AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಲ್​​ಚೇರ್​ನಲ್ಲಿ ಕುಳಿತು 10 ಟನ್ ತೂಕದ ಟ್ರಕ್​ ಎಳೆಯುತ್ತಾರೆ ಈ ವ್ಯಕ್ತಿ

ಇಲ್ಲೊಬ್ಬ ಅಂಗವಿಕಲ ವ್ಯಕ್ತಿ ಎರಡು 10  ಟನ್​ ಭಾರದ ಟ್ರಕ್​ ಅನ್ನು ವೀಲ್​ಚೇರ್​ನಲ್ಲಿ ಕುಳಿತು ಎಳೆಯುತ್ತಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲಡೆ ವೈರಲ್​ ಆಗಿದೆ.

ವೀಲ್​​ಚೇರ್​ನಲ್ಲಿ ಕುಳಿತು 10 ಟನ್ ತೂಕದ ಟ್ರಕ್​ ಎಳೆಯುತ್ತಾರೆ ಈ ವ್ಯಕ್ತಿ
ಅಂಗವಿಕಲ ವ್ಯಕ್ತಿ
TV9 Web
| Updated By: Pavitra Bhat Jigalemane|

Updated on:Mar 15, 2022 | 3:09 PM

Share

ಆರೋಗ್ಯವಾಗಿರುವ ವ್ಯಕ್ತಿಗಳು ಸಾಹಸದ ತರಬೇತಿ ಪಡೆಯುವುದು ಸಾಮಾನ್ಯ. ಆದರೆ ಅಂಗವಿಕಲ ವ್ಯಕ್ತಿಗಳು ಸಾಹಸಕ್ಕೆ ತರಬೇತಿ ಪಡೆಯುವುದು ವಿಶಿಷ್ಟವಾಗಿದೆ. ಇಲ್ಲೊಬ್ಬ ಅಂಗವಿಕಲ ವ್ಯಕ್ತಿ (Disabled Man) ಎರಡು 10  ಟನ್​ ಭಾರದ ಟ್ರಕ್​ ಅನ್ನು ವೀಲ್​ಚೇರ್​ನಲ್ಲಿ (Wheelchair) ಕುಳಿತು ಎಳೆಯುತ್ತಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲಡೆ ವೈರಲ್​ ಆಗಿದೆ. ವೀಲ್​ ಚೇರ್​ ಮೇಲೆ ಕುಳಿತ ವ್ಯಕ್ತಿ ಭಾರ ಎತ್ತಿ ತರಬೇತಿ ಪಡೆಯುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Disabled man

ಡೇವಿಡ್ ವಾಲ್ಷ್, ಮೂರು ಮಕ್ಕಳ ತಂದೆ, 2012 ರಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಎನ್ನುವ ಕಾಯಿಲೆಗೆ ತುತ್ತಾಗಿದ್ದರು. ಸೈನ್ಯದಲ್ಲಿ ಕೆಲಸಮಾಡುತ್ತಿದ್ದ ಅವರು 2016ರಲ್ಲಿ ಸೇನೆಯನ್ನು ತೊರೆದು ದೈಹಿಕ ತರಬೇತಿ ಪಡೆಯಲು ಪ್ರಾರಂಭಿಸಿದರು. ಕೇವಲ ಐದು ವರ್ಷಗಳ ನಂತರ, ಅವರು ಹಲವು ಸ್ಟ್ರಾಂಗ್‌ಮ್ಯಾನ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. 2020ರಲ್ಲಿ, ಅವರು ವಿಶ್ವದ ಪ್ರಬಲ ಅಂಗವಿಕಲ ವ್ಯಕ್ತಿಯಲ್ಲಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದರು.

ಈ ವರ್ಷ, ಅವರು ಅಗ್ರಸ್ಥಾನದಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಹೊಂದಿದ್ದಾರೆ.  ಡೇವಿಡ್ ಇ​ತ್ತೀಚಿಗೆ ಎರಡು 10-ಟನ್ ಟ್ರಕ್‌ಗಳನ್ನು ಯಾವುದೇ ಸಹಾಯವಿಲ್ಲದೆ ತನ್ನ ಗಾಲಿಕುರ್ಚಿಯಲ್ಲಿ ಎಳೆದು ಸಾಧನೆ ಮಾಡಿದ್ದಾರೆ. ವಾಲ್ಷ್ ಅವರು ರೋಗ ಕಾಣಸಿಕೊಳ್ಳುವ ಮೊದಲು ಸ್ಟ್ರಾಂಗ್‌ಮೆನ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ 2014 ರಲ್ಲಿ ತರಬೇತಿ ಅವಧಿಯಲ್ಲಿ ಬಲಗೈ ನಿಶ್ಚೇಷ್ಟಿತವಾಗಿದೆ ಎಂದು ಅವರು ಭಾವಿಸಿದ ನಂತರ ಜೀವನ ಬದಲಾಗಿತ್ತು ಎನ್ನುತ್ತಾರೆ. ಈ ಕುರಿತು ಟೈಮ್ಸ್​ ನೌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:

ನಡು ರಸ್ತೆಯಲ್ಲಿ ಹೊತ್ತಿ ಉರಿದ ಕೋಟಿ ಮೌಲ್ಯದ ಮರ್ಸಿಡಿಸ್​ ಕಾರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Published On - 3:05 pm, Tue, 15 March 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?