AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ನಿಮಿಷ ಮೊದಲೇ ಯಾಕೆ ಲಾಗ್ ಔಟ್ ಆಗಿದ್ದೀರಿ? ಎಚ್​ಆರ್​​ ಪ್ರಶ್ನೆಗೆ ಉದ್ಯೋಗಿ ತಬ್ಬಿಬ್ಬು

ಕೆಲಸದ ಸಮಯ ಮುಗಿಯುವ ಮುನ್ನವೇ ಲಾಗ್‌ಔಟ್ ಆದ ಉದ್ಯೋಗಿಯನ್ನು ಎಚ್​​ಆರ್ ಪ್ರಶ್ನಿಸಿದ ಪೋಸ್ಟ್ ವೈರಲ್ ಆಗಿದೆ. ಕೆಲಸ ಮುಗಿದರೂ ನಿಗದಿತ ಸಮಯದವರೆಗೂ ಇರಬೇಕೆಂಬ ನೀತಿಗೆ ಉದ್ಯೋಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕಾರ್ಪೊರೇಟ್ ನೀತಿ-ನಿಯಮಗಳು, ಉದ್ಯೋಗಿಗಳ ಸ್ವಾತಂತ್ರ್ಯ ಮತ್ತು ಕೆಲಸದ ಸಮಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ನಾಲ್ಕು ನಿಮಿಷ ಮೊದಲೇ ಯಾಕೆ ಲಾಗ್ ಔಟ್ ಆಗಿದ್ದೀರಿ? ಎಚ್​ಆರ್​​ ಪ್ರಶ್ನೆಗೆ ಉದ್ಯೋಗಿ ತಬ್ಬಿಬ್ಬು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 30, 2025 | 11:06 AM

Share

HR (Human resources) ಕಂಪನಿಯಲ್ಲಿ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಲು ಇರುವವರು, ಒಂದು ವೇಳೆ ಕಂಪನಿಯ ರೂಲ್ಸ್​​​ಗಳನ್ನು ಫಾಲೋ ಮಾಡದ್ದಿದ್ದರೆ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಅಂತಹದೇ ಒಂದು ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಮೆರಿಕ ಮೂಲದ ಕಂಪನಿಯ ಭಾರತೀಯ ಎಚ್​ಆರ್ ತನ್ನ ಉದ್ಯೋಗಿಗೆ ಕಂಪನಿಯ ನೀತಿ-ನಿಯಮದ ಬಗ್ಗೆ ಪಾಠ ಮಾಡಿರುವ ಪೋಸ್ಟ್​ವೊಂದು ವೈರಲ್​ ಆಗಿದೆ. ಪೋಸ್ಟ್​​ನಲ್ಲಿ ಉದ್ಯೋಗಿಯೊಬ್ಬರು ಕೆಲಸದ ಸಮಯ ಮುಗಿಯುವ ಮೊದಲೇ ಲಾಗ್ಔಟ್​​ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಪೋಸ್ಟ್​​ ಬಗ್ಗೆ ಸೋಶಿಯಲ್​​ ಮೀಡಿಯದಲ್ಲಿ ಚರ್ಚೆಗಳು ನಡೆಯುತ್ತಿದೆ.

ವೈರಲ್​​​ ಆಗಿರುವ ಪೋಸ್ಟ್​​ನಲ್ಲಿ ಹೀಗಿವೆ, ” ಇಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, 6:30 ಕ್ಕಿಂತ ಮೊದಲು ಯಾಕೆ ಲಾಗ್ ಔಟ್ ಆಗಿದ್ದೀರಿ? ಎಂದು ನನ್ನ ಎಚ್​​ಆರ್​​ ಕೇಳಿದ್ದಾರೆ. ಇದಕ್ಕೆ ನಾನು, ಸರ್​​ ನನ್ನ ಕೆಲಸ 4 ನಿಮಿಷಕ್ಕೆ ಮುಗಿದ್ದಿದೆ, ಲಾಗಿನ್ ಸಮಯ ಬೆಳಿಗ್ಗೆ 9:18ಕ್ಕೆ ಎಂದು ಹೇಳಿದೆ, ಆದರೆ ಎಚ್​ಆರ್​ ಇಲ್ಲ ಇದನ್ನು ಕೇಳಲು ನಾನು ತಯಾರಿಲ್ಲ, ನೀವು ನಿಮ್ಮ ಇಚ್ಛೆಯಂತೆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ನಿಮ್ಮ ಶಿಫ್ಟ್ 6:30 ಕ್ಕೆ ಕೊನೆಗೊಳ್ಳುತ್ತದೆ, ಅದ್ರೂ ಯಾಕೆ ಬೇಗ ಲಾಗ್​​​ಔಟ್​​ ಆಗಿದ್ದೀರಾ? ಎಂದು ಕೇಳಿದ್ದಾರೆ. ಎಚ್​ಆರ್ ಅವರ​ ಈ ಪ್ರಶ್ನೆ ನನಗೆ ಸ್ವಲ್ಪ ಕೋಪ ಬಂತು, ಸರ್​ ಇತರರು ಸಹ ಬೇಗನೆ ಕೆಲಸ ಮುಗಿಸುತ್ತಾರೆ. ಆದ್ರೂ ಎಲ್ಲರೂ 6:30 ಕ್ಕೆ ಲಾಗ್​​ಔಟ್​​​ ಆಗುತ್ತಾರೆ ಎಂದು ಉತ್ತರಿಸಿದೆ. ಆದ್ರೂ ನಮ್ಮ ಎಚ್​ಆರ್​​ ಈ ಯಾವುದನ್ನೂ ಕೂಡ ಕಿವಿಗೆ ಹಾಕಿಕೊಳ್ಳದೇ, ಇತರರಂತೆ ನಿಮ್ಮ ಶಿಫ್ಟ್​​​ ಸಮಯದಲ್ಲೇ ಬನ್ನಿ ಎಂದು ಎಚ್​ಆರ್​​ ಹೇಳಿದ್ದಾರೆ. ಆದರೆ ನಾನು 9 ಗಂಟೆ ಕೆಲಸ ಮಾಡಿಯೇ ಮಾಡುತ್ತೇನೆ. ಯಾವ ಟೈಮ್​​ ಆದ್ರೆ ಏನು? ಎಂದು ಪೋಸ್ಟ್​​ನಲ್ಲಿ ಉದ್ಯೋಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಈ ಟೈಮ್‌ನಲ್ಲಿ ಕೆಲ್ಸದಿಂದ ವಜಾಗೊಳಿಸಿದ್ರೆ ತೊಂದರೆಯೇ ಹೆಚ್ಚು ಎಂದ ಸಾಫ್ಟ್‌ವೇರ್‌ ಇಂಜಿನಿಯರ್

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

Untitled Design

ಉದ್ಯೋಗಿ ನಾನು ಈಗಲೇ ರಾಜೀನಾಮೆಯನ್ನು ನೀಡುತ್ತೇನೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಪೋಸ್ಟ್​​ಗೆ ಸೋಶಿಯಲ್​ ಮೀಡಿಯಾದಲ್ಲಿ ವಿಭಿನ್ನ ರೀತಿಯಲ್ಲಿ ಬಳಕೆದಾರರು ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರ ಇದು ಎಚ್​ಆರ್​ ಅವರ ಅನಗತ್ಯ ನಿರ್ವಹಣೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನನ್ನ ಮೊದಲ ಕಂಪನಿಯಲ್ಲಿ ಈ ನಿಯಮವಿತ್ತು ಮತ್ತು ಬಹುತೇಕ ಎಲ್ಲರೂ ಅದನ್ನು ಅನುಸರಿಸಿದರು ಎಂದು ಹೇಳಿದ್ದಾರೆ. ನನ್ನ ಕಂಪನಿ ಈ ರೀತಿ ಸಮಯವನ್ನು ಟ್ರ್ಯಾಕ್ ಮಾಡಿದ್ರೆ, ನಾನು ಜೈಲಿನಲ್ಲಿರುತ್ತೇನೆ. ದಯವಿಟ್ಟು ರಾಜೀನಾಮೆ ನೀಡಿ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

​​​​​

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ