AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಡಿ ಮಳೆಯನ್ನೂ ಲೆಕ್ಕಿಸದೆ ಪಿಜ್ಝಾ ಡೆಲಿವರಿ; ಟ್ವಿಟರ್​ನಲ್ಲಿ ಜೋರಾಯ್ತು ಪರ-ವಿರೋಧ ಚರ್ಚೆ

ಡಾಮಿನೋಸ್ ಸಂಸ್ಥೆ ಡೆಲಿವರಿ ಬಾಯ್ ಶೊವೊನ್ ಘೋಶ್, ಕೋಲ್ಕತ್ತಾದಲ್ಲಿ ಸುರಿದ ಮಳೆಯನ್ನೂ ಲೆಕ್ಕಿಸದೆ, ಮಳೆ ನೀರಿನಿಂದ ತುಂಬಿಹೋದ ರಸ್ತೆಯಲ್ಲಿ ನಿಂತಿರುವ ಫೊಟೊ ಹಂಚಿಕೊಂಡಿದೆ. ಆ ಮೂಲಕ ಆತನಿಗೆ ಅಭಿನಂದನೆ ಸಲ್ಲಿಸಿದೆ.

ಜಡಿ ಮಳೆಯನ್ನೂ ಲೆಕ್ಕಿಸದೆ ಪಿಜ್ಝಾ ಡೆಲಿವರಿ; ಟ್ವಿಟರ್​ನಲ್ಲಿ ಜೋರಾಯ್ತು ಪರ-ವಿರೋಧ ಚರ್ಚೆ
ಡಾಮಿನೋಸ್ ಪಿಜ್ಝಾ ಡೆಲಿವರಿ ಬಾಯ್
TV9 Web
| Edited By: |

Updated on:Aug 23, 2021 | 12:32 PM

Share

ಬಹುರಾಷ್ಟ್ರೀಯ ಪಿಜ್ಝಾ ಕಂಪೆನಿ ಡಾಮಿನೋಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ವ್ಯಕ್ತವಾಗಿದೆ. ಪಿಜ್ಝಾ ಡೆಲಿವರಿ ಬಾಯ್‌ಯನ್ನು ಹೀಗೆ ಬಳಸಿಕೊಂಡಿರುವುದು ಕೆಲವರು ಸರಿ ಎಂದು ಮತ್ತೆ ಕೆಲವರು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ನಡೆದ ಘಟನೆ ಏನು ಎಂಬ ವಿವರ ಇಲ್ಲಿದೆ.‌ ಕೋಲ್ಕತ್ತಾದಲ್ಲಿ ಸುರಿದ ಭಾರೀ ಮಳೆಯ ನಡುವೆಯೂ ಡಾಮಿನೋಸ್ ಪಿಜ್ಝಾ ಡೆಲಿವರಿ ಬಾಯ್ ತನ್ನ ಗ್ರಾಹಕನಿಗೆ ಪಿಜ್ಝಾ ಡೆಲಿವರಿ ಮಾಡಿದ್ದಾನೆ‌. ಅಂಥಾ ಮಳೆಯಲ್ಲೂ ಸೇವೆ ಒದಗಿಸಿರುವುದಕ್ಕೆ ಡಾಮಿನೋಸ್ ಸಂಸ್ಥೆ ಡೆಲಿವರಿ ಬಾಯ್‌ ಫೊಟೊ ಹಂಚಿಕೊಂಡು ಅಭಿನಂದಿಸಿದೆ. ಆದರೆ, ನೆಟ್ಟಿಗರಲ್ಲಿ ಈ ಬಗ್ಗೆ ಪರ-ವಿರೋಧದ ಅಭಿಪ್ರಾಯ ಕೇಳಿಬಂದಿದೆ.

ಡಾಮಿನೋಸ್ ಸಂಸ್ಥೆ ಡೆಲಿವರಿ ಬಾಯ್ ಶೊವೊನ್ ಘೋಶ್, ಕೋಲ್ಕತ್ತಾದಲ್ಲಿ ಸುರಿದ ಮಳೆಯನ್ನೂ ಲೆಕ್ಕಿಸದೆ, ಮಳೆ ನೀರಿನಿಂದ ತುಂಬಿಹೋದ ರಸ್ತೆಯಲ್ಲಿ ನಿಂತಿರುವ ಫೊಟೊ ಹಂಚಿಕೊಂಡಿದೆ. ಆ ಮೂಲಕ ಆತನಿಗೆ ಅಭಿನಂದನೆ ಸಲ್ಲಿಸಿದೆ. ಸೈನಿಕನು ಯಾವತ್ತೂ ಆಫ್ ಡ್ಯೂಟಿಯಲ್ಲಿ ಇರುವುದಿಲ್ಲ. ನಮ್ಮವರು ಬಿಸಿಯಾದ, ಶುಚಿಯಾದ, ರುಚಿಯಾದ ಆಹಾರ ಒದಗಿಸುತ್ತಾರೆ. ನಾವು ನಮ್ಮ ಫುಡ್ ಡೆಲಿವರಿ ಬಾಯ್ ಶೊವೊನ್ ಘೋಶ್‌ಗೆ, ಕಠಿಣ ಪರಿಸ್ಥಿತಿಯಲ್ಲೂ ಆಹಾರ ಒದಗಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಡಾಮಿನೋಸ್ ಸಂಸ್ಥೆ ತನ್ನ ಟ್ವೀಟ್‌ನಲ್ಲಿ ಹೇಳಿದೆ. #DominosFoodSloldier ಎಂಬ ಹ್ಯಾಷ್ ಟ್ಯಾಗ್‌ನ್ನು ಕೂಡ ಬಳಕೆ ಮಾಡಿದೆ.

ಈ ಟ್ವೀಟ್‌ಗೆ ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಕಾರ್ಮಿಕ ಕಾನೂನಿನ ಉಲ್ಲಂಘನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದರಲ್ಲಿ ಹೆಮ್ಮೆ ಪಡುವಂಥದ್ದು ಏನೂ ಇಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಆತನನ್ನು ಅಭಿನಂದಿಸಿ ಬರೆದುಕೊಂಡಿದ್ದಾರೆ. ತನ್ನ ಕೆಲಸದ ಬಗ್ಗೆ ಡೆಲಿವರಿ ಬಾಯ್‌ಗೆ ಇರುವ ಶ್ರದ್ಧೆಯನ್ನು ಕೆಲವರು ಕೊಂಡಾಡಿದ್ದಾರೆ.

ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದನ್ನೂ ಓದಿ: ವಾಗ್ವಾದಕ್ಕಿಳಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್, ಫುಡ್ ಡೆಲಿವರಿ ಬಾಯ್ಸ್ಗೆ ಖಡಕ್ ವಾರ್ನಿಂಗ್

ಅಮೆಜಾನ್​ನ ಡೆಲಿವರಿ ಸಿಬ್ಬಂದಿಯಿಂದ ದೇಶದಾದ್ಯಂತ ಒಂದು ದಿನದ ಮುಷ್ಕರಕ್ಕೆ ಸಿದ್ಧತೆ

Published On - 7:31 pm, Fri, 14 May 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್