AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೈಲರ್; ‘ಇವರ ಈ ನೃತ್ಯವನ್ನು ಅದೆಷ್ಟು ಸಲ ನೋಡಿದೆನೆಂದು ಕೇಳಬೇಡಿ’

Rajinikanth: ಕಾವಾಲಾ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿರುವ ವೃತ್ತಿಪರ ನೃತ್ಯ ಕಲಾವಿದರು ಬಹಳ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ಪಕ್ವವಾದ ಭಾವಾಭಿನಯ ಮತ್ತು ನೃತ್ಯಕ್ಕೆ ನೆಟ್ಟಿಗರು ಶಭಾಷ್​ ಎನ್ನುತ್ತಿದ್ದಾರೆ.

Viral Video: ಜೈಲರ್; 'ಇವರ ಈ ನೃತ್ಯವನ್ನು ಅದೆಷ್ಟು ಸಲ ನೋಡಿದೆನೆಂದು ಕೇಳಬೇಡಿ'
ನೃತ್ಯ ಕಲಾವಿದೆ ಅಂಜನಾ ಚಂದ್ರನ್
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Jul 28, 2023 | 12:00 PM

Share

Kaavaala : ಎಲ್ಲಿ ನೋಡಿದರೂ ಜೈಲರ್​ (Jailer) ಹವಾ. ಸಾಮಾಜಿಕ ಜಾಲತಾಣಿಗರು, ನೃತ್ಯ ಕಲಾವಿದರು ಕಾವಾಲಾ ಹಾಡಿಗೆ ಹೆಜ್ಜೆ ಹಾಕುವುದರಲ್ಲಿ ಮುಳುಗಿದ್ದಾರೆ. ನಿನ್ನೆಯಷ್ಟೇ ಮಿಸ್​ ಇಂಡಿಯಾ ಕೇರಳ ಪ್ರಿಯಾಂಕಾ ಶೆಣೈ ಮೆನನ್​ ವೈರಲ್ ಆದ ವಿಡಿಯೋ ನೋಡಿದ್ದಿರಿ. ಇದಿಗ ಅಂಜನಾ ಚಂದ್ರನ್ ಎಂಬ ನೃತ್ಯಕಲಾವಿದೆಯ ನೃತ್ಯ ವೈರಲ್ ಆಗುತ್ತಿದೆ. ಈ ವಿಡಿಯೋ ಅನ್ನು ಅವರು ಜು. 16 ರಂದು ಹಂಚಿಕೊಂಡಿದ್ದರು. ಅನೇಕರು ಇವರ ನೃತ್ಯವೈಖರಿಯನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Anjana Chandran (@anjanac_choreo)

ನೀವು ಅದ್ಭುತವಾಗಿ ನರ್ತಿಸಿದ್ದೀರಿ, ಈ ವಿಡಿಯೋ ಅನ್ನು ಅದೆಷ್ಟು ಸಲ ನೋಡಿದೆ ಎಂದು ಮಾತ್ರ ಕೇಳಬೇಡಿ ಎಂದಿದ್ದಾರೆ ಒಬ್ಬರು. ಇದಕ್ಕಿಂತ ಇನ್ನೂ ಉತ್ತಮವಾಗಿ ನರ್ತಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ ಮತ್ತೊಬ್ಬರು. ತುಂಟತನದಿಂದ ಕೂಡಿದ ನಿಮ್ಮ ಹಾವಭಾವ ನನ್ನನ್ನು ಹಿಡಿದಿಟ್ಟಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ರಾಜೀನಾಮೆಗೆ ಒತ್ತಾಯ​; ಕಣ್ಣೀರುಗರೆಯುತ್ತ ಸತ್ಯ ಬಹಿರಂಗಪಡಿಸಿದ ಬೈಜೂಸ್​ ಉದ್ಯೋಗಿ

ಜು. 6ರಂದು ಬಿಡುಗಡೆಯಾದ ರಜನಿಕಾಂತ್ ಮತ್ತು ತಮನ್ನಾ ಭಾಟಿಯಾ (Rajinikanth, Tamanna Bhatia) ಅಭಿನಯದ ಜೈಲರ್ ಸಿನೆಮಾದ ಈ ಹಾಡನ್ನು ಅರುಣರಾಜ್​ ಕಾಮರಾಜ್​ ಬರೆದಿದ್ದಾರೆ. ಅನಿರುದ್ಧ ರವಿಚಂದ್ರನ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿಲ್ಪಾ ರಾವ್ ಈ ಗೀತೆಯನ್ನು ಹಾಡಿದ್ದಾರೆ.

ಇದನ್ನೂ ಓದಿ : Viral: ಆನ್​ಲೈನ್​ ಶಾಪಿಂಗ್​​; ಈ ದಾಳಿಂಬೆಯ ವಾಸನೆ, ರುಚಿ ಥೇಟ್​ ನೇಲ್​ಪಾಲಿಷ್​ನಂತೆ!

ಗಮನ ಸೆಳೆಯುತ್ತಿರುವ ವಿಷಯವೆಂದರೆ ತಮನ್ನಾ ಈ ಹಾಡಿನಲ್ಲಿ ಎಂಥ ಉಡುಗೆ ಧರಿಸಿದ್ದಾರೋ ಅದೇ ಥರದ ಬಣ್ಣ, ವಿನ್ಯಾಸವುಳ್ಳ ಉಡುಗೆಯನ್ನು ಧರಿಸಿ ಕಲಾವಿದರು ನರ್ತಿಸುತ್ತಿದ್ದಾರೆ. ಇನ್ನು ಭಾವಾಭಿವ್ಯಕ್ತಿಯೂ ಸಮಸಮವಾಗಿ ಸಿಂಕ್​ ಆಗುತ್ತಿದೆ. ನರ್ತಿಸಿದ ಕಲಾವಿದರು ನೂರಕ್ಕೆ ನೂರರಷ್ಟು ನ್ಯಾಯ ಸಲ್ಲಿಸುತ್ತಿದ್ದಾರೆ ಎಂದು ಎಂದು ನೆಟ್ಟಗರು ಪ್ರಶಂಸಿಸುತ್ತಿದ್ದಾರೆ.

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Follow Us
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!