AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಜನ್ಮದಲ್ಲಿಯೇ ವಿದ್ಯುತ್ ಕಂಡ ಉತ್ತಪ್ರದೇಶದ ವಯೋವೃದ್ಧೆ; ಇಂಥ ಅಧಿಕಾರಿಗಳು ಬೇಕು ಎನ್ನುತ್ತಿರುವ ನೆಟ್ಟಿಗರು

Electricity : ತಾನು ಬುಡ್ಡಿದೀಪದಲ್ಲಿಯೇ ಬದುಕು ಕಳೆಯುತ್ತೇನೇನೋ ಎಂದು ಬೇಸರಗೊಂಡಿದ್ದ ವಯೋವೃದ್ಧೆ ನೂರಜಹಾನಳ ಮನೆಗೆ ಸ್ವತಃ ಧಾವಿಸಿದ ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ ಆಕೆಯ ಮುಖದಲ್ಲಿ ಸಂತಸ ಅರಳಿಸಿದ್ದಾರೆ.

Viral Video: ಈ ಜನ್ಮದಲ್ಲಿಯೇ ವಿದ್ಯುತ್ ಕಂಡ ಉತ್ತಪ್ರದೇಶದ ವಯೋವೃದ್ಧೆ; ಇಂಥ ಅಧಿಕಾರಿಗಳು ಬೇಕು ಎನ್ನುತ್ತಿರುವ ನೆಟ್ಟಿಗರು
ಉತ್ತರ ಪ್ರದೇಶದ ಬುಲಂದ್​ಶಹರದ ವಯೋವೃದ್ಧೆ ನೂರ್​ಜಹಾನ್​ ಮನೆಗೆ ವಿದ್ಯುತ್​ ಸಂಪರ್ಕ ಕಲ್ಪಿಸಿದ ಖುಷಿಯಲ್ಲಿ ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ
ಶ್ರೀದೇವಿ ಕಳಸದ
|

Updated on:Jun 27, 2023 | 4:18 PM

Share

Uttar Pradesh : ಈತನಕವೂ ನಮ್ಮ ದೇಶದ ಅದೆಷ್ಟೋ ಲಕ್ಷಾಂತರ ಜನರು ಮನೆಯೊಳಗೆ ಕತ್ತಲನ್ನೇ ಉಸಿರಾಡುತ್ತಿದ್ದಾರೆ. ಆದರೂ ಕಣ್ಣುಮುಚ್ಚುವುದರೊಳಗೆ ಒಮ್ಮೆಯಾದರೂ ವಿದ್ಯುತ್ (Electricity) ನಮ್ಮ ಮನೆ ಬೆಳಗೀತೇ ಎಂದು ಬುಡ್ಡಿದೀಪವನ್ನಿಟ್ಟುಕೊಂಡು ಕನಸು ಕಾಣುತ್ತ ಜೀವಿಸುತ್ತಿದ್ದಾರೆ. ಹೀಗಿರುವಾಗ ಝಗ್ಗನೆ ಮನೆಯೊಳಗೆ ವಿದ್ಯುದ್ದೀಪ ಬೆಳಗಿದರೆ? ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ವಯೋವೃದ್ಧೆಯೊಬ್ಬರು ಇದೀಗ ತಮ್ಮ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣೀಕರ್ತರಾದವರು ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ (Anukriti Sharma). ಕೆಳಗಿನ ಈ ವಿಡಿಯೋದಲ್ಲಿ ಈ ವಿದ್ಯುದ್ಸಂಭ್ರಮ ನೋಡಿ.

ಬುಲಂದ್​ಶಹರದಲ್ಲಿ (Bulandshahar) ವಾಸಿಸುತ್ತಿರುವ ನೂರ್​ಜಹಾನ್​ ಎನ್ನುವ ವೃದ್ಧೆಯ ಮನೆಯಲ್ಲಿ ದಶಕಗಳಿಮದ ವಿದ್ಯುತ್​ ಸಂಪರ್ಕವಿಲ್ಲದೇ ಬದುಕುತ್ತಿದ್ದರು. ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ ಅವರಿಗೆ ಈಕೆಯ ಪರಿಸ್ಥಿತಿಯ ಬಗ್ಗೆ ತಿಳಿಯಿತು. ಆಗ ಈ ಕೆಲಸವನ್ನು ಯಾರಿಗೂ ವಹಿಸದೇ ತಾವೇ ಸ್ವತಃ ನೂರ್​ಜಹಾನ್​ ಅವರ ಮನೆಗೆ ಧಾವಿಸಿದರು. ನಂತರ ಅವರ ತಂಡದ ಸದಸ್ಯರು ವಿದ್ಯುತ್​ ಮೀಟರ್​ ಅಳವಡಿಸಿ ಮನೆತುಂಬಾ ಬಲ್ಬಿನ ಬೆಳಕನ್ನೂಡಿಸಿದರು. ಇಷ್ಟೇ ಅಲ್ಲ, ಸೆಖೆಗಾಲಕ್ಕಾಗಿ ಒಂದು ಪಂಖಾ ಅನ್ನೂ ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ : Viral Video: ‘ನನಗ ಬರ್ಯಾಕ ಬರಲ್ಲಲೇಪಾ, ನಮ್ ಅಜ್ಜನ್ ಕೂಡೇ ಎಬಿಸಿಡಿ ಬರ್ಸೆಕೆಂಬರ್ತೇನಿ’

ನೂರ್​ಜಹಾನ್​ ಅನುಕೃತಿ ಶರ್ಮಾ ಅವರಿಗೆ ಸಿಹಿ ತಿನ್ನಿಸಿ ಸಂತೋಷ ಹಂಚಿಕೊಂಡರು. ಅಲ್ಲಿದ್ದವರೆಲ್ಲ ಅಜ್ಜಿಯ ಖುಷಿಯನ್ನು ಅನುಭವಿಸುತ್ತ ತಮ್ಮ ಬಾಯಿಯನ್ನೂ ಸಿಹಿ ಮಾಡಿಕೊಂಡರು. ಇದು ನನ್ನ ಜೀವನದ ಅತ್ಯುದ್ಭುತ ಕ್ಷಣ ಎಂದು ನೂರ್​ಜಹಾನ್​ ಹೇಳುವಾಗ ಆಕೆಯ ಮುಖದಲ್ಲಿ ತೃಪ್ತಭಾವವಿತ್ತು. ಮೇಲಿನ ಈ ಟ್ವೀಟ್​ ಅನ್ನು ಅನುಕೃತಿ ತಮ್ಮ ಟ್ವಿಟರ್​ ಖಾತೆಯಲ್ಲಿ ಜೂ. 26ರಂದು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 9 ಲಕ್ಷ ಜನರು ನೋಡಿದ್ದಾರೆ. ಸಾವಿರಾರು ಜನರು ಅನುಕೃತಿಯವರಿಗೆ ಅಭಿನಂದನೆ ಕೋರಿದ್ದಾರೆ. ನಮಗೆ ನಿಮ್ಮಂಥ ಅಧಿಕಾರಿಗಳು ಬೇಕು. ಬಡಜನರಿಗೆ ಸಹಾಯ ಮಾಡುವಂಥ ಮನಸ್ಸುಗಳು ಆಡಳಿತಲ್ಲಿರಬೇಕು ಎಂದಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:15 pm, Tue, 27 June 23

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ