AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Telia Bhola Fish: ಬಲೆಗೆ ಸಿಕ್ಕ 75 ಕೆಜಿ ದೈತ್ಯ ಮೀನು ಬರೋಬ್ಬರಿ 36 ಲಕ್ಷ ರೂಪಾಯಿಗೆ ಮಾರಾಟ; ಮೀನುಗಾರರು ಫುಲ್ ಖುಷ್

ನದಿಯಲ್ಲಿ ಬಲೆಯಲ್ಲಿ ಸಿಕ್ಕ ಟೆಲಿಯಾ ಭೋಲಾ ಮೀನಿನಿಂದ ಮೀನುಗಾರರ ಅದೃಷ್ಟವೇ ಬದಲಾಗಿದೆ. ಸುಮಾರು 36 ಲಕ್ಷ ರೂಪಾಯಿಗೆ ಮೀನು ಮಾರಾಟವಾಗಿದೆ.

Telia Bhola Fish: ಬಲೆಗೆ ಸಿಕ್ಕ 75 ಕೆಜಿ ದೈತ್ಯ ಮೀನು ಬರೋಬ್ಬರಿ 36 ಲಕ್ಷ ರೂಪಾಯಿಗೆ ಮಾರಾಟ; ಮೀನುಗಾರರು ಫುಲ್ ಖುಷ್
ಟೆಲಿಯಾ ಭೋಲಾ ಮೀನು
TV9 Web
| Edited By: |

Updated on:Oct 27, 2021 | 11:08 AM

Share

ಮೀನುಗಾರರು ನದಿಯಲ್ಲಿ ಬಲೆ ಹಾಕಿದರೆ ಸಾಕು ಗುಂಪು ಗುಂಪು ಮೀನುಗಳು ಬಲೆಗೆ ಬಿದ್ದಿರುತ್ತಿತ್ತು. ಆದರೆ ಅಂದು ಮಾತ್ರ ಮೀನುಗಾರರ ಅದೃಷ್ಟವೇ ಬದಲಾಗುವ ದಿನವಾಗಿತ್ತು. ಎಲ್ಲಾ ದಿನದಂತೆಯೇ ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಿದ್ದಾನೆ. ಬಲೆಗೆ ಸಿಕ್ಕಿದ ದೈತ್ಯ ಮೀನು ನೋಡಿ ಮೀನುಗಾರರು ಆಶ್ಚರ್ಯಚಕಿತರಾದರು. ಅದರಲ್ಲಿಯೂ ಬಲೆಗೆ ಸಿಕ್ಕ ಟೆಲಿಯಾ ಭೋಲಾ ಮೀನಿನಿಂದ ಮೀನುಗಾರರ ಅದೃಷ್ಟವೇ ಬದಲಾಗಿದೆ.

ಪಶ್ಚಿಮ ಬಂಗಾಳದ ಸುಂದರ್​ಬನ್​ ನದಿಯಲ್ಲಿ ಸುಮಾರು 7 ಅಡಿ ಉದ್ದ ಮತ್ತು 78.4 ಕಿಲೋ ತೂಕದ ದೈತ್ಯಾಕಾರದ ಟೆಲಿಯಾ ಭೋಲಾ ಮೀನನ್ನು ಕಂಡ ನೀನುಗಾರರ ಗುಂಪು ಆಶ್ಚರ್ಯಗೊಂಡರು. ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ದೈತ್ಯಾಕಾರದ ಮೀನನ್ನು ಎಳೆದು ತರಲು ಮೀನುಗಾರರು ಹರಸಾಹವೇ ಪಡೆಬೇಕಾಯಿತು. ಮನುಷ್ಯನ ಸಾಮಾನ್ಯ ಎತ್ತರದಷ್ಟೇ ಇದ್ದ ಆ ಮೀನು ಕಂಡು ಮೀನುಗಾರರಿಗೆ ಅಚ್ಚರಿಯಾಗಿದೆ. ಅಪರೂಪದ ಮೀನನ್ನು ನೋಡಲು ಸ್ಥಳೀಯರು ಮುಗಿ ಬಿದ್ದಿದ್ದು, ಇದರ ಮಾರಾಟದಿಂದ ಮೀನುಗಾರರು 36 ಲಕ್ಷ ರೂಪಾಯಿ ಗಳಿಸಿಕೊಂಡಿದ್ದಾರೆ.

ಕಳೆದ ಶನಿವಾರ ದೈತ್ಯ ಮೀನನ್ನು ಮಾರಾಟ ಮಾಡಲಾಯಿತು. ಇದೇ ಮೊದಲಿಗೆ ಇಷ್ಟೊಂದು ಬೃಹತ್ ಗಾತ್ರದ ಮೀನನ್ನು ನೋಡಿ ಜನರು ಆಶ್ಚರ್ಯಗೊಂಡರು. ಈ ಮೀನನ್ನು ಸುಮಾರು 36 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿದ್ದು, ಕೋಲ್ಕತ್ತಾ ಮೂಲದ ಮೀನು ವ್ಯಾಪಾರ ಕಂಪನಿ ಇದನ್ನು ಖರೀದಿಸಿತು ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಈ ಮಾರುಕಟ್ಟೆಯಲ್ಲಿ ನಾವು ಇಷ್ಟು ದೈತ್ಯ ಮೀನನ್ನು ಎಂದೂ ನೋಡಿರಲಿಲ್ಲ. ಹರಾಜಿನಲ್ಲಿ ಪ್ರತಿ ಕಿಲೋಗೆ 47,880 ರೂಪಾಯಿಗೆ ಮೀನನ್ನು ಮಾರಾಟ ಮಾಡಲಾಗಿದೆ. ಆಡುಮಾತಿನಲ್ಲಿ ಟೆಲಿಬಾ ಭೋಲಾ ಎಂದು ಕರೆಯಲ್ಪಡುವ ದೈತ್ಯ ಮೀನು ಅಪಾರ ಔಷಧೀಯ ಗುಣಗಳನ್ನು ಹೊಂದಿದೆ. ಮೀನಿನ ಮಾಂಸದಲ್ಲಿ ಅನೇಕ ಪೌಷ್ಟಿಕ ಗುಣಗಳನ್ನು ಹೊಂದಿದೆ. ಇದು ತುಂಬಾ ದುಬಾರಿ ಮೀನು ಎಂದು ಮೀನುಗಾರರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಂಡ ಸೈನಿಕರಿಗೆ ಸಲ್ಯೂಟ್ ಮಾಡಿದ 4 ವರ್ಷದ ಬಾಲಕ; ವಿಡಿಯೋ ವೈರಲ್

Viral Video: ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯ ಬೆಲ್ಲಿ ಡಾನ್ಸ್​; ನೆಟ್ಟಿಗರೆಲ್ಲಾ ಫಿದಾ

Published On - 11:06 am, Wed, 27 October 21

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ