Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಎಷ್ಟು ಮುದ್ದಾಗಿದೆ ವಿದ್ಯಾರ್ಥಿಯ ಕೈ ಬರಹ, ನೆಟ್ಟಿಗರು ಫುಲ್ ಫಿದಾ

ನಾವೆಲ್ಲರೂ ಸಣ್ಣವರಿದ್ದಾಗ ಕೈಬರಹ ಸುಂದರವಾಗಿಲ್ಲ ಎಂದು ಎಷ್ಟೋ ಸಲ ಶಿಕ್ಷಕರ ಕೈಯಲ್ಲಿ ಬೈಗುಳ ತಿಂದಿರುತ್ತೇವೆ. ಈ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮುತ್ತು ಪೋಣಿಸಿರುವ ಅಕ್ಷರಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಬರವಣಿಗೆಯೂ ವೈರಲ್ ಆಗಿದೆ. ಮುತ್ತು ಪೋಣಿಸಿರುವಂತೆ ಕೈಬರಹವನ್ನು ಕಂಡು ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Viral : ಎಷ್ಟು ಮುದ್ದಾಗಿದೆ ವಿದ್ಯಾರ್ಥಿಯ ಕೈ ಬರಹ, ನೆಟ್ಟಿಗರು ಫುಲ್ ಫಿದಾ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 6:19 PM

ಮಕ್ಕಳಿಗೆ ಚಿಕ್ಕದಿನಿಂದಲೇ ಶಾಲೆಯಲ್ಲಿ ಅಕ್ಷರಭ್ಯಾಸ, ಬರವಣಿಗೆಯ ಶಿಕ್ಷಕರು ತಿಳಿಹೇಳುತ್ತಲೇ ಇರುತ್ತಾರೆ. ಮಕ್ಕಳ ಅಕ್ಷರ ಚೆನ್ನಾಗಿರದಿದ್ದರೆ ಇದೇನು ಕಾಗೆ ಕಾಲು, ಗುಬ್ಬಿ ಕಾಲಿನಂತೆ ಎಂದು ಹೇಳುವುದನ್ನು ಕೇಳಿರಬಹುದು. ಬಹುತೇಕರು ಸಣ್ಣವರಿದ್ದಾಗ ಶಿಕ್ಷಕರಲ್ಲಿ ಕೈ ಬರಹ ಚೆನ್ನಾಗಿಲ್ಲವೆಂದೇ ಎಷ್ಟೋ ಸಲ ಬೈಗುಳ ತಿಂದಿರುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ವಿದ್ಯಾರ್ಥಿಯ ಬರಹವು ಮುತ್ತು ಪೋಣಿಸಿದಂತೆ ಇದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿ ಬರವಣಿಗೆಯ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯಲ್ಲಿ ಮುದ್ದಾದ ಅಕ್ಷರಗಳನ್ನು ನೋಡಬಹುದು. ತನ್ನ ಉತ್ತರಪತ್ರಿಕೆಯನ್ನು ಕ್ಯಾಲಿಗ್ರಫಿಯಲ್ಲಿ ಬರೆದಿದ್ದಾನೆ. ಇದನ್ನು ಕಂಪ್ಯೂಟರ್‌ನಿಂದ ಪ್ರಿಂಟ್ ತೆಗೆದಿರುವ ಆಗಿದೆ. ಈ ಪೋಸ್ಟ್ ನೊಂದಿಗೆ ‘ಯಾರಿಗೆ ತುಂಬಾ ಸಮಯವಿದೆ?’ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಪಾಕಿಸ್ತಾನದ ಪರಚಿನಾರ್ ಜಿಲ್ಲೆಯ ಕುರ್ರಂ ಶಾಲೆಯ ವಿದ್ಯಾರ್ಥಿ ಎನ್ನಲಾಗಿದ್ದು ಈ ಉತ್ತರ ಪತ್ರಿಕೆಯಲ್ಲಿನ ಬರವಣಿಯನ್ನು ಒಮ್ಮೆ ನೋಡಿದರೆ ಸಾಲದು ಎಂದೆನಿಸಿದರೆ ಅಚ್ಚರಿ ಪಡಬೇಕಿಲ್ಲ. ಹೌದು, ಉತ್ತರಗಳ ಹೆಡ್‌ಲೈನ್ ಮತ್ತು ಉತ್ತರ ಸಂಖ್ಯೆಯನ್ನು ಸುಂದರವಾಗಿ ಹೈಲೈಟ್ ಮಾಡಿದ್ದು, ನೋಡುವುದಕ್ಕೂ ಮುಂದಾಗಿದೆ. ಈ ಪೋಸ್ಟನ್ನು ಹದಿಮೂರು ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ; ಆಭರಣ ಕಳಚುತ್ತಾ, ಲಿಪ್​​ ಲಾಕ್​​ ಮಾಡುತ್ತಾ ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡ ನವಜೋಡಿಗಳು

ಅದಲ್ಲದೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನೆಟ್ಟಿಗರೊಬ್ಬರು, ಅಕ್ಷರವು ಮುತ್ತು ಪೋಣಿಸಿದಂತೆ ಇದೆ ಎಂದಿದ್ದಾರೆ. ಮತ್ತೊಬ್ಬರು, ‘ಚಲಿಸುವ ಮುದ್ರಣ ಯಂತ್ರದಂತೆ ತೋರುತ್ತಿದೆ, ಪ್ರತಿ ತರಗತಿಯಲ್ಲಿ ಅಂತಹ ವಿದ್ಯಾರ್ಥಿ ಇರುತ್ತಾನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, ‘ಅವನು ವಿದ್ಯಾರ್ಥಿಯೋ ಅಥವಾ ಮುದ್ರಕನೋ?, ಅವರ ಉತ್ತಮ ಕೈಬರಹಕ್ಕಾಗಿ 10 ಅಂಕಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ ‘ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!