AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?

Dog and Cat : ಈ ನಾಯಿ ಎಲ್ಲಿಂದಲೋ ಮರದ ತುಂಡನ್ನು ತಂದಿಟ್ಟಿದೆ. ಮರಿಬೆಕ್ಕು ದಾಟಿ ದಡ ತಲುಪಿದೆ. ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ. ಆದರೆ ನೆಟ್ಟಿಗರ ವಾದವೇನು ಈ ಬಗ್ಗೆ?

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?
Dog uses a plank to help kitten stuck in water
TV9 Web
| Edited By: |

Updated on: Nov 14, 2022 | 1:12 PM

Share

Viral Video : ಈತನಕ 1.8 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಣ್ಣ ತೊರೆಯ ಮಧ್ಯೆ ಬೆಕ್ಕಿನಮರಿಯೊಂದು ಸಿಕ್ಕಿಹಾಕಿಕೊಂಡುಬಿಟ್ಟಿದೆ. ಕಲ್ಲಿನ ಮೇಲೆ ನಿಂತು ಅತ್ತೂ ದಾಟದೆ ಇತ್ತೂ ದಾಟದೆ ಕಂಗಾಲಾಗಿದೆ. ಅಲ್ಲಿಗೆ ಬಂದ ನಾಯಿಯೊಂದು ಮರದ ತುಂಡನ್ನು ತಂದು ನೀರನ್ನು ದಾಟಲು ಸಹಾಯ ಮಾಡಿದೆ. ಈ ವಿಡಿಯೋ ನೋಡಿದ ಯಾರಿಗೂ ಆಹಾ ಎನ್ನಿಸದೇ ಇರದು. ಒಮ್ಮೆ ನಾಯಿಯನ್ನು ಮುದ್ದಾಡಬೇಕು ಎನ್ನಿಸದೇ ಇರದು. ಹಾಗೆಯೇ ಬೆಕ್ಕನ್ನು ಬೆಚ್ಚಗೆ ಎತ್ತಿಕೊಳ್ಳಬೇಕು ಎನ್ನಿಸದೇ ಇರದು. ವಿಡಿಯೋ ನೋಡಿ.

ಎಷ್ಟೊತ್ತಿನಿಂದ ಈ ಮರಿಬೆಕ್ಕು ಹೀಗೆ ನಟ್ಟನಡುವೆ ನಿಂತುಕೊಂಡಿತ್ತೋ, ನಿಂತು ಹೆದರಿತ್ತೋ ಗೊತ್ತಿಲ್ಲ. ಅಂತೂ ಈ ನಾಯಿ ಮರದ ತುಂಡನ್ನು ಎಲ್ಲಿಂದಲೋ ಹುಡುಕಿಕೊಂಡು ಬಂದಿದೆ. ಸರಾಗವಾಗಿ ಬೆಕ್ಕು ದಾಟಿದೆ. ಹೀಗೆಂದುಕೊಳ್ಳುತ್ತ ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮರುಗಿದ್ದೀರಿ, ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ.

ಆದರೆ ನೆಟ್ಟಿಗರು ಮಾತ್ರ ಇದನ್ನು ನೋಡಿ ಕೋಪಿಸಿಕೊಂಡಿದ್ದಾರೆ. ಈ ಮರಿಬೆಕ್ಕನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು, ಇಂಥ ವಿಡಿಯೋಗಳನ್ನು ನೋಡಲು ಜನರನ್ನು ಪ್ರೋತ್ಸಾಹಿಸಬೇಡಿ. ಈ ವಿಡಿಯೋ ಮಾಡುವಾಗ ಅದೆಷ್ಟು ಹೊತ್ತಿನಿಂದ ಮರಿಬೆಕ್ಕಿಗೆ ಹೀಗೆ ಹಿಂಸೆ ಕೊಟ್ಟಿದ್ದಾರೋ ಏನೋ. ಜನ ಲೈಕ್ಸ್​​, ಶೇರ್​ ಮೂಲಕ ಹಣ ಏನೆಲ್ಲ ಮಾಡಲೂ ತಯಾರು ಎಂದಿದ್ದಾರೆ.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ