ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್​ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ​ ಸಚಿವ

Veg Food in Nagaland : ನೋಡಿ ಇಲ್ಲಿ ಬೆಳೆದ ಸಾವಯವ ತರಕಾರಿ. ಆದರೂ ನಾವು ಫ್ರೆಂಚ್ ಫ್ರೈ ಹಿಂದೆ ಹೋಗುತ್ತೇವೆ ಎಂದಿದ್ದಾರೆ ನಾಗಾಲ್ಯಾಂಡ್​ ಸಚಿವರು. ಅಣ್ಣಾ, ಅಲ್ಲಿಯೇ ಕಾಯಂ ಆಗಿ ನೆಲೆಗೊಳ್ಳುವ ಮಾರ್ಗ ಯಾವುದೆಂದು ತಿಳಿಸಿ ಎಂದಿದ್ದಾರೆ ನೆಟ್ಟಿಗರು.

ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್​ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ​ ಸಚಿವ
Do you get veg food in Nagaland? Minister answers in new post on Twitter
Follow us
| Updated By: ಶ್ರೀದೇವಿ ಕಳಸದ

Updated on: Nov 14, 2022 | 6:15 PM

Viral : ನಾಗಾಲ್ಯಾಂಡ್​ನ ಸಚಿವ ತೆಮ್ಜೆನ್​​ ಇಮ್ನಾ ಅಲಾಂಗ್​ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಸ್ಯಪ್ರವೃತ್ತಿಯಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೇ ಎಂದು ಯಾರೋ ಕೇಳಿದ್ದಕ್ಕೆ ಅವರು ಕೊಟ್ಟ ತಾಜಾ ತಾಜಾ ಸಾಕ್ಷಿ ಹೇಗಿದೆ ನೋಡಿ! ಸೊಪ್ಪುಗಳು, ಸೋರೆಕಾಯಿ, ಅಣಬೆ, ಬದನೆಕಾಯಿ, ಎಳೆಬಿದಿರು, ಹಣ್ಣುಗಳು ಹೀಗೆ ಅಲ್ಲಿ ತರಕಾರಿ ಮಂಡಿಯನ್ನೇ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಇದನ್ನು ನೋಡಿ ಸುಸ್ತೋಸುಸ್ತು.

ತೆಮ್ಜೆನ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಾಲೋವರ್​ಗಳನ್ನ ಹೇಗೆ ಕಾಯ್ದುಕೊಳ್ಳಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ. ನವೆಂಬರ್ 13ರಂದು ಇವರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ನಿಮ್ಮ ನಾಗಾಲ್ಯಾಂಡ್​ನಲ್ಲಿ ತರಕಾರಿ ಸಿಗುತ್ತದೆಯೆ ಎಂದು ಯಾರೋ ಕೇಳಿದ್ದಕ್ಕೆ ಅವರು ಹೀಗೆ ಟ್ವೀಟ್ ಮಾಡಿದ್ದಾರೆ, ‘ಇಷ್ಟೆಲ್ಲ ಸಾವಯವ ತರಕಾರಿ, ಹಣ್ಣು, ಸೊಪ್ಪುಗಳಿದ್ದಾಗಲೂ ನಾವು ಫ್ರೆಂಚ್ ಫ್ರೈಗೆ ಮಾರುಹೋಗುತ್ತೇವೆ. ನೋಡಿ ನಾಗಾಲ್ಯಾಂಡ್​ನ ತರಕಾರಿ’ ಎಂದಿದ್ದಾರೆ. ​

ಅಬ್ಬಾ ಎಷ್ಟು ತಾಜಾತನದಿಂದ ಇದೆಲ್ಲವೂ ಕೂಡಿದೆ. ಅಷ್ಟೊಂದು ಚೆನ್ನಾಗಿ ಬಾಳೆ ಎಲೆ ಮೇಲೆ ಹರಡಿಕೊಂಡು ಸುತ್ತಿಕೊಂಡು ಇರುವ ಈ ಎಲ್ಲವನ್ನ ನೋಡುವುದೇ ಆನಂದ ಎಂದಿದ್ದಾರೆ ಒಬ್ಬರು. ಆಸೆಯಾಗುತ್ತಿದೆ ಇದೆಲ್ಲವನ್ನು ನೋಡುತ್ತಿದ್ದರೆ ಎಂದಿದ್ದಾರೆ ಇನ್ನೊಬ್ಬರು.

ಹೌದು! ಈ ತರಕಾರಿಗಳು ರೈತರಿಂದ ನೇರ ಮಾರಾಟ ಸ್ಥಳಕ್ಕೆ ಬಂದಂಥವು ಎಂದಿದ್ದಾರೆ ಮಗದೊಬ್ಬರು. ಅಣ್ಣಾ, ದಯವಿಟ್ಟು ಝೊಮ್ಯಾಟೋ ಮೂಲಕ ಆನ್​ಲೈನ್​ ಡೆಲಿವರಿ ಮಾಡಿ. ಇಂದು ಬೆಳೆದಿದ್ದನ್ನು ನಾಳೆ ಸಿಗುವಂತೆ ಮಾಡಿ ಎನ್ನುತ್ತಿದ್ದಾರೆ ಇನ್ನೊಬ್ಬರು. ಸರ್​, ನಿಮ್ಮ ಊರಿಗೆ ಶಿಫ್ಟ್​ ಆಗಲು ಏನು ಪ್ರೊಸೀಜರ್ ಇದೆ ಎಂದು ಕೇಳಿದ್ದಾರೆ ಇನ್ನೊಬ್ಬರು. ನಿಮ್ಮನ್ನು ನಾಗಾಲ್ಯಾಂಡ್​ನಲ್ಲಿ ಎಲ್ಲಿ ಭೇಟಿ ಮಾಡಬೇಕು ಎಂದಿದ್ದಾರೆ ಯಾರೋ ಒಬ್ಬರು. ಇದೆಲ್ಲ ನೋಡಿ ಫ್ರೆಂಚ್​ ಫ್ರೈಸ್​ ಓಡಿ ಹೋಗುತ್ತದೆ ಎಂದಿದ್ದಾರೆ ಮಗದೊಬ್ಬರು.

ಏನೀಗ ನೀವು ನಾಗಾಲ್ಯಾಂಡ್​ಗೆ ಹೋಗಬೇಕು ಎಂದುಕೊಳ್ಳುತ್ತಿದ್ದೀರೋ ಹೇಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ