಿಯೊಬ್ಬರು ಪ್ರತಿಕ್ರಯಿಸಿ, ಪ್ರಯಾಣಿಕನ ಜತೆ ಹುಂಜ ಇರುವುದನ್ನು ಗಮನಿಸಿದ ಮೇಲೆ  ಆತನನ್ನು ಬಸ್​ನಿಂದ ಕೆಳಗೆ ಇಳಿಸಬೇಕಿತ್ತು ಆದರೆ ಅದರ ಬದಲು ಟಿಕೆಟ್​ ನೀಡಿದ್ದಾರೆ. ಪ್ರಾಣಿಗಳನ್ನು ಬಸ್​ನಲ್ಲಿ ಹತ್ತಿಸುವಂತಿಲ್ಲ. ಹೀಗಿದ್ದರೂ ಇರಿಸಿಕೊಂಡು ತಪ್ಪು ಮಾಡಿದ್ದಾರೆ, ಅದೂ ಅಲ್ಲದೆ ಟಿಕೆಟ್​​ ಕೂಡ ನೀಡಿ ಮತ್ತೊಂದು ತಪ್ಪು ಮಾಡಿದ್ದಾರೆ. ಹೀಗಾಗಿ ಕಂಡಕ್ಟರ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸದ್ಯ ಕಂಡಕ್ಟರ್ ಹುಂಜಕ್ಕೆ ಟಿಕೆಟ್​ ನೀಡಿದ ವಿಡಿಯೋ ಮತ್ತು ವಿಚಾರ ಎಲ್ಲೆಡೆ ವೈರಲ್​ ಆಗಿದೆ.

ಇದನ್ನೂ ಓದಿ:

ಇದು 100 ವರ್ಷಗಳ ಹಳೆಯ ಮೊಟ್ಟೆ: ಶತಮಾನದ ಮೊಟ್ಟೆಯ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ

Published On - 2:36 pm, Thu, 10 February 22

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!