AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ವರ್ಷಗಳ ಹಿಂದೆ ಮಾವೋವಾದಿಗಳ ಬೆದರಿಕೆಯಿಂದ ಮುಚ್ಚಿದ್ದ ರಾಮಮಂದಿರ, ಇದೀಗ ಮತ್ತೆ ರೀಓಪನ್

ಒಟ್ಟಿನಲ್ಲಿ ಎರಡು ದಶಕಗಳ ಹಿಂದೆ ಮಾವೋವಾದಿಗಳಿಂದ ಮುಚ್ಚಿದ್ದ ರಾಮಮಂದಿರ ಸಿಆರ್ ಪಿಎಫ್ ನೆರವಿನಿಂದ ಕೊನೆಗೂ ತೆರೆದುಕೊಂಡಿದೆ. 21 ವರ್ಷಗಳಿಂದ ಮುಚ್ಚಿದ್ದ ರಾಮಮಂದಿರವನ್ನು ತೆರೆಯಲು ಕ್ರಮಕೈಗೊಂಡ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಕೇರಳಪೆಂಡ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

20 ವರ್ಷಗಳ  ಹಿಂದೆ ಮಾವೋವಾದಿಗಳ ಬೆದರಿಕೆಯಿಂದ ಮುಚ್ಚಿದ್ದ ರಾಮಮಂದಿರ, ಇದೀಗ ಮತ್ತೆ ರೀಓಪನ್
Chhattisgarh Sukma Ram Mandir Reopen
ಅಕ್ಷತಾ ವರ್ಕಾಡಿ
|

Updated on: Apr 10, 2024 | 10:43 AM

Share

ಛತ್ತೀಸ್‌ಗಢ: ನೂರಾರು ವರ್ಷಗಳ ಧಾರ್ಮಿಕ, ರಾಜಕೀಯ, ಕಾನೂನು ಹೋರಾಟದ 500 ವರ್ಷಗಳ ನಂತರ ರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿರುವುದು ಈಗಾಗಲೇ ತಿಳಿದಿರುವ ವಿಷಯ. ಇದೀಗಾ ಕಳೆದ 21 ವರ್ಷಗಳಿಂದ ಮುಚ್ಚಿದ್ದ ಛತ್ತೀಸ್‌ಗಢದ ಸುಖ್ಮಾ ಜಿಲ್ಲೆಯ ರಾಮಮಂದಿರವನ್ನು ಮತ್ತೆ ತೆರೆದಿದ್ದು, ಗ್ರಾಮದ ಪ್ರತೀ ಮನೆಯಲ್ಲೂ ಸಂಭ್ರಮ ಮನೆಮಾಡಿದೆ.

1970 ರಲ್ಲಿ ಬಿಹಾರಿ ಮಹಾರಾಜರು ಸುಕ್ಮಾ ಜಿಲ್ಲೆಯ ಲಖಪಾಲ್ ಮತ್ತು ಕೇರಳಪೆಂಡಾ ಗ್ರಾಮಗಳ ಬಳಿ ರಾಮ ಮಂದಿರವನ್ನು ನಿರ್ಮಿಸಿದರು. ಆದರೆ, ಮಾವೋವಾದಿಗಳು 2003ರಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡದ ಕಾರಣ ತಮ್ಮ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದಂತೆ ದೇವಸ್ಥಾನವನ್ನು ಮುಚ್ಚಿದ್ದರು. ಆದರೆ ಕಳೆದ ವರ್ಷ ಮಾರ್ಚ್‌ನಲ್ಲಿ ಕೇರಳಪೆಂಡಾ ಬಳಿ ಸಿಆರ್‌ಪಿಎಫ್ 74 ನೇ ಬೆಟಾಲಿಯನ್‌ಗಾಗಿ ಲಖಾಪಾಲ್ ಶಿಬಿರವನ್ನು ಸ್ಥಾಪಿಸಿದ್ದರು. ಈ ಕ್ರಮದಲ್ಲಿ ಗ್ರಾಮದಲ್ಲಿರುವ ಪುರಾತನ ರಾಮ ಮಂದಿರದ ಬಗ್ಗೆ ಗ್ರಾಮಸ್ಥರು ಸಿಆರ್ ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸಿಆರ್‌ಪಿಎಫ್ ಯೋಧರು ದೇವಾಲಯವನ್ನು ಮತ್ತೆ ತೆರೆದು ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ

ಸಿಆರ್‌ಪಿಎಫ್ ಯೋಧರು ರಾಮ ಮಂದಿರದ ಹಾಕಿದ್ದ ಬೀಗ ತೆರೆದು ದೇವಸ್ಥಾನದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಿ ಆ ಗ್ರಾಮದ ಜನರ ಸಹಕಾರದಿಂದ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ದೇವಸ್ಥಾನವನ್ನು ಗ್ರಾಮದ ಹಿರಿಯರಿಗೆ ಹಸ್ತಾಂತರಿಸಿದ್ದಾರೆ. ಇದಲ್ಲದೆ, ಮಾವೋವಾದಿ ಪ್ರಾಬಲ್ಯದ ಪ್ರದೇಶದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸಿಆರ್‌ಪಿಎಫ್ ಯೋಧರು ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಕ್ರಮದಲ್ಲಿ ಸಿಆರ್‌ಪಿಎಫ್ ಯೋಧರು ದೇವಸ್ಥಾನದ ಬಳಿಯಿದ್ದ ಮಾವೋವಾದಿಗಳ ಸ್ತೂಪವನ್ನೂ ಧ್ವಂಸಗೊಳಿಸಿದ್ದಾರೆ.

ಒಟ್ಟಿನಲ್ಲಿ ಎರಡು ದಶಕಗಳ ಹಿಂದೆ ಮಾವೋವಾದಿಗಳಿಂದ ಮುಚ್ಚಿದ್ದ ರಾಮಮಂದಿರ ಸಿಆರ್ ಪಿಎಫ್ ನೆರವಿನಿಂದ ಕೊನೆಗೂ ತೆರೆದುಕೊಂಡಿದೆ. 21 ವರ್ಷಗಳಿಂದ ಮುಚ್ಚಿದ್ದ ರಾಮಮಂದಿರವನ್ನು ತೆರೆಯಲು ಕ್ರಮಕೈಗೊಂಡ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಕೇರಳಪೆಂಡ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್