Viral Video : ‘ಹುಷಾರ್​ ಟೀಚರ್​, ನನ್ನ ಅಪ್ಪ ಪೊಲೀಸು!’ ಪುಟ್ಟನ ಸಿಹಿಗದರಿಕೆ

Teacher-Student : ‘ನನ್ನ ಅಪ್ಪ ಪೊಲೀಸು. ನೋಡಿ ಮತ್ತೆ ಅವರಿಗೆ ಹೇಳ್ತೀನಿ’ ಎನ್ನುತ್ತದೆ ಈ ಮಗು. ‘ಪೊಲೀಸ್​ ಇದ್ದರೆ ಏನು ಮಾಡುತ್ತಾರೆ?’ ಎನ್ನುತ್ತಾರೆ ಟೀಚರ್, ಆಮೇಲೆ ಮಗು ಏನು ಹೇಳುತ್ತದೆ ನೋಡಿ.

Viral Video : ‘ಹುಷಾರ್​ ಟೀಚರ್​, ನನ್ನ ಅಪ್ಪ ಪೊಲೀಸು!’ ಪುಟ್ಟನ ಸಿಹಿಗದರಿಕೆ
ನಮ್ಮಪ್ಪ ನಿಮಗೆ ಗುಂಡು ಹಾರಿಸಿಬಿಡ್ತಾರೆ!
Follow us
| Updated By: ಶ್ರೀದೇವಿ ಕಳಸದ

Updated on:Sep 23, 2022 | 3:59 PM

Viral Video : ಕೆಲ ದಿನಗಳ ಹಿಂದೆಯಷ್ಟೇ ಟೀಚರ್​-ಸ್ಟೂಡೆಂಟ್​ ವಿಡಿಯೋ ನೋಡಿದಿರಿ. ಸಿಕ್ಕಾಪಟ್ಟೆ ಪುಂಡಾಟವಾಡುವ ಪುಟ್ಟಣ್ಣನಿಗೆ ಟೀಚರ್ ಕ್ಲಾಸ್​ ತೆಗೆದುಕೊಂಡಿದ್ದರು. ಇನ್ನೆಂದೂ ನೀನು ನನ್ನ ಜೊತೆ ಮಾತಾಡಬೇಡ ಎಂದು ಜೋರು ಮಾಡುತ್ತಿದ್ದರು. ಪುಟ್ಟಣ್ಣ ಕಂಗಾಲಾಗಿ ಇನ್ನೆಂದೂ ಗಲಾಟೆ ಮಾಡುವುದಿಲ್ಲ ಎಂದು ಅಳುತ್ತ ಅವರಿಗೆ ಮುದ್ದು ಮಾಡುತ್ತ, ಮುತ್ತು ಕೊಡುತ್ತ ಒಲಿಸಿಕೊಳ್ಳಲು ನೋಡುತ್ತಿದ್ದ. ಅಂಥದೇ ಒಬ್ಬ ಪುಟ್ಟಣ್ಣನಿಲ್ಲಿ ಸಿಕ್ಕಿದ್ದಾನೆ. ಯಾವ ಕಾರಣಕ್ಕೋ ಟೀಚರ್ ಗದರಿದ್ದಾರೆ. ಇವನಿಗೆ ದುಃಖ ಉಕ್ಕಿಬಂದಿದೆ. ಆಗ ಏನು ಹೇಳಿದ್ದಾನೆ ನೋಡಿ.

‘ನಮ್ಮ ಅಪ್ಪ ಗುಂಡು ಹಾರಿಸಿಬಿಡುತ್ತಾರೆ!’ ಈ ಮಾತು ಕೇಳಿದಾಗ ಯಾರಿಗೂ ಮನಸ್ಸು ವಿಷಣ್ಣಗಾಗುತ್ತದೆಯಲ್ಲವೆ? ಆರು 6 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 2.5 ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. 392 ಜನರು ರೀಟ್ವೀಟ್ ಮಾಡಿದ್ದಾರೆ. ನೋಡಿದ ತಕ್ಷಣ ಎಂಥ ಮುದ್ದಾದ ವಿಡಿಯೋ ಇದು ಎಂದೆನ್ನಿಸುವುದು ನಿಜ. ಮುಗ್ಧತೆಯಿಂದಲೇ ಈ ಮಗು ಹೀಗೆ ಸಂಭಾಷಿಸಿದ್ದರೂ ವಿಷಯ ಮಾತ್ರ ಗಂಭೀರ.

ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಈ ವಯಸ್ಸಿನಲ್ಲಿ ಅನುಕರಿಸುವುದೊಂದೇ ಅವುಗಳಿಗೆ ಗೊತ್ತಿರುತ್ತದೆ, ಆಲೋಚಿಸಿ ಮಾತನಾಡುವುದು ಎಲ್ಲ ಮಕ್ಕಳಿಂದಲೂ ಸಾಧ್ಯವಾಗುವುದಿಲ್ಲ. ಅಲ್ಲದೆ, ಹೀಗೆ ಸಂಭಾಷಣೆ ನಡೆಸುತ್ತಿರುವಾಗ ಕ್ಲಾಸಿನಲ್ಲಿಯ ಇತರ ಮಕ್ಕಳು ಮಗುವನ್ನು ನೋಡಿ ನಕ್ಕಾಗ ಆ ಮಗುವಿಗೆ ಅವಮಾನವಾದಂತಾಗುವುದಿಲ್ಲವೆ? ಇಂಥ ಚಟುವಟಿಕೆಗಳು ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಇನ್ನು ಪ್ರತಿಯೊಂದು ಮಗುವಿಗೂ ಅದರದೇ ಆದ ಖಾಸಗೀತನವಿದೆ. ಟೀಚರ್​ಗಳು ‘ಇಂಥ ಸನ್ನಿವೇಶ’ ಗಳನ್ನು ವಿಡಿಯೋ ಮಾಡುವುದು ಎಷ್ಟು ಸರಿ, ಮತ್ತದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುವುದು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:56 pm, Fri, 23 September 22

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್