Viral Video: ‘ಭಾರತ್ ಮಾತಾ ಕೀ ಜೈ!?’; ವರನು ಸಿಹಿ ತಿನ್ನಿಸುವ ಮೊದಲೇ ವಧು ಅದನ್ನು ಬೀಸಿ ಒಗೆದಳು

Marriage : ಭಾರತದಲ್ಲಿ ಇಂಥ ಮದುವೆಗಳಿಗೆ ಆಯುಷ್ಯ ಹೆಚ್ಚು. ವಿಚ್ಛೇದನಕ್ಕೂ ಇಲ್ಲಿ ಅವಕಾಶವಿರುವುದಿಲ್ಲ. ಮುಂದೆ ಇದು ಸ್ಟಾಕ್​ಹೋಮ್​ ಸಿಂಡ್ರೋಮ್​ಗೆ ಕಾರಣವಾಗುತ್ತದೆ ಎಂಬ ಚರ್ಚೆ ಈ ವಿಡಿಯೋದಡಿ ನಡೆಯುತ್ತಿದೆ.

Viral Video: 'ಭಾರತ್ ಮಾತಾ ಕೀ ಜೈ!?'; ವರನು ಸಿಹಿ ತಿನ್ನಿಸುವ ಮೊದಲೇ ವಧು ಅದನ್ನು ಬೀಸಿ ಒಗೆದಳು
ಒಲ್ಲದ ಮದುವೆ
Follow us
|

Updated on:Jun 29, 2023 | 4:08 PM

Indian Marriage: ವಿಪರ್ಯಾಸವೆಂದರೆ ಭಾರತದಲ್ಲಿ ಇಂಥ ಮದುವೆಗಳು ಹೆಚ್ಚು ಕಾಲ ಬದುಕುಳಿಯುತ್ತವೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿರುವ ಈ ವಿಡಿಯೋ ನೆಟ್ಟಿಗರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಲ್ಲೊಂದು ಮದುವೆ ನಡೆಯುತ್ತಿದೆ. ಆರತಿ ತಟ್ಟೆಯೊಳಗಿನ ಸಿಹಿಯನ್ನು ವಧುವಿಗೆ (Bride) ತಿನ್ನಿಸುವಂತೆ ವರನಿಗೆ (Groom) ಹೇಳಲಾಗುತ್ತದೆ. ಅವನು ತಿನ್ನಿಸಲು ಹೋದಾಗ ಆಕೆ ಸಿಹಿಯನ್ನು ಚೆಂಡಿನಂತೆ ಬೀಸಿ ಆಹ್ವಾನಿತರೆಡೆ ಕೋಪದಿಂದ ಎಸೆದುಬಿಡುತ್ತಾಳೆ. ಹಾಗೆ ವರನಿಗೆ ಗ್ಲಾಸಿನೊಳಗಿನನ್ನು ಕುಡಿಸಲು ವಧುವಿಗೆ ಹೇಳಲಾಗುತ್ತದೆ. ಆಕೆ ಕುಡಿಸಲು ಮುಂದಾದಾಗ ವರ ನಿರಾಕರಿಸುತ್ತಾನೆ. ಆಗ ಆ ಗ್ಲಾಸನ್ನೂ ಆಕೆ ಅದೇ ವೇಗದಲ್ಲಿ ಬೀಸಿ ಒಗೆದುಬಿಡುತ್ತಾಳೆ.

ಬಹುಶಃ ಇಬ್ಬರಿಗೂ ಈ ಮದುವೆ ಇಷ್ಟವಿಲ್ಲ ಅಥವಾ ವಧುವಿಗೆ ಇಷ್ಟವಿಲ್ಲ. ನಮ್ಮ ಭಾರತದಲ್ಲಿ ಯಾಕೆ ಹೀಗೆ? ಈಗಲೇ ಹೀಗಿರುವ ಇವರು ಮುಂದೆ ಹೇಗೆ ಬಾಳಿಯಾರು? ಜಗತ್ತಿನ ಜನರೆಲ್ಲ ಈ ವಿಡಿಯೋ ನೋಡಿ ಭಾರತೀಯ ಮದುವೆಗಳಲ್ಲಿ ಹೀಗೆ ವಧುವರರು ಬೀಸಿ ಎಸೆಯುವುದೂ ಒಂದು ಪದ್ಧತಿಯೇ ಇರಬೇಕು! ಎಂದುಕೊಂಡರೆ? ಆದರೆ ಅವರಿಬ್ಬರ ಮುಖಭಾವ ಗಮನಿಸಿದರೆ ಸಾಕು ಇದು ಒಲ್ಲದ ಮದುವೆ ಎನ್ನುವುದು ಖಾತ್ರಿಯಾಗುತ್ತದೆ. ಈ ವಿಡಿಯೋ ಅನ್ನು ಈತನಕ ಸುಮಾರು 1.5 ಮಿಲಿಯನ್​ ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: ಬಾಲಿವುಡ್​ ಮಿಯಾಂವ್ಸ್​; ನಿಸಾ ಶೆಟ್ಟಿ ಕರೆತಂದ ಈ ಬೆಕ್ಕುಗಳು ಗೊತ್ತೆ?

‘ವಧುವಿಗೆ ಬೇರೆ ದಾರಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಭವಿಷ್ಯದಲ್ಲಿಯೂ ಇದು ಹೀಗೇ ಮುಂದುವರಿದು ಸ್ಟಾಕ್​ಹೋಮ್ ​ಸಿಂಡ್ರೋಮ್​ಗೆ (Stockholm Syndrome) ಕಾರಣವಾಗುತ್ತದೆ, ಮತ್ತದು ಹಾಗೆಯೇ ಮುಂದುವರಿಯುತ್ತದೆ’ ಎಂದಿದ್ದಾರೆ ಈ ವಿಡಿಯೋ ಟ್ವೀಟ್ ಮಾಡಿದ ಗಬ್ಬರ್​ ಎನ್ನುವವರು. ಮದುವೆಯಂತೆ ವಿಚ್ಛೇದನವೂ (Divorce) ಎಷ್ಟೋ ಜನರಿಗೆ ಕಷ್ಟ ಎಂದು ಪ್ರತ್ಯುತ್ತರಿಸಿದ್ದಾರೆ ಒಬ್ಬರು. ಹುಡುಗಿಗೆ ತನ್ನದೇ ಆದ ಆಯ್ಕೆ ಎನ್ನುವುದು ಇದ್ದಿದ್ದರೆ ಆಕೆ ಈ ಮದುವೆಗೆ ಒಪ್ಪುತ್ತಿರಲಿಲ್ಲ. ಭವಿಷ್ಯದಲ್ಲಿಯೂ ಇದು ಹೀಗೇ ಸಾಗುತ್ತದೆ ಎಂದು ಮರುಉತ್ತರ ನೀಡಿದ್ದಾರೆ ಗಬ್ಬರ್.

ಈ ವಿಡಿಯೋದಲ್ಲಿ ತೂರಿಬಂದ ಧ್ವನಿಗಳನ್ನು ಕೇಳಿದಿರಾ?; ಭಾರತ್ ಮಾತಾ ಕೀ ಜೈ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 4:03 pm, Thu, 29 June 23

ತಾಜಾ ಸುದ್ದಿ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!