AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?

Dog and Cat : ಈ ನಾಯಿ ಎಲ್ಲಿಂದಲೋ ಮರದ ತುಂಡನ್ನು ತಂದಿಟ್ಟಿದೆ. ಮರಿಬೆಕ್ಕು ದಾಟಿ ದಡ ತಲುಪಿದೆ. ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ. ಆದರೆ ನೆಟ್ಟಿಗರ ವಾದವೇನು ಈ ಬಗ್ಗೆ?

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?
Dog uses a plank to help kitten stuck in water
TV9 Web
| Edited By: |

Updated on: Nov 14, 2022 | 1:12 PM

Share

Viral Video : ಈತನಕ 1.8 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಣ್ಣ ತೊರೆಯ ಮಧ್ಯೆ ಬೆಕ್ಕಿನಮರಿಯೊಂದು ಸಿಕ್ಕಿಹಾಕಿಕೊಂಡುಬಿಟ್ಟಿದೆ. ಕಲ್ಲಿನ ಮೇಲೆ ನಿಂತು ಅತ್ತೂ ದಾಟದೆ ಇತ್ತೂ ದಾಟದೆ ಕಂಗಾಲಾಗಿದೆ. ಅಲ್ಲಿಗೆ ಬಂದ ನಾಯಿಯೊಂದು ಮರದ ತುಂಡನ್ನು ತಂದು ನೀರನ್ನು ದಾಟಲು ಸಹಾಯ ಮಾಡಿದೆ. ಈ ವಿಡಿಯೋ ನೋಡಿದ ಯಾರಿಗೂ ಆಹಾ ಎನ್ನಿಸದೇ ಇರದು. ಒಮ್ಮೆ ನಾಯಿಯನ್ನು ಮುದ್ದಾಡಬೇಕು ಎನ್ನಿಸದೇ ಇರದು. ಹಾಗೆಯೇ ಬೆಕ್ಕನ್ನು ಬೆಚ್ಚಗೆ ಎತ್ತಿಕೊಳ್ಳಬೇಕು ಎನ್ನಿಸದೇ ಇರದು. ವಿಡಿಯೋ ನೋಡಿ.

ಎಷ್ಟೊತ್ತಿನಿಂದ ಈ ಮರಿಬೆಕ್ಕು ಹೀಗೆ ನಟ್ಟನಡುವೆ ನಿಂತುಕೊಂಡಿತ್ತೋ, ನಿಂತು ಹೆದರಿತ್ತೋ ಗೊತ್ತಿಲ್ಲ. ಅಂತೂ ಈ ನಾಯಿ ಮರದ ತುಂಡನ್ನು ಎಲ್ಲಿಂದಲೋ ಹುಡುಕಿಕೊಂಡು ಬಂದಿದೆ. ಸರಾಗವಾಗಿ ಬೆಕ್ಕು ದಾಟಿದೆ. ಹೀಗೆಂದುಕೊಳ್ಳುತ್ತ ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮರುಗಿದ್ದೀರಿ, ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ.

ಆದರೆ ನೆಟ್ಟಿಗರು ಮಾತ್ರ ಇದನ್ನು ನೋಡಿ ಕೋಪಿಸಿಕೊಂಡಿದ್ದಾರೆ. ಈ ಮರಿಬೆಕ್ಕನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು, ಇಂಥ ವಿಡಿಯೋಗಳನ್ನು ನೋಡಲು ಜನರನ್ನು ಪ್ರೋತ್ಸಾಹಿಸಬೇಡಿ. ಈ ವಿಡಿಯೋ ಮಾಡುವಾಗ ಅದೆಷ್ಟು ಹೊತ್ತಿನಿಂದ ಮರಿಬೆಕ್ಕಿಗೆ ಹೀಗೆ ಹಿಂಸೆ ಕೊಟ್ಟಿದ್ದಾರೋ ಏನೋ. ಜನ ಲೈಕ್ಸ್​​, ಶೇರ್​ ಮೂಲಕ ಹಣ ಏನೆಲ್ಲ ಮಾಡಲೂ ತಯಾರು ಎಂದಿದ್ದಾರೆ.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ