AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಅಪ್ಪಣೆ ಬೇಡ, ಆಮಂತ್ರಣ ಬೇಡ, ಹೀಗೆ ಹೊಕ್ಕುಬಿಡುವುದೆ ನೀನು?

Elephant : ಈ ಮನೆಯಲ್ಲಿ ತಿಂಡಿ ಇದೆ ಅಂತ ಈ ಆನೆಗೆ ಹೇಗೆ ಗೊತ್ತಾಯಿತು? ಸೀದಾ ಮನೆಯೊಳಗೆ ಹೊಕ್ಕು ಬಾಯಿಚಪ್ಪರಿಸಿ ಆ ಸಣ್ಣ ಬಾಗಿಲಿನಲ್ಲಿ ತನ್ನ ದೊಡ್ಡ ದೇಹವನ್ನು ತೂರಿಕೊಂಡು ಅಂತೂ ಹೊರಬಂದಿದೆ.

Viral Video : ಅಪ್ಪಣೆ ಬೇಡ, ಆಮಂತ್ರಣ ಬೇಡ, ಹೀಗೆ ಹೊಕ್ಕುಬಿಡುವುದೆ ನೀನು?
ಅಬ್ಬಾ ಎಂಥ ರುಚಿಯಾದ ತಿಂಡಿಯಿತ್ತು ಗೊತ್ತಾ?
TV9 Web
| Edited By: |

Updated on:Sep 14, 2022 | 11:11 AM

Share

Viral Video : ತಿಂಡಿತಿನಿಸಿನ ಪರಿಮಳ ಬರುತ್ತಿದ್ದಂತೆ ನಿಮ್ಮ ಮೂಗು ಮನಸು ಹೇಗೆ ಅರಳುತ್ತದೆಯೋ ಹಾಗೆಯೇ ಪ್ರಾಣಿಗಳಿಗೂ ಆಗುತ್ತದೆ. ಸಸ್ತನಿಗಳಲ್ಲಿ ವಾಸನಾಗ್ರಹಣ ಶಕ್ತಿ ಪ್ರಬಲವಾಗಿದೆ. ಅದರಲ್ಲೂ ಆನೆ, ನಾಯಿಗಳಲ್ಲಿ ಇದು ತೀವ್ರವಾಗಿದೆ. ಇಲ್ಲಿರುವ ಈ ವಿಡಿಯೋ ನೋಡಿ, ಆನೆಯೊಂದು ಚಿಕ್ಕಬಾಗಿಲಿನೊಳಗೆ ತನ್ನ ದೈತ್ಯ ದೇಹಿ ಆನೆಯೊಂದು ಅತ್ಯಂತ ಕೌಶಲದಿಂದ ತನ್ನ ದೇಹವನ್ನು ಬಾಗಿಲಿನೊಳಗಿನಿಂದ ತಳ್ಳಿಕೊಂಡು  ಹೊರಬರುತ್ತಿದೆ. ಈ ಮನೆಯವರು ಇದಕ್ಕೆ ತಿಂಡಿ ತಿನ್ನಲು ಕರೆದಿದ್ದರಾ ಏನು ವಿಷಯ? ವಿಡಿಯೋ ನೋಡಿ.

ನಮಗೇನಿಷ್ಟವೋ ಅದನ್ನು ಪಡೆಯಬೇಕೆಂದರೆ ಯಾವ ಅಡೆತಡೆಗಳನ್ನೂ ಹೊಕ್ಕು ಹೊರಬರುವ ತಂತ್ರ, ಕೌಶಲ ನಮಗೆ ಗೊತ್ತಿರುತ್ತದೆ ಅಲ್ಲವೆ? ಈ ಆನೆಯೂ ಹೀಗೇ ಮಾಡಿದಂತಿದೆ. ಈ ಮನೆಯೊಳಗಿನಿಂದ ಅದಕ್ಕೆ ತಿಂಡಿ ಪರಿಮಳ ಬಂದಿದೆ. ತಡೆದುಕೊಳ್ಳಲಾಗದೆ ನೇರ ಈ ಮನೆಯನ್ನು ಹೊಕ್ಕಿದೆ. ತನಗೆ ಬೇಕಾದ್ದನ್ನು ತಿಂದು ಹೊರಬರುವಾಗ ತುಸು ಕಷ್ಟವಾಗಿದೆ. ಆದರೂ ತನ್ನ ಗಜಗಾತ್ರವನ್ನು ಆ ಬಾಗಿಲಿನಲ್ಲಿ ತೂರಿಕೊಂಡು ಅಂತೂ ಹೊರಬಂದಿದೆ.

ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ನಾಯಿ, ಆನೆ, ಬೆಕ್ಕು ಮುಂತಾದ ಸಸ್ತನಿಗಳು ಮೈಲುಗಟ್ಟಲೆ ದೂರದಿಂದ ವಾಸನೆ ಗ್ರಹಿಸಿ ಆ ಆಹಾರವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ.’ ಎಂದು ಅವರು ಈ ವಿಡಿಯೋಗೆ ನೋಟ್​ ಬರೆದಿದ್ದಾರೆ. ಈ ಪೋಸ್ಟ್​ ಐಎಫ್​ಎಸ್ ಅಧಿಕಾರಿ ಸಾಕೇತ್ ಬಡೋಲಾ ಹಂಚಿಕೊಂಡ ಈ ಪೋಸ್ಟ್​ ಅನ್ನೇ ಸುಸಾಂತ ರೀಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಇನ್ನೇನು 11,000 ವೀಕ್ಷಕರನ್ನು ತಲುಪುತ್ತದೆ. 700 ಕ್ಕೂ ಹೆಚ್ಚು ರೀಟ್ವೀಟ್​ ಆಗಿದೆ ಈ ಪೋಸ್ಟ್​.

ಅನೇಕರು ಇದು ಈ ಮನೆಯೊಳಗೆ ಯಾವ ತಿಂಡಿ ತಿನ್ನಲು ಹೋಗಿತ್ತು ಎಂಬುದನ್ನು ಊಹಿಸಿ ಪೋಸ್ಟ್​ ರೀಟ್ವೀಟ್​ ಮಾಡಿದ್ದಾರೆ. ‘ಈ ಮುದ್ದಾದ, ದೈತ್ಯದೇಹಿ ಅತ್ಯಂತ ಬುದ್ಧಿವಂತ ಪ್ರಾಣಿ. ಕಬ್ಬು ಇದರ ನೆಚ್ಚಿನ ಆಹಾರಗಳಲ್ಲಿ ಒಂದು. ಹಾಗಾಗಿ ಕಬ್ಬಿನ ಮೋಹಕ್ಕೆ ಒಳಗಾಗಿ ಇದು ಇಲ್ಲಿಗೆ ಹೋಗಿತ್ತಾ? ಎಂದಿದ್ದಾರೆ. ‘ಈ ಆನೆಗಳು ಯಾವಾಗಲೂ ಸ್ಮಾರ್ಟ್​ ಮತ್ತು ಅಷ್ಟೇ ವಿನಮ್ರಭಾವಜೀವಿಗಳು. ತೊಂದರೆಗೆ ಒಳಗಾಗದಂತೆ ಎಚ್ಚರಿಕೆಯಿಂದ ಇರಿ’ ಎಂದು ಸಲಹೆ ನೀಡಿದ್ದಾರೆ ಮತ್ತೊಬ್ಬ ನೆಟ್ಟಿಗರು. ‘ಭೂಮಂಡಲದ ಮೇಲಿರುವ ಅತ್ಯಂತ ಮನಮೋಹಕ ಜೀವಿ ಇದು’ ಎಂದು ಮಗದೊಬ್ಬರು ಪ್ರೀತಿ ವ್ಯಕ್ತಪಡಿಸಿದ್ದಾರೆ.

ನೀವೂ ಹುಷಾರು! ರುಚಿಯಾದ ತಿಂಡಿ ಮಾಡಿದಾಗ…

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:10 am, Wed, 14 September 22

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ