English Alphabet 27th Latter: ಇಂಗ್ಲೀಷ್‌ ‌ ವರ್ಣಮಾಲೆಯಲ್ಲಿ 26 ಅಲ್ಲ 27 ಅಕ್ಷರಗಳಿವೆ, ಆ ಇಪ್ಪತ್ತೇಳನೇ ಅಕ್ಷರ ಯಾವುದು?

Ampersand: ನಮಗೆಲ್ಲ ತಿಳಿದಿರುವಂತೆ ಇಂಗ್ಲೀಷ್‌ ವರ್ಣಮಾಲೆಯಲ್ಲಿ A ಯಿಂದ Z ವರೆಗೆ ಒಟ್ಟು 26 ಅಕ್ಷರಗಳಿವೆ. ಆದರೆ ಇಂಗ್ಲೀಷ್‌ ವರ್ಣಮಾಲೆಯಲ್ಲಿ 27 ಅಕ್ಷರಗಳು ಇದ್ದಂತಹ ಕಾಲವಿತ್ತಂತೆ. ಹಾಗಾದರೆ ಈ ಹಿಂದೆ ಇದ್ದಂತಹ ಆ 27 ನೇ ಅಕ್ಷರ ಯಾವುದು? ಅದನ್ನು ಹೇಗೆ ಉಚ್ಛರಿಸಲಾಗುತ್ತಿತ್ತು ಎಂಬುದನ್ನು ತಿಳಿಯೋಣ ಬನ್ನಿ.

English Alphabet 27th Latter: ಇಂಗ್ಲೀಷ್‌ ‌ ವರ್ಣಮಾಲೆಯಲ್ಲಿ 26 ಅಲ್ಲ 27 ಅಕ್ಷರಗಳಿವೆ, ಆ ಇಪ್ಪತ್ತೇಳನೇ ಅಕ್ಷರ ಯಾವುದು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 05, 2024 | 4:03 PM

ನಮಗೆಲ್ಲ ತಿಳಿದಿರುವಂತೆ ಆಧುನಿಕ ಇಂಗ್ಲೀಷ್‌ ವರ್ಣಮಾಲೆಯಲ್ಲಿ 26 ಅಕ್ಷರಗಳಿವೆ. ಶಾಲೆಯಲ್ಲಿಯೂ A ಯಿಂದ ಹಿಡಿದು Z ವರೆಗೆ ಇಂಗ್ಲೀಷ್‌ ವರ್ಣಮಾಲೆಯಲ್ಲಿ ಒಟ್ಟು 26 ಅಕ್ಷರಗಳಿವೆ ಎಂಬುದನ್ನು ಶಿಕ್ಷಕರು ಮಕ್ಕಳಿಗೆ ಕಲಿಸಿಕೊಡುತ್ತಾರೆ. ಆದರೆ ನಿಮಗೆ ಗೊತ್ತಾ ಒಂದು ಕಾಲದಲ್ಲಿ ಇಂಗ್ಲೀಷ್‌ ವರ್ಣಮಾಲೆಯಲ್ಲಿ 27 ಅಕ್ಷರಗಳಿತ್ತಂತೆ. ಹಾಗಾದರೆ ಆ ಇಪ್ಪತ್ತೇಳನೆ ಅಕ್ಷರ ಯಾವುದೂ ಎಂಬುದನ್ನು ನೋಡೋಣ ಬನ್ನಿ.

ಇಂಗ್ಲೀಷ್‌ ವರ್ಣಮಾಲೆಯ 27 ನೇ ಅಕ್ಷರ ಯಾವುದು?

ʼ&ʼ ಇಂಗ್ಲೀಷ್‌ ವರ್ಣಮಾಲೆಯ 27 ನೇ ಅಕ್ಷರವಾಗಿದೆ. ಇದನ್ನು ಆಂಪರ್ಸಂಡ್‌ ಎಂದು ಉಚ್ಛರಿಸಲಾಗುತ್ತಿತ್ತು. ಬ್ರಿಟಾನಿಕಾ ವೆಬ್‌ಸೈಟ್‌ ವರದಿಯ ಪ್ರಕಾರ, 1835 ವರೆಗೆ ಆಂಪರ್ಸೆಂಡ್‌ (&) ಅನ್ನು ವರ್ಣಮಾಲೆಯ 27 ಅಕ್ಷರವೆಂದು ಪರಿಗಣಿಸಲಾಗಿತ್ತು. ಅಲ್ಲಿಯವೆರೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವರ್ಣಮಾಲೆಯಲ್ಲಿ A ಯಿಂದ & ವರೆಗೆ 27 ಅಕ್ಷರಗಳಿವೆ ಎಂಬುದನ್ನು ಕಲಿಸಿಕೊಡುತ್ತಿದ್ದರು. ಆಂಪರ್ಸೆಂಡ್‌ (&) ಲ್ಯಾಟಿನ್‌ ಪದವಾದ ʼetʼ ನಿಂದ ಮಾಡಲ್ಪಟ್ಟಿದೆ. ಮತ್ತು ಇದನ್ನು ʼಪರ್‌ ಸೆʼ ಎಂದು ಕರೆಯಲಾಯಿತು. ನಂತರ ಇದು ಉಚ್ಚಾರಣೆಯಲ್ಲಿ ʼಆಂಪರ್ಸಂಡ್ʼ ಎಂದು ಧ್ವನಿಸಲು ಪ್ರಾರಂಭಿಸಿತು. ಲ್ಯಾಟಿನ್‌ ಭಾಷೆಯಲ್ಲಿ ಪರ್‌ ಸೆ ಎಂದರೆ ಇತರರಿಂದ ಪ್ರತ್ಯೇಕಿಸಲ್ಪಟ್ಟ ಅಥವಾ ಏಕಾಂಗಿ ಎಂದರ್ಥ.

ಇದನ್ನೂ ಓದಿ: ವಿಶ್ವಕಪ್​​​ ಕಲಿಗಳನ್ನು ನೋಡಲು ಮರವೇರಿ ಕುಳಿತ ಕ್ರಿಕೆಟ್‌ ಪ್ರೇಮಿ; ಫೋಟೋ ವೈರಲ್‌

1835 ರಲ್ಲಿ ಇಂಗ್ಲೀಷ್‌ ವರ್ಣಮಾಲೆಯನ್ನು ಬದಲಾಯಿಸಲಾಯಿತು ಮತ್ತು ʼ&ʼ ಅಕ್ಷರವನ್ನು ತೆಗೆದು ಹಾಕಿ 19 ನೇ ಶತಮಾನದ ಅಂತ್ಯದ ವೇಳೆಗೆ ಆಂಪರ್ಸೆಂಡ್‌ ಅಕ್ಷರವನ್ನು ಕೇವಲ ಒಂದು ಚಿಹ್ನೆ ಎಂದು ಪರಿಗಣಿಸಲಾಯಿತು. ಕ್ರಮೇಣ ʼ&ʼ ಚಿಹ್ನೆ ಮಾರ್ಕ್ಸ್‌ & ಸ್ಪೆನ್ಸರ್‌, H&M ಇತ್ಯಾದಿ ಕಂಪೆನಿಗಳ ಹೆಸರುಗಳಲ್ಲಿ ಮತ್ತು ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ನಲ್ಲಿಯೂ ಕಾಣಿಸಿಕೊಳ್ಳಲು ಪ್ರಾರಂಭವಾಯಿತು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬಿಜೆಪಿಗೆ ವಾಪಸ್ಸಾಗುವಂತೆ ಕರೆ ಬರುತ್ತಿವೆ ಎಂದು ಪುನಃ ಹೇಳಿದ ಈಶ್ವರಪ್ಪ
ಬಿಜೆಪಿಗೆ ವಾಪಸ್ಸಾಗುವಂತೆ ಕರೆ ಬರುತ್ತಿವೆ ಎಂದು ಪುನಃ ಹೇಳಿದ ಈಶ್ವರಪ್ಪ
ಕಾರವಾರ: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಥಳಿತ
ಕಾರವಾರ: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಥಳಿತ
ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ
ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ
ಮಾಧ್ಯಮಗಳಿಗಾಗಿ ತನಿಖೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಪರಮೇಶ್ವರ್
ಮಾಧ್ಯಮಗಳಿಗಾಗಿ ತನಿಖೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಪರಮೇಶ್ವರ್
ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುಕನ ಹುಚ್ಚಾಟ, ವಾಹನ ಸವಾರಿಗೆ ಸಮಸ್ಯೆ
ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುಕನ ಹುಚ್ಚಾಟ, ವಾಹನ ಸವಾರಿಗೆ ಸಮಸ್ಯೆ
ಅವೈಜ್ಞಾನಿಕ ಕಾಮಗಾರಿಯಿಂದ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆಗಾರರಿಗೆ ನಷ್ಟ
ಅವೈಜ್ಞಾನಿಕ ಕಾಮಗಾರಿಯಿಂದ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆಗಾರರಿಗೆ ನಷ್ಟ
ಗೋವಾದ ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ
ಗೋವಾದ ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?