Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಕ್​ ಫ್ರಮ್​ ಹೋಮ್​ ಸಂಕಷ್ಟ; ಮದುವೆಯ ದಿನವೂ ಲ್ಯಾಪ್​ ಟಾಪ್​, ಫೋನ್​ ಹಿಡಿದು ಕುಳಿತ ವಧು

ವರ್ಕ್​ ಫ್ರಮ್​ ಹೋಮ್​ ನಿಂದ ಯುವತಿಯೊಬ್ಬಳು ಆಕೆಯ ಮದುವೆಯ ದಿನವೂ ಆಫೀಸ್​ ಫೋನ್​ ಕಾಲ್​ನಲ್ಲಿ ಮಾತನಾಡುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. 

ವರ್ಕ್​ ಫ್ರಮ್​ ಹೋಮ್​ ಸಂಕಷ್ಟ; ಮದುವೆಯ ದಿನವೂ ಲ್ಯಾಪ್​ ಟಾಪ್​, ಫೋನ್​ ಹಿಡಿದು ಕುಳಿತ ವಧು
ವಧು
Follow us
TV9 Web
| Updated By: Digi Tech Desk

Updated on:Jan 28, 2022 | 2:53 PM

ಕೊರೋನಾ ಬಂದಾಗಿನಿಂದ ವರ್ಕ್​ ಫ್ರಮ್​ ಹೋಮ್ (Work From Home) ಎಲ್ಲರನ್ನೂ ಆವರಿಸಿದೆ. ಮದುವೆ, ಸಮಾರಂಭಗಳು ಯಾವುದೇ ಇದ್ದರೂ ಹೋಗಲು ಸಾಧ್ಯವಾಗದೆ ಕೆಲಸ ಮಾಡಬೇಕಾದ ಸ್ಥಿತಿ ಕೆಲವು ಕಡೆ ಇದೆ. ಇದೀಗ ವರ್ಕ್​ ಫ್ರಮ್​ ಹೋಮ್​ ನಿಂದ ಯುವತಿಯೊಬ್ಬಳು ಆಕೆಯ ಮದುವೆಯ ದಿನವೂ ಆಫೀಸ್​ ಫೋನ್​ ಕಾಲ್​ನಲ್ಲಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ವೈರಲ್​ (Viral Video) ಆಗಿದೆ.  ಮದುವೆಯ ದಿನ ವಧು (Bride) ತಯಾರುಗುತ್ತಿರುವ ವೇಳೆ ಪದೇ ಪದೇ ಫೋನ್​ ಕಾಲ್​ಗಳು ಆಕೆಗೆ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಇದರಿಂದ ಆಕೆ ಕೋಪಗೊಂಡು ಮಾತನಾಡುವ ವಿಡಿಯೋ ವೈರಲ್​ ಆಗಿದೆ.

ಬ್ರೈಡ್​ ಮೇಕಪ್​​ ಆರ್ಟಿಸ್ಟ್​ ಸೋನಾ ಕಪೂರ್​ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮದುವೆ ಮಂಟಪಕ್ಕೆ ಹೋಗಲು ಪೂರ್ಣವಾಗಿ ವಧು ಸಿದ್ಧವಾಗಿರುತ್ತಾಳೆ. ಆ ಸಮಯದಲ್ಲಿ ಆಕೆ ಲ್ಯಾಪ್​ಟಾಪ್​ ಹಿಡಿದು, ಆಗಾಗ ಬರುವ ಫೋನ್​ ಕಾಲ್​ಗಳನ್ನು ರಿಸೀವ್ ಮಾಡುತ್ತಾಳೆ. ಈ ನಡುವೆ  ವಧು ಸಿಟ್ಟಿನಲ್ಲಿ ಇಂದು ನನ್ನ ಮದುವೆ ಇದೆ, ಯಾರಾದರೂ ಇವರಿಗೆ ಹೇಳಿ ಎನ್ನುವುದನ್ನು ಕಾಣಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವರ್ಕ್​ ಫ್ರಮ್​ ಹೋಮ್​ನ ಕತೆ ಎಂದು ಕ್ಯಾಪ್ಷನ್​ ನಿಡಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಈವರೆಗೆ 5 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ. ಕೊರೊನಾ ಕಾರಣದಿಂದ ಕಂಪನಿಗಳು ವರ್ಕ್​ ಫ್ರಮ್​ ಹೋಮ್​ ನೀಡಿದೆ. ಇದರಿಂದ ಕೆಲಸಗಾರರು ಮಾನಸಿಕ ಕಿರಿಕಿರಿ, ಒತ್ತಡವನ್ನು ಅನುಭವಿಸುತ್ತಲೇ ಇದ್ದಾರೆ.

ಇದನ್ನೂ ಓದಿ:

ಪ್ರವಾಸಿಗನನ್ನು ಪ್ರೀತಿಯಿಂದ ಅಪ್ಪಿಕೊಂಡ ಕೋತಿ; ಮೆಕ್ಸಿಕೋದಲ್ಲೊಂದು ಹೃದಯಸ್ಪರ್ಶಿ ಘಟನೆ : ವಿಡಿಯೋ ವೈರಲ್​

Published On - 2:31 pm, Fri, 28 January 22

ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ