AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಆಸ್ಟ್ರೇಲಿಯಾದ ಈ ಪ್ರಸಿದ್ಧ ರೆಸ್ಟೋರೆಂಟ್​ನಲ್ಲಿ ಸಸ್ಯಜನ್ಯ ಆಹಾರ ನಿಷೇಧ

Vegan : ಸಸ್ಯಜನ್ಯ ಆಹಾರವನ್ನು ಸೂಕ್ತಪ್ರಮಾಣದಲ್ಲಿ ಸೇವಿಸದಿದ್ದರೆ ಪ್ರೊಟೀನ್ ಕೊರತೆಯಿಂದ ಖಿನ್ನತೆ ಆವರಿಸುತ್ತದೆ ಎನ್ನುತ್ತವೆ ಕೆಲ ಅಧ್ಯಯನಗಳು. ಈ ಕಾರಣಕ್ಕೆ ಆಸ್ಟ್ರೇಲಿಯಾದ ಖ್ಯಾತ ಬಾಣಸಿಗ ಈ ನಿರ್ಧಾರಕ್ಕೆ ಬಂದಿದ್ಧಾನೆಯೇ, ಏನಂತೀರಿ?

Viral: ಆಸ್ಟ್ರೇಲಿಯಾದ ಈ ಪ್ರಸಿದ್ಧ ರೆಸ್ಟೋರೆಂಟ್​ನಲ್ಲಿ ಸಸ್ಯಜನ್ಯ ಆಹಾರ ನಿಷೇಧ
ಆಸ್ಟ್ರೇಲಿಯಾದ ಫೈರ್ ರೆಸ್ಟೋರೆಂಟ್​ನಲ್ಲಿ ಸಸ್ಯಜನ್ಯ ಆಹಾರವನ್ನು ನಿಷೇಧಿಸಿದ ಬಗ್ಗೆ ಫೇಸ್​ಬುಕ್​ ಪೋಸ್ಟ್​
Follow us
ಶ್ರೀದೇವಿ ಕಳಸದ
|

Updated on:Jun 28, 2023 | 3:02 PM

Australia : ಆಸ್ಟ್ರೇಲಿಯಾದ ಖ್ಯಾತ ಬಾಣಸಿಗ ಜಾನ್​ ಮೌಂಟೇನ್​ (John Mountain) ತಮ್ಮ ರೆಸ್ಟೋರೆಂಟ್​ FYRE ನಲ್ಲಿ ಸಸ್ಯಜನ್ಯ (Vegan) ಆಹಾರವನ್ನು ನಿಷೇಧಿಸಿದ್ಧಾರೆ. ಈ ವಿಷಯವನ್ನು ಅವರು ತಮ್ಮ ಫೇಸ್​​ಬುಕ್ ಪುಟದಲ್ಲಿ ಹಂಚಿಕೊಂಡಾಗಿನಿಂದ ನೆಟ್ಟಿಗರು ಪ್ರತಿಕ್ರಿಯೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಈಗಾಗಲೇ ಈ ಪೋಸ್ಟ್​ ಅನ್ನು 5,000 ಜನರು ಇಷ್ಟಪಟ್ಟಿದ್ದಾರೆ. 4,000ಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. 209 ಜನರು ಇದನ್ನು ಹಂಚಿಕೊಂಡಿದ್ದಾರೆ. ಅರೆ! ಇವರು ಯಾಕೆ ಹೀಗೆ ಹೇಳಿದ್ದಾರೆ, ಇದಕ್ಕೆ ಕಾರಣವಾದರೂ ಏನು ಎಂಬ ಕುತೂಹಲ ನಿಮ್ಮಲ್ಲಿ ಉಂಟಾಗಿರಬೇಕಲ್ಲ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇತ್ತೀಚಿನ ವರ್ಷಗಳಲ್ಲಿ ಜನರು ತಮ್ಮ ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಅರಿವನ್ನು ಬೆಳೆಸಿಕೊಂಡಿದ್ದಾರೆ. ಸಾಕಷ್ಟು ಜನ ಸಸ್ಯಜನ್ಯ ಆಹಾರದೆಡೆ ಆಕಸ್ತರಾಗುತ್ತಿದ್ದಾರೆ. ಅನೇಕರು ಸಂಪೂರ್ಣವಾಗಿ ಸಸ್ಯಾಧಾರಿತ ಆಹಾರಕ್ರಮವನ್ನು ಈಗಾಗಲೇ ರೂಢಿಸಿಕೊಂಡಿದ್ದಾರೆ. ಹಾಗಾಗಿ ರೆಸ್ಟೋರೆಂಟ್​ಗಳ ಮೆನುಗಳಲ್ಲಿ ಸಸ್ಯಜನ್ಯ ಪದಾರ್ಥಗಳನ್ನು ಉಲ್ಲೇಖಿಸುತ್ತಿರುವುದು ಸಹಜ. ಆದರೆ ಜಾಬ್​ ಮೌಂಟೇನ್​ ‘ಮಾನಸಿಕ ಆರೋಗ್ಯ’ದ ಕಾರಣ ನೀಡಿ ತನ್ನ ರೆಸ್ಟೋರೆಂಟ್​ನಿಂದ ಸಸ್ಯಾಹಾರವನ್ನು ನಿಷೇಧಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ಒಂದೇ ಕ್ಷಣ ತಡವಾಗಿದ್ದರೂ ಆತ ಹುಡುಗಿಯನ್ನು ಇರಿದೇ ಬಿಡುತ್ತಿದ್ದ!

ಈ ರೆಸ್ಟೋರೆಂಟ್​ ಪರ್ತ್​ನಲ್ಲಿದೆ. ಜೂ. 19ರಂದು ಹಂಚಿಕೊಳ್ಳಲಾದ ಈ ಪೋಸ್ಟ್​​ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಬಹಳ ಒಳ್ಳೆಯ ನಿರ್ಧಾರ ಮುಂದುವರಿಯಿರಿ ಎಂದಿದ್ದಾರೆ. ಸದ್ಯದಲ್ಲಿಯೇ ನಿಮ್ಮ ರೆಸ್ಟೋರೆಂಟ್​ಗೆ ಬಂದು ಊಟ ಮಾಡುತ್ತೇವೆ ಎಂದು ಅನೇಕರು ಹೇಳಿದ್ದಾರೆ. ಒಳ್ಳೆಯದು, ನಿಮ್ಮ ಬಿಝಿನೆಸ್​ ನಿಮ್ಮದೇ ನಿರ್ಧಾರ ಎಂದು ಮತ್ತೊಂದಿಷ್ಟು ಜನ ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral Video: ಈ ಜನ್ಮದಲ್ಲಿಯೇ ವಿದ್ಯುತ್ ಕಂಡ ಉತ್ತಪ್ರದೇಶದ ವಯೋವೃದ್ಧೆ; ಇಂಥ ಅಧಿಕಾರಿಗಳು ಬೇಕು ಎನ್ನುತ್ತಿರುವ ನೆಟ್ಟಿಗರು

ಕಳೆದ ಭಾನುವಾರ ನಿಮ್ಮ ರೆಸ್ಟೋರೆಂಟ್​ನ ಬಾತುಕೋಳಿಯ ಕರುಳಿನಿಂದ ಮಾಡಿದ ಖಾದ್ಯ ನಿಜಕ್ಕೂ ಚೆನ್ನಾಗಿತ್ತು ಎಂದು ಒಬ್ಬರು ಹೇಳಿದ್ದಾರೆ. ಯಾರೊಬ್ಬರೂ ಜಾನ್​ ಅವರ ಈ ನಿರ್ಧಾರವನ್ನು ತಳ್ಳಿಹಾಕಿಲ್ಲ. ಬದಲಾಗಿ ಅವರ ನಿರ್ಧಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರೀ 4,000 ಜನರು!

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

Published On - 3:02 pm, Wed, 28 June 23

ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ