AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ಹುಷಾರ್​ ಟೀಚರ್​, ನನ್ನ ಅಪ್ಪ ಪೊಲೀಸು!’ ಪುಟ್ಟನ ಸಿಹಿಗದರಿಕೆ

Teacher-Student : ‘ನನ್ನ ಅಪ್ಪ ಪೊಲೀಸು. ನೋಡಿ ಮತ್ತೆ ಅವರಿಗೆ ಹೇಳ್ತೀನಿ’ ಎನ್ನುತ್ತದೆ ಈ ಮಗು. ‘ಪೊಲೀಸ್​ ಇದ್ದರೆ ಏನು ಮಾಡುತ್ತಾರೆ?’ ಎನ್ನುತ್ತಾರೆ ಟೀಚರ್, ಆಮೇಲೆ ಮಗು ಏನು ಹೇಳುತ್ತದೆ ನೋಡಿ.

Viral Video : ‘ಹುಷಾರ್​ ಟೀಚರ್​, ನನ್ನ ಅಪ್ಪ ಪೊಲೀಸು!’ ಪುಟ್ಟನ ಸಿಹಿಗದರಿಕೆ
ನಮ್ಮಪ್ಪ ನಿಮಗೆ ಗುಂಡು ಹಾರಿಸಿಬಿಡ್ತಾರೆ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 23, 2022 | 3:59 PM

Viral Video : ಕೆಲ ದಿನಗಳ ಹಿಂದೆಯಷ್ಟೇ ಟೀಚರ್​-ಸ್ಟೂಡೆಂಟ್​ ವಿಡಿಯೋ ನೋಡಿದಿರಿ. ಸಿಕ್ಕಾಪಟ್ಟೆ ಪುಂಡಾಟವಾಡುವ ಪುಟ್ಟಣ್ಣನಿಗೆ ಟೀಚರ್ ಕ್ಲಾಸ್​ ತೆಗೆದುಕೊಂಡಿದ್ದರು. ಇನ್ನೆಂದೂ ನೀನು ನನ್ನ ಜೊತೆ ಮಾತಾಡಬೇಡ ಎಂದು ಜೋರು ಮಾಡುತ್ತಿದ್ದರು. ಪುಟ್ಟಣ್ಣ ಕಂಗಾಲಾಗಿ ಇನ್ನೆಂದೂ ಗಲಾಟೆ ಮಾಡುವುದಿಲ್ಲ ಎಂದು ಅಳುತ್ತ ಅವರಿಗೆ ಮುದ್ದು ಮಾಡುತ್ತ, ಮುತ್ತು ಕೊಡುತ್ತ ಒಲಿಸಿಕೊಳ್ಳಲು ನೋಡುತ್ತಿದ್ದ. ಅಂಥದೇ ಒಬ್ಬ ಪುಟ್ಟಣ್ಣನಿಲ್ಲಿ ಸಿಕ್ಕಿದ್ದಾನೆ. ಯಾವ ಕಾರಣಕ್ಕೋ ಟೀಚರ್ ಗದರಿದ್ದಾರೆ. ಇವನಿಗೆ ದುಃಖ ಉಕ್ಕಿಬಂದಿದೆ. ಆಗ ಏನು ಹೇಳಿದ್ದಾನೆ ನೋಡಿ.

‘ನಮ್ಮ ಅಪ್ಪ ಗುಂಡು ಹಾರಿಸಿಬಿಡುತ್ತಾರೆ!’ ಈ ಮಾತು ಕೇಳಿದಾಗ ಯಾರಿಗೂ ಮನಸ್ಸು ವಿಷಣ್ಣಗಾಗುತ್ತದೆಯಲ್ಲವೆ? ಆರು 6 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 2.5 ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. 392 ಜನರು ರೀಟ್ವೀಟ್ ಮಾಡಿದ್ದಾರೆ. ನೋಡಿದ ತಕ್ಷಣ ಎಂಥ ಮುದ್ದಾದ ವಿಡಿಯೋ ಇದು ಎಂದೆನ್ನಿಸುವುದು ನಿಜ. ಮುಗ್ಧತೆಯಿಂದಲೇ ಈ ಮಗು ಹೀಗೆ ಸಂಭಾಷಿಸಿದ್ದರೂ ವಿಷಯ ಮಾತ್ರ ಗಂಭೀರ.

ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಈ ವಯಸ್ಸಿನಲ್ಲಿ ಅನುಕರಿಸುವುದೊಂದೇ ಅವುಗಳಿಗೆ ಗೊತ್ತಿರುತ್ತದೆ, ಆಲೋಚಿಸಿ ಮಾತನಾಡುವುದು ಎಲ್ಲ ಮಕ್ಕಳಿಂದಲೂ ಸಾಧ್ಯವಾಗುವುದಿಲ್ಲ. ಅಲ್ಲದೆ, ಹೀಗೆ ಸಂಭಾಷಣೆ ನಡೆಸುತ್ತಿರುವಾಗ ಕ್ಲಾಸಿನಲ್ಲಿಯ ಇತರ ಮಕ್ಕಳು ಮಗುವನ್ನು ನೋಡಿ ನಕ್ಕಾಗ ಆ ಮಗುವಿಗೆ ಅವಮಾನವಾದಂತಾಗುವುದಿಲ್ಲವೆ? ಇಂಥ ಚಟುವಟಿಕೆಗಳು ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಇನ್ನು ಪ್ರತಿಯೊಂದು ಮಗುವಿಗೂ ಅದರದೇ ಆದ ಖಾಸಗೀತನವಿದೆ. ಟೀಚರ್​ಗಳು ‘ಇಂಥ ಸನ್ನಿವೇಶ’ ಗಳನ್ನು ವಿಡಿಯೋ ಮಾಡುವುದು ಎಷ್ಟು ಸರಿ, ಮತ್ತದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುವುದು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:56 pm, Fri, 23 September 22

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ