AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : 75 ಜಿಲ್ಲೆಗಳನ್ನು 28 ಸೆಕೆಂಡುಗಳಲ್ಲಿ ಹೇಳುವ ಉತ್ತರ ಪ್ರದೇಶದ ಈ ಪೋರಿ

Talented Kid : ವರ್ಣಮಾಲಿಕೆಯ ಅನುಕ್ರಮದಲ್ಲಿ ನಿರರ್ಗಳವಾಗಿ ಈ ಪುಟ್ಟ ಹುಡುಗಿ 75 ಜಿಲ್ಲೆಗಳ ಹೆಸರುಗಳನ್ನು ಹೇಳುತ್ತಿದ್ದರೆ ಆಹಾ ಎನ್ನಿಸದೇ ಇರದು! 36,000 ನೆಟ್ಟಿಗರು ನೋಡಿರುವ ಈ ವಿಡಿಯೋ ನಿಮಗೂ ಇಷ್ಟವಾದೀತು.

Viral Video : 75 ಜಿಲ್ಲೆಗಳನ್ನು 28 ಸೆಕೆಂಡುಗಳಲ್ಲಿ ಹೇಳುವ ಉತ್ತರ ಪ್ರದೇಶದ ಈ ಪೋರಿ
TV9 Web
| Edited By: ಶ್ರೀದೇವಿ ಕಳಸದ|

Updated on: Sep 14, 2022 | 10:34 AM

Share

Viral Video : ಒಂದೊಂದು ಮಗುವೂ ವಿಶಿಷ್ಟ. ಎಳವೆಯಲ್ಲಿ ನೀವು ಯಾವುದರತ್ತ ಆಕರ್ಷಿಸುತ್ತೀರೋ ಅದರತ್ತ ಅದು ಆಸಕ್ತಿ ಬೆಳೆಸಿಕೊಳ್ಳುತ್ತದೆ. ಉತ್ತರ ಪ್ರದೇಶದ ಈ ಪುಟ್ಟ ಬಾಲಕಿ 38 ಸೆಕೆಂಡುಗಳಲ್ಲಿ 75 ಜಿಲ್ಲೆಗಳ ಹೆಸರುಗಳನ್ನು ಒಂದೇ ಉಸಿರಿನಲ್ಲಿ ಒಪ್ಪಿಸಿ ನೆಟ್ಟಿಗರಲ್ಲಿ ಅಚ್ಚರಿ ಹುಟ್ಟಿಸಿದ್ದಾಳೆ. ಈಕೆಯ ಸ್ಮರಣಶಕ್ತಿಗೆ ಬೆರಗಾದ ನೆಟ್ಟಿಗರು ಈ ವಿಡಿಯೋ ವೈರಲ್ ಮಾಡಿದ್ದಾರೆ. ಶುಭಂಕರ್ ಮಿಶ್ರಾ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಆದರ್ಶ ಪ್ರಾತ್ಮಿಕ್​ ವಿದ್ಯಾಲಯದಲ್ಲಿ ಓದುತ್ತಿರುವ ಈ ಬಾಲಕಿಯ ಹೆಸರು ಮೌನ್ವಿ ಚೌರಾಸಿಯಾ.

ಅದ್ಭುತ ಪ್ರತಿಭೆಯ ಬಾಲಕಿ ಹೀಗೆ ನಿರಂತರವಾಗಿ 75 ಜಿಲ್ಲೆಗಳ ಹೆಸರುಗಳನ್ನು ವರ್ಣಮಾಲಿಕೆಯ ಕ್ರಮದಲ್ಲಿ ಹೇಳುವುದನ್ನು ಕೇಳಿದರೆ ಯಾರಿಗೂ ಸಂಚಲನ ಮೂಡದೇ ಇರದು. ಈತನಕ 36,000 ವೀಕ್ಷಣೆ, ಸುಮಾರು 4,000 ಲೈಕ್ಸ್, 700ಕ್ಕೂ ಹೆಚ್ಚು ರೀಟ್ವೀಟ್​ ಪಡೆದಿದೆ ಈ ವಿಡಿಯೋ.

ಈಕೆಯ ನೆನಪಿನ ಶಕ್ತಿ ಬಗ್ಗೆ ನೆಟ್ಟಿಗರು ಪ್ರಶಂಸಿಸಿದ್ದಾರೆ. ‘ಇಂಥ ಅದ್ಭುತ ಸ್ಮರಣಶಕ್ತಿ ಹೊಂದಿರುವ ಈ ಬಾಲೆಗೆ ಅತ್ಯುತ್ತಮ ಭವಿಷ್ಯವಿದೆ’ ಎಂದು ಹಾರೈಸಿದ್ದಾರೆ.

ಮಕ್ಕಳಿಗೆ ಬಾಲ್ಯದಲ್ಲಿ ಹೀಗೆ ಒಂದಿಲ್ಲಾ ಒಂದು ಗುಂಗು, ಕೌಶಲವನ್ನು ಹೊಕ್ಕಿಸಿಬಿಟ್ಟರೆ, ಅವರದೇ ಪ್ರಪಂಚದಲ್ಲಿ ಆಸಕ್ತಿಗಳಲ್ಲಿ ಕಲಿಕೆಯಲ್ಲಿ ಅವರು ಬೆಳೆಯುತ್ತ ಹೋಗುತ್ತಾರೆ. ಪ್ರತಿಯೊಂದಕ್ಕೂ ಸ್ಪೂನ್​ ಫೀಡ್ ಮಾಡಬೇಕಿಲ್ಲ. ಮುಖ್ಯವಾಗಿ, ಸುಲಭವಾಗಿ ಹೊರಪ್ರಭಾವಕ್ಕೆ ಒಳಗಾಗಲಾರರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ