AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೈಟ್​ಕ್ಲಬ್​ನಲ್ಲಿ ಮರಿಕೋತಿಗೆ ಹಿಂಸೆ; ಕ್ಲಬ್​ ವಿರುದ್ದ ಪ್ರಕರಣ ದಾಖಲು

Baby Monkey Rescued : ಕೊಲ್ಕತ್ತೆಯ ನೈಟ್‌ಕ್ಲಬ್‌ನಲ್ಲಿ 'ಸರ್ಕಸ್-ಥೀಮ್ ಪಾರ್ಟಿ' ಆಯೋಜಿಸಲಾಗಿತ್ತು. ಕೊರಳಲ್ಲಿ ಸರಪಳಿ ಬಿಗಿದ ಮರಿಕೋತಿಯನ್ನು ಮನರಂಜನೆಗಾಗಿ ತರಲಾಗಿತ್ತು. ಇದೀಗ ವನ್ಯಜೀವಿ ಸಂರಕ್ಷಕರ ಆರೈಕೆಯಲ್ಲಿ ಮರಿ ಕ್ಷೇಮವಾಗಿದೆ.

Viral Video: ನೈಟ್​ಕ್ಲಬ್​ನಲ್ಲಿ ಮರಿಕೋತಿಗೆ ಹಿಂಸೆ; ಕ್ಲಬ್​ ವಿರುದ್ದ ಪ್ರಕರಣ ದಾಖಲು
ಸಾಂದರ್ಭಿ ಚಿತ್ರ. ಸೌಜನ್ಯ: ಅಂತರ್ಜಾಲ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jun 28, 2023 | 5:10 PM

Share

Kolkata: ಪ್ರಾಣಿಗಳನ್ನು ಮನೋರಂಜನೆಗಾಗಿ ಹಿಂಸಿಸುವುದು ಅಪರಾಧ. ಆದರೂ ಅನೇಕರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಾಣಿಗಳನ್ನು ಒಂದಿಲ್ಲಾ ಒಂದು ರೀತಿಯಲ್ಲಿ ಹಿಂಸೆ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕೊಲ್ಕತ್ತಾದ ನೈಟ್​ ಕ್ಲಬ್​ವೊಂದರಲ್ಲಿ ‘ಸರ್ಕಸ್-ಥೀಮ್ ಪಾರ್ಟಿ’ ಆಯೋಜಿಸಲಾಗಿತ್ತು. ಅಲ್ಲಿ ಮರಿಕೋತಿಯನ್ನು (Rhesus Makak) ಸರಪಳಿಯಿಂದ ಕಟ್ಟಿಹಾಕಲಾಗಿತ್ತು. ಅಲ್ಲಿಗೆ ಬಂದ ಅತಿಥಿಗಳ ಮನರಂಜನೆಯ ಕೇಂದ್ರಬಿಂದು ಅದಾಗಿತ್ತು. ಅಲ್ಲದೆ ಅದಕ್ಕೆ ನರ್ತಿಸುವಂತೆ  ಕೆಲವರು ಒತ್ತಾಯಿಸಿದರೆ, ಇನ್ನೂ ಕೆಲವರು ಅದಕ್ಕೆ ಮುದ್ದಿಸುತ್ತಿದ್ದರು. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಆ ನೈಟ್​ ಕ್ಲಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೀಗ ಮರಿಕೋತಿ ವನ್ಯಜೀವಿ ಸಂರಕ್ಷಕರ ಪಾಲನೆಯಲ್ಲಿ ಕ್ಷೇಮವಾಗಿದೆ. ನೈಟ್​ ಕ್ಲಬ್​ನಲ್ಲಿ ಹಿಂಸೆಗೊಳಗಾಗುತ್ತಿದ್ದ ಅದರ ವಿಡಿಯೋ ಈ ಕೆಳಗಿದೆ.

ಇದನ್ನೂ ಓದಿ : Viral Video: ಇದು ಇವರ ಖಾಸಗೀ ವಿಮಾನವಾಗಿದ್ದು ಹೇಗೆ? ಈ ವಿಡಿಯೋ ನೋಡಿ

ತಾಯಿಯಿಂದ ಮರಿಯನ್ನು ಬೇರ್ಪಡಿಸಿದ್ದಲ್ಲದೆ ಮನರಂಜನೆಗಾಗಿ ಹೀಗೆ ಶೋಷಿಸುತ್ತಿರುವುದು ಅಪರಾಧ. ಇದರ ಪರಿಣಾಮವಾಗಿ ಮರಿಯು ದೀರ್ಘಕಾಲದ ಮಾನಸಿಕ ಸಮಸ್ಯೆಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ. ಆಗ ಪ್ರಾಣಿಹಿಂಸೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮ ಸುತ್ತಮುತ್ತ ಇಂಥ ಸಂಗತಿಗಳು ಕಂಡುಬಂದಲ್ಲಿ ದಯವಿಟ್ಟು ವನ್ಯಜೀವಿ ಎಸ್​ಒಎಸ್ ಗೆ ಫೋನಾಯಿಸಿ.

ಇದನ್ನೂ ಓದಿ : Viral Video: 5 ಗಂಟೆ ಓಡಿಸಿದರೂ ಕೇವಲ ರೂ. 40 ಸಂಪಾದನೆ; ಕಣ್ಣೀರಿಟ್ಟ ಆಟೋ ಚಾಲಕ

ವನ್ಯಜೀವಿ SOS ದೆಹಲಿ-NCR (9871963535), ಆಗ್ರಾ (9917109666), ವಡೋದರಾ (9825011117), ಮತ್ತು ಜಮ್ಮು ಕಾಶ್ಮೀರ ಪ್ರದೇಶದಲ್ಲಿ 24/7 ಸಹಾಯವಾಣಿ ಲಭ್ಯ. 7006692300, 9419778280) ಸಂಪರ್ಕಿಸಬಹುದಾಗಿದೆ. ವನ್ಯಜೀವಿಗಳ ರಕ್ಷಣೆಯೊಂದಿಗೆ ಪುನರ್ವಸತಿಯನ್ನು ಈ ಮೂಲಕ ಕಲ್ಪಿಸಲಾಗುತ್ತದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:55 pm, Wed, 28 June 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ