AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಯಿಂದ ಬಾಯಿಗೆ ಉಸಿರು ಕೊಟ್ಟು ಊಸರವಳ್ಳಿಯ ಜೀವ ಉಳಿಸಿದ ವ್ಯಕ್ತಿ; ವಿಡಿಯೋ ವೈರಲ್​​​​

ಸಾಮಾನ್ಯವಾಗಿ ಹಲ್ಲಿ, ಜಿರಳೆ, ಈ ಊಸರವಳ್ಳಿಯಂತಹ ಜೀವಿಗಳನ್ನು ನೋಡಿದಾಗ 'ಛೀ.......' ಅಂತ ಅನ್ನುವವರೇ ಹೆಚ್ಚು. ಇದಲ್ಲದೇ ಇವುಗಳನ್ನು ನೋಡಿ ಹೆದರಿ ಓಡಿ ಹೋಗುವವರು ಇದ್ದಾರೆ. ಆದ್ರೆ ಇಲ್ಲೊಬ್ಬರು ಬಾಯಿಂದ ಬಾಯಿಗೆ ಉಸಿರು ನೀಡಿ ಊಸರವಳ್ಳಿಗೆ ಮರುಜೀವ ನೀಡಿದ್ದಾರೆ.

Viral Video: ಬಾಯಿಂದ ಬಾಯಿಗೆ ಉಸಿರು ಕೊಟ್ಟು ಊಸರವಳ್ಳಿಯ ಜೀವ ಉಳಿಸಿದ ವ್ಯಕ್ತಿ; ವಿಡಿಯೋ ವೈರಲ್​​​​
Viral VideoImage Credit source: twitter
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Oct 12, 2023 | 10:46 AM

ಸಾಮಾಜಿಕ ಜಾಲತಾಣ (Social Media) ದಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಕೆಲವೊಂದು ವಿಡಿಯೋಗಳು ನೆಟ್ಟಿಗರ ಮನ ಗೆಲ್ಲುತ್ತದೆ. ಅಂತದ್ದೇ ವಿಡಿಯೋ ಒಂದು ಇದೀಗಾ ಎಲ್ಲೆಡೆ ವೈರಲ್​ ಆಗಿದೆ. ಹೌದು ರಸ್ತೆ ಬದಿಯಲ್ಲಿ ಸತ್ತ ರೀತಿಯಲ್ಲಿ ಬಿದ್ದಿದ್ದ ಊಸರವಳ್ಳಿಗೆ(Chameleon) ಸಿಪಿಆರ್ ನೀಡಿ ರಕ್ಷಿಸಿದ ವಿಡಿಯೋ ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್(Viral)​ ಆಗಿದೆ. ಸಾಮಾನ್ಯವಾಗಿ ಹಲ್ಲಿ, ಜಿರಳೆ, ಈ ಊಸರವಳ್ಳಿಯಂತಹ ಜೀವಿಗಳನ್ನು ನೋಡಿದಾಗ ‘ಛೀ…….’ ಅಂತ ಅನ್ನುವವರೇ ಹೆಚ್ಚು. ಇದಲ್ಲದೇ ಇವುಗಳನ್ನು ನೋಡಿ ಹೆದರಿ ಓಡಿ ಹೋಗುವವರು ಇದ್ದಾರೆ. ಆದ್ರೆ ಇಲ್ಲೊಬ್ಬರು ಬಾಯಿಂದ ಬಾಯಿಗೆ ಉಸಿರು ನೀಡಿ ಊಸರವಳ್ಳಿಗೆ ಮರುಜೀವ ನೀಡಿದ್ದಾರೆ. ಹೃದಯ ಬಡಿತ ನಿಲ್ಲಿಸಿ ಹೆಣದಂತಿದ್ದ ಈ ಜೀವಿಗೆ ಮರು ಜೀವ ನೀಡಿ ತನ್ನ ಮನೆಯಲ್ಲಿಯೇ ಸಾಕು ಪ್ರಾಣಿಯಂತೆ ಮುದ್ದಾಗಿ ಸಾಕಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ‘ಮಾನವೀಯತೆ ಇನ್ನೂ ಭೂಮಿಯ ಮೇಲೆ ಅಸ್ತಿತ್ವದಲ್ಲಿದೆ’ ಎಂದು ಕಾಮೆಂಟ್​​​ ಮಾಡಿದ್ದಾರೆ.

ಸಿಪಿಆರ್ ನೀಡಿ ಊಸರವಳ್ಳಿಯ ಜೀವ ಉಳಿಸಿದ ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: 5 ಕೋಟಿ ರೂ ಬೆಲೆಯ ವಿಶ್ವದ ಅತ್ಯಂತ ದುಬಾರಿ ಹಾಸಿಗೆ; ಇದರ ವಿಶೇಷತೆ ಏನು ಗೊತ್ತಾ?

@TheFigen_ ಎಂಬ ಟ್ವಿಟರ್​​(‘X’) ಬಳಕೆದಾರರು ಈ ವಿಡಿಯೋವನ್ನು ಅಕ್ಟೋಬರ್​​​ 10 ರಂದು ಹಂಚಿಕೊಂಡಿದ್ದು, ಇದೀಗಾಗಲೇ ಕೇವಲ 2ದಿನಗಳಲ್ಲಿ 8.1 ಮಿಲಿಯನ್​​ ವೀಕ್ಷಣೆಯನ್ನು ಪಡೆದುಕೊಂಡಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಸಿಪಿಆರ್ ನೀಡುವ ಮೂಲಕ ಸತ್ತ ಜೀವವನ್ನು ಉಳಿಸಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆ ವ್ಯಕ್ತಿ ತನ್ನ ಕೈಗಳಿಂದ ಬಲವಾಗಿ ಊಸರವಳ್ಳಿಯ ಎದೆಯನ್ನು ಪಂಪ್ ಮಾಡುತ್ತಲೇ ಇರುತ್ತಾರೆ. ಇದಾದ ಬಳಿಕ ಅವರು ತನ್ನ ಬಾಯಿಂದ ಅದರ ಬಾಯಿಗೆ ಉಸಿರು ನೀಡಿ , ಕೊನೆಗೆ ಪ್ರಥಮ ಚಿಕಿತ್ಸೆ ನೀಡಿ ಆ ಜೀವಿಗೆ ಮರುಜೀವವನ್ನು ನೀಡಿರುವುದನ್ನು ಕಾಣಬಹುದು.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ