ರಜೆ ಕಳೆಯಲು ಹಿಂದೆಂದೂ ನೋಡದ ಊರಿಗೆ ಹೋಗಿದ್ದ ಕುಟುಂಬ ಬಂಗಲೆಯ ಗೋಡೆಯ ಮೇಲಿದ್ದ ಚಿತ್ರ ಕಂಡು ವಾಪಸಾಗಿದ್ದೇಕೆ?

ದಿನನಿತ್ಯದ ಜಂಜಾಟದಿಂದ ಸ್ವಲ್ಪ ದೂರ ಇರಲು ಪ್ರತಿಯೊಬ್ಬರೂ ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಹಾಗೆಯೇ ಉತ್ತಮವಾಗಿ ರಜೆ ಕಳೆಯಬೇಕೆಂದು ಜೆನ್ನಿ ಸ್ಟೀವನ್ಸ್​ ಎಂಬ ಮಹಿಳೆ ತನ್ನಿಬ್ಬರು ಮಕ್ಕಳು ಹಾಗೂ ಪತಿಯ ಜತೆಗೆ ಹಿಂದೆಂದೂ ಹೋಗದ ಊರಿಗೆ ಹೋಗಿದ್ದರು.

ರಜೆ ಕಳೆಯಲು ಹಿಂದೆಂದೂ ನೋಡದ ಊರಿಗೆ ಹೋಗಿದ್ದ ಕುಟುಂಬ ಬಂಗಲೆಯ ಗೋಡೆಯ ಮೇಲಿದ್ದ ಚಿತ್ರ ಕಂಡು ವಾಪಸಾಗಿದ್ದೇಕೆ?
ಬಾಲಕ
Follow us
|

Updated on: Apr 10, 2024 | 12:27 PM

ದಿನನಿತ್ಯದ ಜಂಜಾಟದಿಂದ ಸ್ವಲ್ಪ ದೂರ ಇರಲು ಪ್ರತಿಯೊಬ್ಬರೂ ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಹಾಗೆಯೇ ಉತ್ತಮವಾಗಿ ರಜೆ ಕಳೆಯಬೇಕೆಂದು ಜೆನ್ನಿ ಸ್ಟೀವನ್ಸ್​ ಎಂಬ ಮಹಿಳೆ ತನ್ನಿಬ್ಬರು ಮಕ್ಕಳು ಹಾಗೂ ಪತಿಯ ಜತೆಗೆ ಹಿಂದೆಂದೂ ಹೋಗದ ಊರಿಗೆ ಹೋಗಿದ್ದರು.

ಅವರು ಎರಡು ವರ್ಷಗಳ ಹಿಂದಷ್ಟೇ ಯುಕೆಯಿಂದ ಸ್ವೀಡನ್​ಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯ ಸ್ಥಳಗಳನ್ನು ನೋಡಬೇಕೆನ್ನುವ ಬಯಕೆಯಿಂದ ಹೊರಟಿದ್ದರು. ಸ್ವಲ್ಪ ದಿನಗಳವರೆಗೆ ನಿರ್ಜನವಾಗಿದ್ದ ಸ್ಥಳದಲ್ಲಿ ಉಳಿದುಕೊಂಡಿದ್ದರು, ಇಲ್ಲಿಯೇ ಸ್ವಲ್ಪ ದಿನ ಆರಾಮವಾಗಿರೋಣ ಎಂದುಕೊಂಡಿದ್ದರು. ಆದರೆ ಗೋಡೆಯ ಮೇಲಿನ ಆ ಒಂದು ಚಿತ್ರವನ್ನು ಕಂಡು ಕೂಡಲೇ ಗಂಟು-ಮೂಟೆ ಕಟ್ಟಿಕೊಂಡು ವಾಪಸಾಗಿದ್ದಾರೆ.

ಜೆನ್ನಿಯ ಮಗಳು ಹಾಗೆಯೇ ಬಂಗಲೆಯೆಲ್ಲಾ ಒಂದು ಸುತ್ತು ಹಾಕಿಕೊಂಡು ಬರಬೇಕೆಂದು ಹೊರಟಿದ್ದಳು, ಆ ಬಂಗಲೆಯ ಗೋಡೆಯ ಮೇಲೆ ಆಕೆಯ ಸಹೋದರ ಅಂದರೆ ಜೆನ್ನಿಯ ಕಿರಿಯ ಮಗನ ಚಿತ್ರವು ಹೆಣ್ಣಿನ ರೂಪದಲ್ಲಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ.

ಮತ್ತಷ್ಟು ಓದಿ: 20 ವರ್ಷಗಳ ಹಿಂದೆ ಮಾವೋವಾದಿಗಳ ಬೆದರಿಕೆಯಿಂದ ಮುಚ್ಚಿದ್ದ ರಾಮಮಂದಿರ, ಇದೀಗ ಮತ್ತೆ ರೀಓಪನ್

ಕೂಡಲೇ ಆಕೆ ತಾಯಿಗೆ ವಿಷಯ ತಿಳಿಸಿದಾಗ ಜೆನ್ನಿ ಬಂದು ನೋಡಿದ್ದಾರೆ, ಹೌದು ಅಲ್ಲಿದ್ದಿದ್ದು ತನ್ನ ಮಗನ ಫೋಟೋ ಆದರೆ ಅಲ್ಲಿದ್ದಿದ್ದು ಹುಡುಗಿ ಎಂಬುದಷ್ಟೇ ವ್ಯತ್ಯಾಸ.

ಹಿಂದೆಂದೂ ಆ ಊರನ್ನು ನೋಡಿಯೇ ಇರದ ಕುಟುಂಬವು ಈ ಚಿತ್ರ ಕಂಡು ಹೌಹಾರಿದೆ. ತಕ್ಷಣವೇ ವಸ್ತುಗಳನ್ನು ಪ್ಯಾಕ್​ ಮಾಡಿ ಅಲ್ಲಿಂದ ಹೊರಟರು. ಈ ಘಟನೆ ಕುರಿತು ಜೆನ್ನಿ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ಜನರು ಕೂಡಲೇ ಅಲ್ಲಿಂದ ಹೊರಡುವಂತೆ ಸಲಹೆ ನೀಡಿದ್ದಾರೆ, ಇನ್ನೂ ಕೆಲವರು ಪುನರ್ಜನ್ಮದ ಕಥೆಯಿದ್ದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು