Viral Video: ಈ ಜನ್ಮದಲ್ಲಿಯೇ ವಿದ್ಯುತ್ ಕಂಡ ಉತ್ತಪ್ರದೇಶದ ವಯೋವೃದ್ಧೆ; ಇಂಥ ಅಧಿಕಾರಿಗಳು ಬೇಕು ಎನ್ನುತ್ತಿರುವ ನೆಟ್ಟಿಗರು

Electricity : ತಾನು ಬುಡ್ಡಿದೀಪದಲ್ಲಿಯೇ ಬದುಕು ಕಳೆಯುತ್ತೇನೇನೋ ಎಂದು ಬೇಸರಗೊಂಡಿದ್ದ ವಯೋವೃದ್ಧೆ ನೂರಜಹಾನಳ ಮನೆಗೆ ಸ್ವತಃ ಧಾವಿಸಿದ ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ ಆಕೆಯ ಮುಖದಲ್ಲಿ ಸಂತಸ ಅರಳಿಸಿದ್ದಾರೆ.

Viral Video: ಈ ಜನ್ಮದಲ್ಲಿಯೇ ವಿದ್ಯುತ್ ಕಂಡ ಉತ್ತಪ್ರದೇಶದ ವಯೋವೃದ್ಧೆ; ಇಂಥ ಅಧಿಕಾರಿಗಳು ಬೇಕು ಎನ್ನುತ್ತಿರುವ ನೆಟ್ಟಿಗರು
ಉತ್ತರ ಪ್ರದೇಶದ ಬುಲಂದ್​ಶಹರದ ವಯೋವೃದ್ಧೆ ನೂರ್​ಜಹಾನ್​ ಮನೆಗೆ ವಿದ್ಯುತ್​ ಸಂಪರ್ಕ ಕಲ್ಪಿಸಿದ ಖುಷಿಯಲ್ಲಿ ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ
Follow us
|

Updated on:Jun 27, 2023 | 4:18 PM

Uttar Pradesh : ಈತನಕವೂ ನಮ್ಮ ದೇಶದ ಅದೆಷ್ಟೋ ಲಕ್ಷಾಂತರ ಜನರು ಮನೆಯೊಳಗೆ ಕತ್ತಲನ್ನೇ ಉಸಿರಾಡುತ್ತಿದ್ದಾರೆ. ಆದರೂ ಕಣ್ಣುಮುಚ್ಚುವುದರೊಳಗೆ ಒಮ್ಮೆಯಾದರೂ ವಿದ್ಯುತ್ (Electricity) ನಮ್ಮ ಮನೆ ಬೆಳಗೀತೇ ಎಂದು ಬುಡ್ಡಿದೀಪವನ್ನಿಟ್ಟುಕೊಂಡು ಕನಸು ಕಾಣುತ್ತ ಜೀವಿಸುತ್ತಿದ್ದಾರೆ. ಹೀಗಿರುವಾಗ ಝಗ್ಗನೆ ಮನೆಯೊಳಗೆ ವಿದ್ಯುದ್ದೀಪ ಬೆಳಗಿದರೆ? ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ವಯೋವೃದ್ಧೆಯೊಬ್ಬರು ಇದೀಗ ತಮ್ಮ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣೀಕರ್ತರಾದವರು ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ (Anukriti Sharma). ಕೆಳಗಿನ ಈ ವಿಡಿಯೋದಲ್ಲಿ ಈ ವಿದ್ಯುದ್ಸಂಭ್ರಮ ನೋಡಿ.

ಬುಲಂದ್​ಶಹರದಲ್ಲಿ (Bulandshahar) ವಾಸಿಸುತ್ತಿರುವ ನೂರ್​ಜಹಾನ್​ ಎನ್ನುವ ವೃದ್ಧೆಯ ಮನೆಯಲ್ಲಿ ದಶಕಗಳಿಮದ ವಿದ್ಯುತ್​ ಸಂಪರ್ಕವಿಲ್ಲದೇ ಬದುಕುತ್ತಿದ್ದರು. ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ ಅವರಿಗೆ ಈಕೆಯ ಪರಿಸ್ಥಿತಿಯ ಬಗ್ಗೆ ತಿಳಿಯಿತು. ಆಗ ಈ ಕೆಲಸವನ್ನು ಯಾರಿಗೂ ವಹಿಸದೇ ತಾವೇ ಸ್ವತಃ ನೂರ್​ಜಹಾನ್​ ಅವರ ಮನೆಗೆ ಧಾವಿಸಿದರು. ನಂತರ ಅವರ ತಂಡದ ಸದಸ್ಯರು ವಿದ್ಯುತ್​ ಮೀಟರ್​ ಅಳವಡಿಸಿ ಮನೆತುಂಬಾ ಬಲ್ಬಿನ ಬೆಳಕನ್ನೂಡಿಸಿದರು. ಇಷ್ಟೇ ಅಲ್ಲ, ಸೆಖೆಗಾಲಕ್ಕಾಗಿ ಒಂದು ಪಂಖಾ ಅನ್ನೂ ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ : Viral Video: ‘ನನಗ ಬರ್ಯಾಕ ಬರಲ್ಲಲೇಪಾ, ನಮ್ ಅಜ್ಜನ್ ಕೂಡೇ ಎಬಿಸಿಡಿ ಬರ್ಸೆಕೆಂಬರ್ತೇನಿ’

ನೂರ್​ಜಹಾನ್​ ಅನುಕೃತಿ ಶರ್ಮಾ ಅವರಿಗೆ ಸಿಹಿ ತಿನ್ನಿಸಿ ಸಂತೋಷ ಹಂಚಿಕೊಂಡರು. ಅಲ್ಲಿದ್ದವರೆಲ್ಲ ಅಜ್ಜಿಯ ಖುಷಿಯನ್ನು ಅನುಭವಿಸುತ್ತ ತಮ್ಮ ಬಾಯಿಯನ್ನೂ ಸಿಹಿ ಮಾಡಿಕೊಂಡರು. ಇದು ನನ್ನ ಜೀವನದ ಅತ್ಯುದ್ಭುತ ಕ್ಷಣ ಎಂದು ನೂರ್​ಜಹಾನ್​ ಹೇಳುವಾಗ ಆಕೆಯ ಮುಖದಲ್ಲಿ ತೃಪ್ತಭಾವವಿತ್ತು. ಮೇಲಿನ ಈ ಟ್ವೀಟ್​ ಅನ್ನು ಅನುಕೃತಿ ತಮ್ಮ ಟ್ವಿಟರ್​ ಖಾತೆಯಲ್ಲಿ ಜೂ. 26ರಂದು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 9 ಲಕ್ಷ ಜನರು ನೋಡಿದ್ದಾರೆ. ಸಾವಿರಾರು ಜನರು ಅನುಕೃತಿಯವರಿಗೆ ಅಭಿನಂದನೆ ಕೋರಿದ್ದಾರೆ. ನಮಗೆ ನಿಮ್ಮಂಥ ಅಧಿಕಾರಿಗಳು ಬೇಕು. ಬಡಜನರಿಗೆ ಸಹಾಯ ಮಾಡುವಂಥ ಮನಸ್ಸುಗಳು ಆಡಳಿತಲ್ಲಿರಬೇಕು ಎಂದಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:15 pm, Tue, 27 June 23

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು