AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಯಿಂದ ಬಾಯಿಗೆ ಉಸಿರು ಕೊಟ್ಟು ಊಸರವಳ್ಳಿಯ ಜೀವ ಉಳಿಸಿದ ವ್ಯಕ್ತಿ; ವಿಡಿಯೋ ವೈರಲ್​​​​

ಸಾಮಾನ್ಯವಾಗಿ ಹಲ್ಲಿ, ಜಿರಳೆ, ಈ ಊಸರವಳ್ಳಿಯಂತಹ ಜೀವಿಗಳನ್ನು ನೋಡಿದಾಗ 'ಛೀ.......' ಅಂತ ಅನ್ನುವವರೇ ಹೆಚ್ಚು. ಇದಲ್ಲದೇ ಇವುಗಳನ್ನು ನೋಡಿ ಹೆದರಿ ಓಡಿ ಹೋಗುವವರು ಇದ್ದಾರೆ. ಆದ್ರೆ ಇಲ್ಲೊಬ್ಬರು ಬಾಯಿಂದ ಬಾಯಿಗೆ ಉಸಿರು ನೀಡಿ ಊಸರವಳ್ಳಿಗೆ ಮರುಜೀವ ನೀಡಿದ್ದಾರೆ.

Viral Video: ಬಾಯಿಂದ ಬಾಯಿಗೆ ಉಸಿರು ಕೊಟ್ಟು ಊಸರವಳ್ಳಿಯ ಜೀವ ಉಳಿಸಿದ ವ್ಯಕ್ತಿ; ವಿಡಿಯೋ ವೈರಲ್​​​​
Viral VideoImage Credit source: twitter
TV9 Web
| Edited By: |

Updated on: Oct 12, 2023 | 10:46 AM

Share

ಸಾಮಾಜಿಕ ಜಾಲತಾಣ (Social Media) ದಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಕೆಲವೊಂದು ವಿಡಿಯೋಗಳು ನೆಟ್ಟಿಗರ ಮನ ಗೆಲ್ಲುತ್ತದೆ. ಅಂತದ್ದೇ ವಿಡಿಯೋ ಒಂದು ಇದೀಗಾ ಎಲ್ಲೆಡೆ ವೈರಲ್​ ಆಗಿದೆ. ಹೌದು ರಸ್ತೆ ಬದಿಯಲ್ಲಿ ಸತ್ತ ರೀತಿಯಲ್ಲಿ ಬಿದ್ದಿದ್ದ ಊಸರವಳ್ಳಿಗೆ(Chameleon) ಸಿಪಿಆರ್ ನೀಡಿ ರಕ್ಷಿಸಿದ ವಿಡಿಯೋ ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್(Viral)​ ಆಗಿದೆ. ಸಾಮಾನ್ಯವಾಗಿ ಹಲ್ಲಿ, ಜಿರಳೆ, ಈ ಊಸರವಳ್ಳಿಯಂತಹ ಜೀವಿಗಳನ್ನು ನೋಡಿದಾಗ ‘ಛೀ…….’ ಅಂತ ಅನ್ನುವವರೇ ಹೆಚ್ಚು. ಇದಲ್ಲದೇ ಇವುಗಳನ್ನು ನೋಡಿ ಹೆದರಿ ಓಡಿ ಹೋಗುವವರು ಇದ್ದಾರೆ. ಆದ್ರೆ ಇಲ್ಲೊಬ್ಬರು ಬಾಯಿಂದ ಬಾಯಿಗೆ ಉಸಿರು ನೀಡಿ ಊಸರವಳ್ಳಿಗೆ ಮರುಜೀವ ನೀಡಿದ್ದಾರೆ. ಹೃದಯ ಬಡಿತ ನಿಲ್ಲಿಸಿ ಹೆಣದಂತಿದ್ದ ಈ ಜೀವಿಗೆ ಮರು ಜೀವ ನೀಡಿ ತನ್ನ ಮನೆಯಲ್ಲಿಯೇ ಸಾಕು ಪ್ರಾಣಿಯಂತೆ ಮುದ್ದಾಗಿ ಸಾಕಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ‘ಮಾನವೀಯತೆ ಇನ್ನೂ ಭೂಮಿಯ ಮೇಲೆ ಅಸ್ತಿತ್ವದಲ್ಲಿದೆ’ ಎಂದು ಕಾಮೆಂಟ್​​​ ಮಾಡಿದ್ದಾರೆ.

ಸಿಪಿಆರ್ ನೀಡಿ ಊಸರವಳ್ಳಿಯ ಜೀವ ಉಳಿಸಿದ ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: 5 ಕೋಟಿ ರೂ ಬೆಲೆಯ ವಿಶ್ವದ ಅತ್ಯಂತ ದುಬಾರಿ ಹಾಸಿಗೆ; ಇದರ ವಿಶೇಷತೆ ಏನು ಗೊತ್ತಾ?

@TheFigen_ ಎಂಬ ಟ್ವಿಟರ್​​(‘X’) ಬಳಕೆದಾರರು ಈ ವಿಡಿಯೋವನ್ನು ಅಕ್ಟೋಬರ್​​​ 10 ರಂದು ಹಂಚಿಕೊಂಡಿದ್ದು, ಇದೀಗಾಗಲೇ ಕೇವಲ 2ದಿನಗಳಲ್ಲಿ 8.1 ಮಿಲಿಯನ್​​ ವೀಕ್ಷಣೆಯನ್ನು ಪಡೆದುಕೊಂಡಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಸಿಪಿಆರ್ ನೀಡುವ ಮೂಲಕ ಸತ್ತ ಜೀವವನ್ನು ಉಳಿಸಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆ ವ್ಯಕ್ತಿ ತನ್ನ ಕೈಗಳಿಂದ ಬಲವಾಗಿ ಊಸರವಳ್ಳಿಯ ಎದೆಯನ್ನು ಪಂಪ್ ಮಾಡುತ್ತಲೇ ಇರುತ್ತಾರೆ. ಇದಾದ ಬಳಿಕ ಅವರು ತನ್ನ ಬಾಯಿಂದ ಅದರ ಬಾಯಿಗೆ ಉಸಿರು ನೀಡಿ , ಕೊನೆಗೆ ಪ್ರಥಮ ಚಿಕಿತ್ಸೆ ನೀಡಿ ಆ ಜೀವಿಗೆ ಮರುಜೀವವನ್ನು ನೀಡಿರುವುದನ್ನು ಕಾಣಬಹುದು.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ