AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್​ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ​ ಸಚಿವ

Veg Food in Nagaland : ನೋಡಿ ಇಲ್ಲಿ ಬೆಳೆದ ಸಾವಯವ ತರಕಾರಿ. ಆದರೂ ನಾವು ಫ್ರೆಂಚ್ ಫ್ರೈ ಹಿಂದೆ ಹೋಗುತ್ತೇವೆ ಎಂದಿದ್ದಾರೆ ನಾಗಾಲ್ಯಾಂಡ್​ ಸಚಿವರು. ಅಣ್ಣಾ, ಅಲ್ಲಿಯೇ ಕಾಯಂ ಆಗಿ ನೆಲೆಗೊಳ್ಳುವ ಮಾರ್ಗ ಯಾವುದೆಂದು ತಿಳಿಸಿ ಎಂದಿದ್ದಾರೆ ನೆಟ್ಟಿಗರು.

ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್​ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ​ ಸಚಿವ
Do you get veg food in Nagaland? Minister answers in new post on Twitter
TV9 Web
| Edited By: |

Updated on: Nov 14, 2022 | 6:15 PM

Share

Viral : ನಾಗಾಲ್ಯಾಂಡ್​ನ ಸಚಿವ ತೆಮ್ಜೆನ್​​ ಇಮ್ನಾ ಅಲಾಂಗ್​ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಸ್ಯಪ್ರವೃತ್ತಿಯಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೇ ಎಂದು ಯಾರೋ ಕೇಳಿದ್ದಕ್ಕೆ ಅವರು ಕೊಟ್ಟ ತಾಜಾ ತಾಜಾ ಸಾಕ್ಷಿ ಹೇಗಿದೆ ನೋಡಿ! ಸೊಪ್ಪುಗಳು, ಸೋರೆಕಾಯಿ, ಅಣಬೆ, ಬದನೆಕಾಯಿ, ಎಳೆಬಿದಿರು, ಹಣ್ಣುಗಳು ಹೀಗೆ ಅಲ್ಲಿ ತರಕಾರಿ ಮಂಡಿಯನ್ನೇ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಇದನ್ನು ನೋಡಿ ಸುಸ್ತೋಸುಸ್ತು.

ತೆಮ್ಜೆನ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಾಲೋವರ್​ಗಳನ್ನ ಹೇಗೆ ಕಾಯ್ದುಕೊಳ್ಳಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ. ನವೆಂಬರ್ 13ರಂದು ಇವರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ನಿಮ್ಮ ನಾಗಾಲ್ಯಾಂಡ್​ನಲ್ಲಿ ತರಕಾರಿ ಸಿಗುತ್ತದೆಯೆ ಎಂದು ಯಾರೋ ಕೇಳಿದ್ದಕ್ಕೆ ಅವರು ಹೀಗೆ ಟ್ವೀಟ್ ಮಾಡಿದ್ದಾರೆ, ‘ಇಷ್ಟೆಲ್ಲ ಸಾವಯವ ತರಕಾರಿ, ಹಣ್ಣು, ಸೊಪ್ಪುಗಳಿದ್ದಾಗಲೂ ನಾವು ಫ್ರೆಂಚ್ ಫ್ರೈಗೆ ಮಾರುಹೋಗುತ್ತೇವೆ. ನೋಡಿ ನಾಗಾಲ್ಯಾಂಡ್​ನ ತರಕಾರಿ’ ಎಂದಿದ್ದಾರೆ. ​

ಅಬ್ಬಾ ಎಷ್ಟು ತಾಜಾತನದಿಂದ ಇದೆಲ್ಲವೂ ಕೂಡಿದೆ. ಅಷ್ಟೊಂದು ಚೆನ್ನಾಗಿ ಬಾಳೆ ಎಲೆ ಮೇಲೆ ಹರಡಿಕೊಂಡು ಸುತ್ತಿಕೊಂಡು ಇರುವ ಈ ಎಲ್ಲವನ್ನ ನೋಡುವುದೇ ಆನಂದ ಎಂದಿದ್ದಾರೆ ಒಬ್ಬರು. ಆಸೆಯಾಗುತ್ತಿದೆ ಇದೆಲ್ಲವನ್ನು ನೋಡುತ್ತಿದ್ದರೆ ಎಂದಿದ್ದಾರೆ ಇನ್ನೊಬ್ಬರು.

ಹೌದು! ಈ ತರಕಾರಿಗಳು ರೈತರಿಂದ ನೇರ ಮಾರಾಟ ಸ್ಥಳಕ್ಕೆ ಬಂದಂಥವು ಎಂದಿದ್ದಾರೆ ಮಗದೊಬ್ಬರು. ಅಣ್ಣಾ, ದಯವಿಟ್ಟು ಝೊಮ್ಯಾಟೋ ಮೂಲಕ ಆನ್​ಲೈನ್​ ಡೆಲಿವರಿ ಮಾಡಿ. ಇಂದು ಬೆಳೆದಿದ್ದನ್ನು ನಾಳೆ ಸಿಗುವಂತೆ ಮಾಡಿ ಎನ್ನುತ್ತಿದ್ದಾರೆ ಇನ್ನೊಬ್ಬರು. ಸರ್​, ನಿಮ್ಮ ಊರಿಗೆ ಶಿಫ್ಟ್​ ಆಗಲು ಏನು ಪ್ರೊಸೀಜರ್ ಇದೆ ಎಂದು ಕೇಳಿದ್ದಾರೆ ಇನ್ನೊಬ್ಬರು. ನಿಮ್ಮನ್ನು ನಾಗಾಲ್ಯಾಂಡ್​ನಲ್ಲಿ ಎಲ್ಲಿ ಭೇಟಿ ಮಾಡಬೇಕು ಎಂದಿದ್ದಾರೆ ಯಾರೋ ಒಬ್ಬರು. ಇದೆಲ್ಲ ನೋಡಿ ಫ್ರೆಂಚ್​ ಫ್ರೈಸ್​ ಓಡಿ ಹೋಗುತ್ತದೆ ಎಂದಿದ್ದಾರೆ ಮಗದೊಬ್ಬರು.

ಏನೀಗ ನೀವು ನಾಗಾಲ್ಯಾಂಡ್​ಗೆ ಹೋಗಬೇಕು ಎಂದುಕೊಳ್ಳುತ್ತಿದ್ದೀರೋ ಹೇಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ