AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ನಮ್ಮ ಗ್ರಾಮಭಾರತದ ಅವಸ್ಥೆ’ ವಿದ್ಯುತ್ ಬದಲಾಗಿ ಎತ್ತುಗಳ ಬಳಕೆ

Jugaad : ‘ಗ್ರಾಮಭಾರತದ ಅನ್ವೇಷಣೆ’ ಅದ್ಭುತ! ಎಂದು ಐಎಎಸ್​ ಅಧಿಕಾರಿ ಶರಣ್ ಅವನೀಶ್ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದು ಪ್ರಾಣಿಹಿಂಸೆಯನ್ನು ಉತ್ತೇಜಿಸುವಂತಿದೆ ಎಂದು ಟೀಕಿಸಿದ್ದಾರೆ ನೆಟ್ಟಿಗರು.

Viral Video : ‘ನಮ್ಮ ಗ್ರಾಮಭಾರತದ ಅವಸ್ಥೆ’ ವಿದ್ಯುತ್ ಬದಲಾಗಿ ಎತ್ತುಗಳ ಬಳಕೆ
ಟ್ರೆಡ್​ಮಿಲ್​ನಂತಹ ಯಂತ್ರದೊಂದಿಗೆ ಎತ್ತು
TV9 Web
| Edited By: |

Updated on:Sep 24, 2022 | 11:24 AM

Share

Viral Video : ಈ ವಿಡಿಯೋದಲ್ಲಿ ಟ್ರೆಡ್​ಮಿಲ್​ನಂತಹ ಯಂತ್ರದ ಮೇಲೆ ಎತ್ತು ಸತತವಾಗಿ ನಡೆಯುತ್ತಿದೆ. ಇದಕ್ಕೆ ನೀರಿನ ಪಂಪ್ ಅನ್ನು ಜೋಡಿಸಲಾಗಿದೆ. ಎತ್ತು ಉತ್ಪಾದಿಸುವ ಶಕ್ತಿಯಿಂದ ಹೊಲಕ್ಕೆ ನೀರು ಸಿಂಪರಣೆಗೊಳ್ಳುತ್ತದೆ. ಈ ಚಮತ್ಕಾರಿಕ ದೃಶ್ಯ ಇಲ್ಲಿಗೇ ಮುಗಿಯುವುದಿಲ್ಲ. ಕ್ಯಾಮೆರಾ ಪ್ಯಾನ್ ಆಗುತ್ತಿದ್ದಂತೆ ಹೀಗೆ ಸಾಲಾಗಿಟ್ಟ ಟ್ರೆಡ್​ಮಿಲ್​ನಂಥ ಯಂತ್ರಗಳ ಮೇಲೆ ಮತ್ತಷ್ಟು ಎತ್ತುಗಳು ನಡೆಯುತ್ತಿರುತ್ತಲೇ ಇರುತ್ತವೆ. ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಾಗಿದೆ. ನೋಡಿದ ತಕ್ಷಣ ಭಾರತೀಯರು ಇಂಥ ತಂತ್ರಕೌಶಲಗಳನ್ನು ರೂಪಿಸುವಲ್ಲಿ ಸದಾ ಮುಂದು ಎಂದು ಅಚ್ಚರಿ ಉಂಟಾಗುತ್ತದೆ.

‘ಗ್ರಾಮಭಾರತದ ಅನ್ವೇಷಣೆ’ ಅದ್ಭುತ! ಎಂದು ಈ ವಿಡಿಯೋಗೆ ಶೀರ್ಷಿಕೆ ಕೊಟ್ಟು ಐಎಎಸ್​ ಅಧಿಕಾರಿ ಅವನೀಶ್ ಶರಣ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ ನಿಜ. ಆದರೆ ನೆಟ್ಟಿಗರು, ಈ ತಂತ್ರದ ಮೂಲಕ ಪ್ರಾಣಿಹಿಂಸೆಯನ್ನು ಪ್ರೋತ್ಸಾಹಿಸುವಂತಿದೆ ಎಂದು ಕಿಡಿಕಾರಿದ್ದಾರೆ. ವಿದ್ಯುತ್ ಬದಲಾಗಿ ಪ್ರಾಣಿಗಳನ್ನು ಬಳಸಿಕೊಂಡಿರುವುದರ ಬಗ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಈ ವಿಡಿಯೋ ಅನ್ನು 52,000 ಜನರು ವೀಕ್ಷಿಸಿದ್ದಾರೆ.

ಹಿಂಡಿನಲ್ಲಿ ಸಾಗುವುದು ನಮಗೆ ಅಭ್ಯಾಸವಾಗಿದೆ. ಆದರೆ, ಆಗಾಗ ನೆಟ್ಟಿಗರು ಹೀಗೆ ಪರಾಮರ್ಶೆ ಮಾಡುವುದು ಒಳ್ಳೆಯದು. ಮಾನವೀಯತೆ ಇನ್ನೂ ಬದುಕಿದೆ ಎನ್ನುವುದನ್ನು ಇದು ತೋರಿಸುತ್ತದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಲಿ ಕ್ಲಿಕ್ ಮಾಡಿ 

Published On - 11:14 am, Sat, 24 September 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್