ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?

Dog and Cat : ಈ ನಾಯಿ ಎಲ್ಲಿಂದಲೋ ಮರದ ತುಂಡನ್ನು ತಂದಿಟ್ಟಿದೆ. ಮರಿಬೆಕ್ಕು ದಾಟಿ ದಡ ತಲುಪಿದೆ. ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ. ಆದರೆ ನೆಟ್ಟಿಗರ ವಾದವೇನು ಈ ಬಗ್ಗೆ?

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?
Dog uses a plank to help kitten stuck in water
Follow us
| Updated By: ಶ್ರೀದೇವಿ ಕಳಸದ

Updated on: Nov 14, 2022 | 1:12 PM

Viral Video : ಈತನಕ 1.8 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಣ್ಣ ತೊರೆಯ ಮಧ್ಯೆ ಬೆಕ್ಕಿನಮರಿಯೊಂದು ಸಿಕ್ಕಿಹಾಕಿಕೊಂಡುಬಿಟ್ಟಿದೆ. ಕಲ್ಲಿನ ಮೇಲೆ ನಿಂತು ಅತ್ತೂ ದಾಟದೆ ಇತ್ತೂ ದಾಟದೆ ಕಂಗಾಲಾಗಿದೆ. ಅಲ್ಲಿಗೆ ಬಂದ ನಾಯಿಯೊಂದು ಮರದ ತುಂಡನ್ನು ತಂದು ನೀರನ್ನು ದಾಟಲು ಸಹಾಯ ಮಾಡಿದೆ. ಈ ವಿಡಿಯೋ ನೋಡಿದ ಯಾರಿಗೂ ಆಹಾ ಎನ್ನಿಸದೇ ಇರದು. ಒಮ್ಮೆ ನಾಯಿಯನ್ನು ಮುದ್ದಾಡಬೇಕು ಎನ್ನಿಸದೇ ಇರದು. ಹಾಗೆಯೇ ಬೆಕ್ಕನ್ನು ಬೆಚ್ಚಗೆ ಎತ್ತಿಕೊಳ್ಳಬೇಕು ಎನ್ನಿಸದೇ ಇರದು. ವಿಡಿಯೋ ನೋಡಿ.

ಎಷ್ಟೊತ್ತಿನಿಂದ ಈ ಮರಿಬೆಕ್ಕು ಹೀಗೆ ನಟ್ಟನಡುವೆ ನಿಂತುಕೊಂಡಿತ್ತೋ, ನಿಂತು ಹೆದರಿತ್ತೋ ಗೊತ್ತಿಲ್ಲ. ಅಂತೂ ಈ ನಾಯಿ ಮರದ ತುಂಡನ್ನು ಎಲ್ಲಿಂದಲೋ ಹುಡುಕಿಕೊಂಡು ಬಂದಿದೆ. ಸರಾಗವಾಗಿ ಬೆಕ್ಕು ದಾಟಿದೆ. ಹೀಗೆಂದುಕೊಳ್ಳುತ್ತ ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮರುಗಿದ್ದೀರಿ, ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ.

ಆದರೆ ನೆಟ್ಟಿಗರು ಮಾತ್ರ ಇದನ್ನು ನೋಡಿ ಕೋಪಿಸಿಕೊಂಡಿದ್ದಾರೆ. ಈ ಮರಿಬೆಕ್ಕನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು, ಇಂಥ ವಿಡಿಯೋಗಳನ್ನು ನೋಡಲು ಜನರನ್ನು ಪ್ರೋತ್ಸಾಹಿಸಬೇಡಿ. ಈ ವಿಡಿಯೋ ಮಾಡುವಾಗ ಅದೆಷ್ಟು ಹೊತ್ತಿನಿಂದ ಮರಿಬೆಕ್ಕಿಗೆ ಹೀಗೆ ಹಿಂಸೆ ಕೊಟ್ಟಿದ್ದಾರೋ ಏನೋ. ಜನ ಲೈಕ್ಸ್​​, ಶೇರ್​ ಮೂಲಕ ಹಣ ಏನೆಲ್ಲ ಮಾಡಲೂ ತಯಾರು ಎಂದಿದ್ದಾರೆ.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್