AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೋನ್​ ಸೆರೆಹಿಡಿದ ಮೌಂಟ್ ಎವರೆಸ್ಟ್​ನ ಮನಮೋಹಕ ದೃಶ್ಯ, ಹರ್ಷ ಗೋಯೆಂಕಾ ಹಂಚಿಕೊಂಡ ಈ ವಿಡಿಯೋ ನೋಡಿ

Mount Everest : ಮೌಂಟ್​ ಎವರೆಸ್ಟ್​ಗೆ ಹೋಗದಿದ್ದರೇನಂತೆ, ನೀವಿದ್ದಲ್ಲೇ ಅದರ ದೃಶ್ಯವೈಭವವನ್ನು ನೋಡಿ ಆಹ್ಲಾದಿಸಬಹುದು. ಡ್ರೋನ್​ ಕ್ಯಾಮೆರಾದ ಈ ಅದ್ಭುತ ದೃಶ್ಯಗಳು ನಿಮ್ಮ ಮನಸೆಳೆಯುವಲ್ಲಿ ಎರಡು ಮಾತಿಲ್ಲ.

ಡ್ರೋನ್​ ಸೆರೆಹಿಡಿದ ಮೌಂಟ್ ಎವರೆಸ್ಟ್​ನ ಮನಮೋಹಕ ದೃಶ್ಯ, ಹರ್ಷ ಗೋಯೆಂಕಾ ಹಂಚಿಕೊಂಡ ಈ ವಿಡಿಯೋ ನೋಡಿ
ಮೌಂಟ್​ ಎವರೆಸ್ಟ್​ನ ಹಿಮರಾಶಿ
TV9 Web
| Edited By: ಶ್ರೀದೇವಿ ಕಳಸದ|

Updated on: Oct 01, 2022 | 2:53 PM

Share

Viral Video : ಇವು ಮೌಂಟ್ ಎವರೆಸ್ಟ್​ನ ನಯನಮನೋಹರ ದೃಶ್ಯಗಳು. ನೋಡುತ್ತಿದ್ದಂತೆ ಮೈಯೆಲ್ಲ ನವಿರೇಳುತ್ತದೆ. ಹಿಮಾಚ್ಛಾದಿತ ಪರ್ವತಗಳು, ಚಲಿಸುವ ಮೋಡಗಳು ಸ್ವರ್ಗವೆಂದರೆ ಇದೇ ಇರಬೇಕು ಎನ್ನಿಸದೇ ಇರದು. @8kraw_official ಈ ಪ್ರಾಜೆಕ್ಟ್​ನಲ್ಲಿ ಭಾಗಿಯಾಗಿದೆ. ಪರ್ವತದ ಅದ್ಭುತ ಸೌಂದರ್ಯ ಮತ್ತು ಅದರ ಸುತ್ತಮುತ್ತಲಿನ ಅನನ್ಯ ಸೊಬಗನ್ನು ಡ್ರೋನ್​ ಮೂಲಕ ಸೆರೆಹಿಡಿಯಲಾಗಿದೆ. ಆಗಸ್ಟ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಉದ್ಯಮಿ ಹರ್ಷ್ ಗೋಯೆಂಕಾ  ವಿಡಿಯೋ ಅನ್ನು ಟ್ವಿಟರ್​ನಲ್ಲಿ ಮರುಹಂಚಿಕೆ ಮಾಡಿಕೊಂಡಿದ್ದಾರೆ. ‘ಡ್ರೋನ್‌ನಿಂದ ಸೆರೆಹಿಡಿಯಲಾದ ಮೌಂಟ್ ಎವರೆಸ್ಟ್‌ನ ಈ ಅದ್ಭುತ ದೃಶ್ಯಗಳು’ ಎಂಬ ಶೀರ್ಷಿಕೆ ಇದಕ್ಕಿದೆ. 

ಈತನಕ ಈ ವಿಡಿಯೋ ಸುಮಾರು 72,000 ವೀಕ್ಷಕರನ್ನು ತಲುಪಿದೆ. ಸುಮಾರು 2,400 ಲೈಕ್‌ಗಳನ್ನು ಇದು ಗಳಿಸಿದೆ. ಈ ವಿಡಿಯೋ ಅನ್ನು ನೋಡಿದ ಟ್ವಿಟರ್​ ಖಾತೆದಾರರು ಅನೇಕ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಉಸಿರು’ ಎಂದು ಒಬ್ಬರು ಹೇಳಿದ್ದಾರೆ. ಎಂಥ ಅದ್ಭುತ ದೃಶ್ಯಗಳು ಇವು, ಹೊಸ ತಂತ್ರಜ್ಞಾನದ ಅನ್ವೇಷಣೆಯಿಂದ ಇದೆಲ್ಲ ಸಾಧ್ಯವಾಗಿದೆ ಎಂದಿದ್ದಾರೆ ಮತ್ತೊಬ್ಬರು.

ಹೀಗಿಲ್ಲಿ ಈ ದೃಶ್ಯವೈಭವವನ್ನು ನೋಡುತ್ತಿದ್ದರೆ ಮನಸ್ಸು ಎಷ್ಟೊಂದು ಪ್ರಫುಲ್ಲಿತಗೊಳ್ಳುತ್ತದಲ್ಲ!

ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ