AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?

Dog and Cat : ಈ ನಾಯಿ ಎಲ್ಲಿಂದಲೋ ಮರದ ತುಂಡನ್ನು ತಂದಿಟ್ಟಿದೆ. ಮರಿಬೆಕ್ಕು ದಾಟಿ ದಡ ತಲುಪಿದೆ. ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ. ಆದರೆ ನೆಟ್ಟಿಗರ ವಾದವೇನು ಈ ಬಗ್ಗೆ?

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?
Dog uses a plank to help kitten stuck in water
TV9 Web
| Edited By: ಶ್ರೀದೇವಿ ಕಳಸದ|

Updated on: Nov 14, 2022 | 1:12 PM

Share

Viral Video : ಈತನಕ 1.8 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಣ್ಣ ತೊರೆಯ ಮಧ್ಯೆ ಬೆಕ್ಕಿನಮರಿಯೊಂದು ಸಿಕ್ಕಿಹಾಕಿಕೊಂಡುಬಿಟ್ಟಿದೆ. ಕಲ್ಲಿನ ಮೇಲೆ ನಿಂತು ಅತ್ತೂ ದಾಟದೆ ಇತ್ತೂ ದಾಟದೆ ಕಂಗಾಲಾಗಿದೆ. ಅಲ್ಲಿಗೆ ಬಂದ ನಾಯಿಯೊಂದು ಮರದ ತುಂಡನ್ನು ತಂದು ನೀರನ್ನು ದಾಟಲು ಸಹಾಯ ಮಾಡಿದೆ. ಈ ವಿಡಿಯೋ ನೋಡಿದ ಯಾರಿಗೂ ಆಹಾ ಎನ್ನಿಸದೇ ಇರದು. ಒಮ್ಮೆ ನಾಯಿಯನ್ನು ಮುದ್ದಾಡಬೇಕು ಎನ್ನಿಸದೇ ಇರದು. ಹಾಗೆಯೇ ಬೆಕ್ಕನ್ನು ಬೆಚ್ಚಗೆ ಎತ್ತಿಕೊಳ್ಳಬೇಕು ಎನ್ನಿಸದೇ ಇರದು. ವಿಡಿಯೋ ನೋಡಿ.

ಎಷ್ಟೊತ್ತಿನಿಂದ ಈ ಮರಿಬೆಕ್ಕು ಹೀಗೆ ನಟ್ಟನಡುವೆ ನಿಂತುಕೊಂಡಿತ್ತೋ, ನಿಂತು ಹೆದರಿತ್ತೋ ಗೊತ್ತಿಲ್ಲ. ಅಂತೂ ಈ ನಾಯಿ ಮರದ ತುಂಡನ್ನು ಎಲ್ಲಿಂದಲೋ ಹುಡುಕಿಕೊಂಡು ಬಂದಿದೆ. ಸರಾಗವಾಗಿ ಬೆಕ್ಕು ದಾಟಿದೆ. ಹೀಗೆಂದುಕೊಳ್ಳುತ್ತ ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮರುಗಿದ್ದೀರಿ, ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ.

ಆದರೆ ನೆಟ್ಟಿಗರು ಮಾತ್ರ ಇದನ್ನು ನೋಡಿ ಕೋಪಿಸಿಕೊಂಡಿದ್ದಾರೆ. ಈ ಮರಿಬೆಕ್ಕನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು, ಇಂಥ ವಿಡಿಯೋಗಳನ್ನು ನೋಡಲು ಜನರನ್ನು ಪ್ರೋತ್ಸಾಹಿಸಬೇಡಿ. ಈ ವಿಡಿಯೋ ಮಾಡುವಾಗ ಅದೆಷ್ಟು ಹೊತ್ತಿನಿಂದ ಮರಿಬೆಕ್ಕಿಗೆ ಹೀಗೆ ಹಿಂಸೆ ಕೊಟ್ಟಿದ್ದಾರೋ ಏನೋ. ಜನ ಲೈಕ್ಸ್​​, ಶೇರ್​ ಮೂಲಕ ಹಣ ಏನೆಲ್ಲ ಮಾಡಲೂ ತಯಾರು ಎಂದಿದ್ದಾರೆ.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?