AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral:ಇಷ್ಟೆಲ್ಲಾ ಹೋಮ್ ವರ್ಕ್ ಯಾಕ್ ಕೊಡ್ತೀರಾ; ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿ ತೊಂದರೆ ಕೊಟ್ಟ ತಂದೆಯ ಬಂಧನ

ಈಗೀನ ಕಾಲದ ಶಾಲಾ ಮಕ್ಕಳ ಹೋಮ್ವರ್ಕ್ ಲಿಸ್ಟ್ ನೋಡಿದ್ರೆ, ಪೋಷಕರಿಗೂ ಒಂದು ಬಾರಿ ತಲೆ ಸುತ್ತು ಬರುತ್ತೆ. ಹೌದು ಮಕ್ಕಳಿಗೆ ರಾಶಿರಾಶಿ ಹೋಮ್ವರ್ಕ್ ಕೊಡ್ತಾರೆ. ಇದೇ ರೀತಿ ತನ್ನ ಮಗನಿಗೆ ಸಿಕ್ಕಾಪಟ್ಟೆ ಹೋಮ್ವರ್ಕ್ ನೀಡ್ತಾರೆ ಅಂತ ಕೋಪಗೊಂಡ ವ್ಯಕ್ತಿಯೊಬ್ಬರು ಶಾಲಾ ಶಿಕ್ಷಕರಿಗೆ ನಿರಂತರವಾಗಿ ಕರೆ ಮಾಡಿದ್ದಾರೆ. ಈ ಕಿರಿಕಿರಿಯಿಂದ ಬೇಸತ್ತಾ ಶಾಲಾ ಶಿಕ್ಷರು ದೂರು ಕೊಟ್ಟಿದ್ದು, ಇದೀಗ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

Viral:ಇಷ್ಟೆಲ್ಲಾ ಹೋಮ್ ವರ್ಕ್ ಯಾಕ್ ಕೊಡ್ತೀರಾ; ಶಿಕ್ಷಕರಿಗೆ ಪದೇ ಪದೇ  ಕರೆ ಮಾಡಿ ತೊಂದರೆ ಕೊಟ್ಟ  ತಂದೆಯ ಬಂಧನ
ಮಾಲಾಶ್ರೀ ಅಂಚನ್​
| Edited By: |

Updated on: Mar 26, 2024 | 7:24 PM

Share

ಈಗೀನ ಕಾಲದ ಮಕ್ಕಳಿಗೆ ನೀಡುವ ಹೋಮ್ವರ್ಕ್ ಗಳನ್ನು ನೋಡಿದ್ರೆ ಪೋಷಕರೇ ಒಂದು ಬಾರಿ ಸುಸ್ತಾಗಿ ಬಿಡುತ್ತಾರೆ. ಹೌದು ಶಾಲಾ ಮಕ್ಕಳಿಗೆ ಪ್ರತಿನಿತ್ಯ ರಾಶಿ ರಾಶಿ ಹೋಮ್ ವರ್ಕ್ ಕೊಡ್ತಾರೆ. ಅದರಲ್ಲೂ ಮಕ್ಕಳ ಕೈಯಿಂದ ಈ ಹೋಮ್ವರ್ಕ್ ಮಾಡಿಸುವುದೇ ಅಮ್ಮ ಅಮ್ಮನಿಗೆ ದೊಡ್ಡ ತಲೆ ನೋವು. ಇದೇ ರೀತಿ ಇಲ್ಲೊಬ್ಬರು ವ್ಯಕ್ತಿ ಮಗನಿಗೆ ನೀಡಿದ ರಾಶಿ ರಾಶಿ ಹೋಮ್ವರ್ಕ್ ನೋಡಿ ಚಿಂತೆಗೀಡಾಗಿ, ಯಾಕೆ ಇಷ್ಟೆಲ್ಲಾ ಹೋಮ್ವರ್ಕ್ ನೀಡೋದು ಅಂತ ಶಾಲಾ ಶಿಕ್ಷಕರಿಗೆ ನಿರಂತರವಾಗಿ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ. ಇದರಿಂದ ಬೇಸತ್ತಾ ಶಾಲಾ ಆಡಳಿತ ಮಂಡಳಿ ಆ ವ್ಯಕ್ತಿಯ ವಿರುದ್ಧ ಠಾಣೆಯನ್ನು ದೂರನ್ನು ನೀಡಿದ್ದು, ಇದೀಗ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ ಈ ವಿಚಿತ್ರ ಘಟನೆ ಫೆಬ್ರವರಿ 29 ರಂದು ಅಮೇರಿಕಾದ ಓಹಿಯೋದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾಗಿರುವಂತಹ ಆಡಂ ಸೈಜ್ಮೋರ್ ಎಂಬವರೇ ಬಂಧಿತ ವ್ಯಕ್ತಿ. ಆಡಂ ಅವರ ಮಗ ಕ್ರೇಮರ್ ಎಲಿಮೆಂಟರಿ ಶಾಲೆಯಲ್ಲಿ ಓದುತ್ತಿದ್ದು, ಶಾಲೆಯಲ್ಲಿ ಮಗನಿಗೆ ಸಿಕ್ಕಾಪಟ್ಟೆ ಹೋಮ್ವರ್ಕ್ ನೀಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಆಡಂ ಶಾಲಾ ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶಾಲೆಯ ಪ್ರಾಂಶುಪಾಲರಾದ ಜೇಸನ್ ಮೆರ್ಜ್ ಅವರಿಗೆ ಕರೆ ಮಾಡಿ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ನಂತರವೂ ಆಡಂ ಶಾಲಾ ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮನ ಮಡಿಲು ಸೇರಿದ ಕಂದಮ್ಮ, ಆನೆಗಳ ಭಾವನಾತ್ಮಕ ಚಿತ್ರ ಹೇಗಿದೆ? ನೋಡಿ 

ಶಿಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದನ್ನು ಕಂಡು ಈ ಬಗ್ಗೆ ದೂರು ನೀಡಲು ಈ ವ್ಯಕ್ತಿ ಆಕ್ಸ್ಫರ್ಡ್ ಪೋಲೀಸ್ ಇಲಾಖೆಗೂ ಕರೆ ಮಾಡಿದ್ದಾರೆ. ಠಾಣೆಗೆ ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ 18 ಬಾರಿ ಕರೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಫೋನ್ ಮೂಲಕ ಹಿರಿಯ ಪೊಲೀಸ್ ಅಧಿಕಾರಿಯನ್ನು ತಲುಪಲು ಸಾಧ್ಯವಾಗದಿದ್ದಾಗ ಆಡಂ ಅಧಿಕಾರಿಯನ್ನು ಅವರ ಮನೆಯಲ್ಲಿಯೇ ಭೇಟಿಯಾಗುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಹೀಗೆ ಪದೇ ಪದೇ ಕರೆ ಮಾಡಿ ಪೊಲೀಸರಿಗೆ ಹಾಗೂ ಶಾಲಾ ಶಿಕ್ಷಕರಿಗೆ ಕಿರಿಕಿರಿ ಮಾಡಿದ ಹಿನ್ನೆಯಲ್ಲಿ ಆಡಂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

“ಇದೊಂದು ವಿಚಿತ್ರ ಪ್ರಕರಣವಾಗಿದ್ದು, ಮಕ್ಕಳಿಗೆ ಒತ್ತಡ ತರುವಷ್ಟು ಹೋಮ್ವರ್ಕ್ ಅನ್ನು ಈ ಶಾಲೆಯಲ್ಲಿ ನೀಡುವುದಿಲ್ಲ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಇನ್ನು ಕರೆ ಮಾಡಿ ಶಾಲಾ ಶಿಕ್ಷಕರಿಗೆ ಕಿರಿಕಿರಿಯುಂಟುಮಾಡಿದ ವ್ಯಕ್ತಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ಸಿಂಗಲ್ ಪೇರೆಂಟ್ ಆಗಿದ್ದು, ಆತ ತನ್ನ ಮಕ್ಕಳಿಗೆ ಉತ್ತಮವಾದುದನ್ನೇ ಬಯಸುತ್ತಿದ್ದ, ಅದೇ ಕಾರಣಕ್ಕೆ ಶಾಲಾ ಶಿಕ್ಷಕರಿಗೂ ಕರೆ ಮಾಡಿ ಕಿರಿಕಿರಿ ಮಾಡಿದ್ದು” ಎಂದು ಆಕ್ಸ್ಫರ್ಡ್ ಪೊಲೀಸ್ ಇಲಾಖೆಯ ಡಿಟೆಕ್ವಿವ್ ಸಾರ್ಜೆಂಟ್ ಆಡಮ್ ಪ್ರೈಸ್ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ