AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

200 ಕೆಜಿ ಚಾಕೊಲೇಟ್ ಬಳಸಿ ತಯಾರಿಸಿದ ಗಣೇಶನ ವಿಗ್ರಹವಿದು; ಈ ಮೂರ್ತಿಯ ವಿಸರ್ಜನೆ ಹೇಗೆ ಮಾಡುತ್ತಾರಂತೆ ಗೊತ್ತಾ?

ಗಣೇಶನ ಹಬ್ಬಕ್ಕೆ ವಿಶೇಷ ರೀತಿಯ ಗಣಪತಿ ಮೂರ್ತಿಗಳು ಗಮನ ಸೆಳೆಯುತ್ತವೆ. ಅದೇ ಮಾದರಿಯಲ್ಲಿ ಇಲ್ಲೊಬ್ಬರು 200 ಕೆಜಿ ಚಾಕಲೇಟ್ ಬಳಸಿ ಗಣೇಶನನ್ನು ತಯಾರಿಸಿದ್ದು, ಭಕ್ತರ ಮನಗೆದ್ದಿದೆ.

200 ಕೆಜಿ ಚಾಕೊಲೇಟ್ ಬಳಸಿ ತಯಾರಿಸಿದ ಗಣೇಶನ ವಿಗ್ರಹವಿದು; ಈ ಮೂರ್ತಿಯ ವಿಸರ್ಜನೆ ಹೇಗೆ ಮಾಡುತ್ತಾರಂತೆ ಗೊತ್ತಾ?
ಚಾಕೊಲೇಟ್ ಗಣೇಶ
TV9 Web
| Updated By: shivaprasad.hs|

Updated on:Sep 10, 2021 | 3:30 PM

Share

ಗಣೇಶ ಚತುರ್ಥಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ಭಕ್ತರು ಗಣಪತಿ ಹಬ್ಬದ ಆಚರಣೆಗಾಗಿ ಬಹಳ ಕಾಲದಿಂದ ಸಿದ್ಧತೆಯಲ್ಲಿ ಕಾರ್ಯನಿರತರಾಗಿರುತ್ತಾರೆ. ಅಂತಹ ಹತ್ತು ಹಲವು ವಿಶಿಷ್ಟ ಗಣಪತಿ ವಿಗ್ರಹಗಳು ಎಲ್ಲರ ಗಮನ ಸೆಳೆಯುತ್ತವೆ. ಇದೇ ಮಾದರಿಯಲ್ಲಿ ಚಾಕ್ಲೇಟ್‌ನಿಂದ ಮಾಡಿದ ಗಣೇಶನ ವಿಗ್ರಹವು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಚರ್ಚೆಯಾಗುತ್ತಿದ್ದು, ಎಲ್ಲರ ಗಮನ ಸೆಳೆದಿದೆ. ರೆಸ್ಟೋರೆಂಟ್ ಮತ್ತು ಚಾಕೊಲೇಟ್ ಉದ್ಯಮಿ ಹರ್ಜಿಂದರ್ ಸಿಂಗ್ ಕುಕ್ರೇಜಾ  ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಾಕೊಲೇಟ್ ಗಣೇಶ ವಿಗ್ರಹದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪಂಜಾಬ್​ನ ಲೂಧಿಯಾನದಲ್ಲಿರುವ ಬೇಕರಿ ಅಂಗಡಿಯಲ್ಲಿ ಚಾಕೊಲೇಟ್ ನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿ ಜನರಲ್ಲಿ ಆಕರ್ಷಣೆಯ ಕೇಂದ್ರವಾಗಿದೆ. ಬೇಕರಿ ಮಾಲೀಕ ಹರ್ಜಿಂದರ್ ಸಿಂಗ್ ಕುಕ್ರೇಜಾ ಈ ಕುರಿತು ಮಾತನಾಡಿ, ‘‘ನಾವು 6 ವರ್ಷಗಳಿಂದ ಚಾಕೊಲೇಟ್ ಗಣೇಶನನ್ನು ತಯಾರಿಸುತ್ತಿದ್ದೇವೆ. ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಬಹುದು ಎಂಬ ಸಂದೇಶವನ್ನು ಇದರ ಮೂಲಕ ನಾವು ತಿಳಿಸಲು ಪ್ರಯತ್ನಿಸುತ್ತಿದ್ದೇವೆ’’ ಎಂದಿದ್ದಾರೆ.

ಕುಕ್ರೇಜಾ ಈ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಲು ಹತ್ತು ದಿನಗಳ ಸಮಯ ಬೇಕಾಯಿತು ಎಂದಿದ್ದಾರೆ. 10 ಜನರು 10 ದಿನ ಶ್ರಮ ವಹಿಸಿ 200 ಕೆಜಿಗಿಂತ ಅಧಿಕ ಬೆಲ್ಜಿಯಂ ಡಾರ್ಕ್ ಚಾಕೊಲೇಟ್ ಬಳಸಿ ಇದನ್ನು ತಯಾರಿಸಿದ್ದಾರೆ. ‘‘ಇದು ಸುಲಭದ ಕೆಲಸವಾಗಿರಲಿಲ್ಲ. ಸಣ್ಣ ತಪ್ಪುಗಳಾದರೂ ಮತ್ತೆ ಹೊಸದಾಗಿ ಕೆಲಸ ಆರಂಭಿಸಬೇಕಾಗುತ್ತಿತ್ತು’’ ಎಂದು ಅವರು ಹೇಳಿದ್ದಾರೆ. ಆದರೆ ಚಾಕಲೇಟ್ ಗಣೇಶನನ್ನು ಬಹಳ ಆಸಕ್ತಿಯಿಂದ ಮಾಡಿದ್ದರಿಂದ ಎಲ್ಲಾ ಸವಾಲುಗಳನ್ನು ಕೂಡ ಇಷ್ಟಪಟ್ಟು ಎದುರಿಸಿದ್ದೇವೆ ಎಂದಿದ್ದಾರೆ ಕುಕ್ರೇಜಾ.

ಚಾಕಲೇಟ್ ಗಣೇಶನ ವಿಡಿಯೊ ಇಲ್ಲಿದೆ:

ಈ ಚಾಕಲೇಟ್ ಗಣೇಶನ ವಿಗ್ರಹವನ್ನು ಹೇಗೆ ವಿಸರ್ಜನೆ ಮಾಡಲಾಗುತ್ತದೆ ಎಂಬ ಅನುಮಾನ ಹಲವರಿಗೆ ಬರಬಹುದು. ಇದಕ್ಕೆ ಒಂದು ಸುಂದರ ಪರಿಕಲ್ಪನೆಯನ್ನು ಕುಕ್ರೇಜಾ ಮತ್ತು ತಂಡದವರು ತಯಾರಿಸಿದ್ದಾರೆ. ಅದೇನೆಂದರೆ, ಮೂರ್ತಿಯನ್ನು ಹಾಲಿನಲ್ಲಿ ಮುಳುಗಿಸಿ, ಅದನ್ನು ನಂತರ ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅದರಲ್ಲೂ ಚಾಕಲೇಟ್ ಹಾಲಿನ ರೂಪದಲ್ಲಿರುವ ಪ್ರಸಾದವನ್ನು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ನೀಡಲಾಗುವುದು ಎಂದು ಕುಕ್ರೇಜಾ ತಿಳಿಸಿದ್ದಾರೆ.

ಕುಕ್ರೇಜಾ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಒಳ್ಳೆಯ ಪರಿಕಲ್ಪನೆ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.

ಇದನ್ನೂ ಓದಿ:

ಕೋಲಾರ: ತಾಲಿಬಾನಿಗಳಿಗೆ, ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಬುದ್ಧಿ ಕಲಿಸುತ್ತಿರುವ ಪರಿಕಲ್ಪನೆಯಲ್ಲಿ ಗಣೇಶ

Vikrant Rona: ವಿಕ್ರಾಂತ್​ ರೋಣ ಗೆಟಪ್​ನಲ್ಲಿ ಕಂಗೊಳಿಸುತ್ತಿರುವ ಗಣೇಶ; ಹೇಗಿದೆ ನೋಡಿ ಸುದೀಪ್​ ಸಿನಿಮಾ ಕ್ರೇಜ್​

(Chocolate Ganesha got netizens attention here is the details)

Published On - 3:26 pm, Fri, 10 September 21

ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ