AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ ಸ್ಟಿಕರ್​; ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಹಾರೈಸಲು ಹೀಗೊಂದು ಉಪಾಯ ಕಂಡುಕೊಂಡ ಐಎಎಸ್​ ಅಧಿಕಾರಿ

UPSC : ಐಎಎಸ್​ ಅಧಿಕಾರಿ ಅವನೀಶ ಶರಣ ಅವರ ಈ ನಡೆಗೆ, ‘ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅನೇಕರಿಗೆ ನಿಮ್ಮ ಈ ಸ್ಪಂದನೆ ಶಕ್ತಿ ನೀಡುವಲ್ಲಿ ಎರಡು ಮಾತಿಲ್ಲ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ’ ಎಂದಿದ್ದಾರೆ ನೆಟ್ಟಿಗರು.

ಬೈಕ್​ ಸ್ಟಿಕರ್​; ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಹಾರೈಸಲು ಹೀಗೊಂದು ಉಪಾಯ ಕಂಡುಕೊಂಡ ಐಎಎಸ್​ ಅಧಿಕಾರಿ
IAS Awanish Sharan shares about a bike sticker netizens react
TV9 Web
| Edited By: |

Updated on:Nov 08, 2022 | 10:42 AM

Share

Viral : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದೆಂದರೆ ಎಷ್ಟು ಕಷ್ಟ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದೇ. ಅನೇಕ ಪ್ರಯತ್ನಗಳ ನಂತರವೂ ಅಲ್ಲಿ ಫಲ ಸಿಗುವ ಬಗ್ಗೆ ಖಚಿತತೆ ಇರುವುದಿಲ್ಲ. ಆದರೂ ಆಕಾಂಕ್ಷಿಗಳು ಈ ಸವಾಲನ್ನು ದಿಟ್ಟವಾಗಿ ತೆಗೆದುಕೊಳ್ಳಲೇಬೇಕು. ಐಎಎಸ್​ ಅಧಿಕಾರಿ ಅವನೀಶ ಶರಣ್​ ತಮ್ಮ ಬೈಕ್​ ಮೇಲೆ ಸ್ಟಿಕರ್ ಅಂಟಿಸಿಕೊಂಡು ಪೋಸ್ಟ್ ಮಾಡಿದ ಫೋಟೋ ಇದೀಗ ವೈರಲ್ ಆಗುತ್ತಿದೆ. UPSC-Aspirants ಎಂಬ ಸ್ಟಿಕರ್ ಮೂಲಕ ಯುಪಿಎಸ್​ಸಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದ್ದಾರೆ. ನೆಟ್ಟಿಗರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ಬೈಕ್​ಗಳ ಮೇಲೆ ತಮ್ಮ ಅಥವಾ ಕುಟುಂಬಸ್ಥರ ಹೆಸರುಗಳನ್ನು ಅಥವಾ ಇನ್ನೇನೋ ಟ್ಯಾಗ್​​ಲೈನ್​ಗಳನ್ನು ಬೈಕ್​ಗಳ ಮೇಲೆ ಅಂಟಿಸಿಕೊಂಡಿರುವುದನ್ನು ನೋಡಿರುತ್ತೀರಿ. ಆದರೆ ಐಎಎಸ್​ ಅಧಿಕಾರಿ ಅವನೀಶ ಶರಣ್ ತಮ್ಮ ಬೈಕಿಗೆ ಅಂಟಿಸಿಕೊಂಡ ಈ ಸ್ಟಿಕರ್​ ನೆಟ್ಟಿಗರನ್ನು ಕುತೂಹಲಕ್ಕೆ ಬೀಳಿಸಿದೆ. ಜೊತೆಗೆ ಯುಪಿಎಸ್​ಸಿ ಅಭ್ಯರ್ಥಿಗಳಿಗೆ ಶಕ್ತಿ ಮತ್ತು ಪ್ರೋತ್ಸಾಹವನ್ನು ನೀಡಿದೆ.

ಛತ್ತೀಸ್​ಗಢ ಕೇಡರ್​ನಲ್ಲಿರುವ ಈ ಅಧಿಕಾರಿಗಳ ಈ ನಡೆಯನ್ನು ಕೆಲವರು ಶ್ಲಾಘಿಸಿದ್ದಾರೆ. ಆಗಾಗ ಅವನೀಶ ಸಾಮಾಜಿಕ ಜಾಲತಾಣದಲ್ಲಿ ಆಕಸ್ತಿಕರ ಮತ್ತು ಪ್ರೇರಣಾದಾಯಕ ವಿಷಯಗಳನ್ನು ಪೋಸ್ಟ್​ ಮಾಡುವ ಮೂಲಕ ಜನಜನಿತರಾಗಿದ್ದಾರೆ.

ಇದೊಂದು ಸಕಾರಾತ್ಮಕ ನಡೆ, ಕೆಲವರು ಮಾತ್ರ ಇತರರ ಬಗ್ಗೆ ಯೋಚಿಸುತ್ತಾರೆ ಎಂದಿದ್ದಾರೆ ಒಬ್ಬರು. ಪೇಪರ್​ ಕೊಟ್ಟುಬಿಡಿ ಎಂದು ಹಗೂರಾಗಿ ಮಾತನಾಡಿದ್ದಾರೆ ಇನ್ನೂ ಒಬ್ಬರು. ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅನೇಕರಿಗೆ ನಿಮ್ಮ ಈ ಸ್ಪಂದನೆ ಶಕ್ತಿ ನೀಡುವಲ್ಲಿ ಎರಡು ಮಾತಿಲ್ಲ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದಿದ್ದಾರೆ ಮತ್ತೊಬ್ಬರು.

ಇಂದು ಒಟ್ಟಾರೆಯಾಗಿ ಬೇಕಿರುವುದು ಪರಸ್ಪರ ಒಳಿತನ್ನು ಹಾರೈಸುವ ವಿಶಾಲ ಮನೋಭಾವ.

ನಿಮಗೇನು ಅನ್ನಿಸಿತು ಈ ಪೋಸ್ಟ್​ ನೋಡಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:42 am, Tue, 8 November 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ