AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕಬ್ಬನ್​ಪೇಟೆ ಟಿಫನ್ ರೂಮಿನಿಂದ ಶುರುವಾದ ಇವರ ತಿಂಡಿಯಾನ

Bengaluru : ತುಪ್ಪದಲ್ಲಿ ಹುರಿದ ಬಟನ್​ ಮಶ್ರೂಮ್, ಆಲೂಗಡ್ಡೆ ತುಂಡುಗಳಿಂದ ಕೂಡಿದ ಮಸಾಲೆಯುಕ್ತ ಅಣಬೆ ಪುಲಾಬ್ ತಿನ್ನಲು ಭಾನುವಾರಕ್ಕಾಗಿ ಕಾಯಬೇಕು. ಬಾಳೆಎಲೆ ಮೇಲೆ ಚಟ್ನಿಯೊಂದಿಗೆ ಹಬೆಯಾಡುವ ಈ ಪುಲಾವ್ ತಿನ್ನುವುದೇ ಸ್ವರ್ಗ!

Viral: ಕಬ್ಬನ್​ಪೇಟೆ ಟಿಫನ್ ರೂಮಿನಿಂದ ಶುರುವಾದ ಇವರ ತಿಂಡಿಯಾನ
ಬಸವನಗುಡಿಯ ಕಬ್ಬನಪೇಟೆ ಟಿಫಿನ್ ರೂಮಿಗೆ ಹೋಗಿದ್ದ ತಿಂಡಿಪ್ರಿಯರು
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 24, 2023 | 3:47 PM

Share

Tiffin : ಹೋಟೆಲ್​ಗೆ ಹೋದರೆ ಎಷ್ಟು ಜನ ಹೋಗುತ್ತೀರಿ? ಕೆಲ ಸ್ನೇಹಿತರೊಡನೆ ಅಥವಾ ಕುಟುಂಬದವರೊಂದಿಗೆ. ಆದರೆ ನಿಮ್ಮ ಅಕ್ಕಪಕ್ಕದ ಮನೆಯವರನ್ನೂ ಸೇರಿಸಿಕೊಂಡು ಹೋಗಿದ್ದಿದೆಯೇ? ಇದೀಗ ವೈರಲ್ ಆಗಿರುವ ಈ ಟ್ವೀಟ್​ ಥ್ರೆಡ್​ ನೋಡಿ. ಮೇಲಿನ ಫೋಟೋದಲ್ಲಿರುವವರೆಲ್ಲರೂ ಭಾನುವಾರದಂದು ತಿಂಡಿ ತಿನ್ನಲೆಂದು ಒಟ್ಟಾಗಿ ಹೊರಟಿದ್ದಾರೆ. ಅವರು ಮೊದಲು ಹೋಗಿದ್ದು ಬಸವನಗುಡಿಯಲ್ಲಿರುವ ಕಬ್ಬನ್​ಪೇಟೆ ಟಿಫನ್​ ರೂಮಿಗೆ. ಮೋಹನ್​ ಎನ್ನುವವರು ನಡೆಸುವ ಈ ಹೋಟೆಲ್​ನಲ್ಲಿ ಭಾನುವಾರ (Sunday)ದ ಅಣಬೆ ಪುಲಾವ್​ ಮತ್ತು ಸಬ್ಬಸಿಗೆ ಇಡ್ಲಿ, ಮಸಾಲೆ ದೋಸೆ ಮತ್ತು ರೈಸ್​ಬಾತ್​ಗಳಿಗಾಗಿ ಇವರು ದಾಂಗುಡಿ ಇಟ್ಟಿದ್ದಾರೆ.

ತೆಗೆದುಕೊಂಡ ಆರ್ಡರ್​ಗಳ ಪಟ್ಟಿ ಮೋಹನ್ ಅವರಿಗೆ ಚೆನ್ನಾಗಿ ನೆನಪಿರುತ್ತದೆಯಾದ್ದರಿಂದ ಬಿಲ್ ಮಾಡಲು ಅವರಿಗೆ ಅನುಕೂಲವಾಗುತ್ತದೆ. ಇಲ್ಲಿ ಸಬ್ಬಸಿಗೆ ಇಡ್ಲಿಗೆ ಕೊಡುವ ಚಟ್ನಿ ಬಹಳ ರುಚಿಯಾಗಿರುತ್ತದೆ. ಜೊತೆಗೆ ಆಲೂಗಡ್ಡೆ ಸಾಗೂ ಕೂಡ ಕೊಡುತ್ತಾರೆ. ಮೃದುವಾದ ಈ ಇಡ್ಲಿಗಳೊಂದಿಗೆ ಇದೆಲ್ಲವನ್ನೂ ಸವಿಯುವುದೆಂದರೆ ಸ್ವರ್ಗ.

ಇನ್ನು ಭಾನುವಾರ ಮಾತ್ರ ಮಾಡುವ ಅಣಬೆ ಪುಲಾವ್ ಸಾಕಷ್ಟು ಬಟನ್​ ಮಶ್ರೂಮ್​​ ತುಪ್ಪದಲ್ಲಿ ಹುರಿದ ಆಲೂಗಡ್ಡೆ ತುಂಡುಗಳು ಮತ್ತು​ ಮಸಾಲೆಯಿಂದ ಕೂಡಿರುತ್ತದೆ. ಚಟ್ನಿಯೊಂದಿಗೆ ಹಬೆಯಾಡುವ ಈ ಪುಲಾವ್ ಅನ್ನು ಬಾಳೆ ಎಲೆಯಲ್ಲಿ ಮುಂಜಾನೆ ಹೊತ್ತಿನಲ್ಲಿ ತಿನ್ನುವುದು ಅತ್ಯಂತ ಸೊಗಸು.

ಈ ತಿಂಡಿ ಮತ್ತು ಹೋಟೆಲ್​ಗಳ ಹೆಸರುಗಳ ಥ್ರೆಡ್​ ಬೆಳೆಯುತ್ತಲೇ ಹೋಗುತ್ತದೆ. ಟ್ವೀಟ್ ಮಾಡಿರುವ ಫೋಟೋಗಳು ನಿಮ್ಮ ಬಾಯಲ್ಲಿ ನೀರೂರಿಸತೊಡಗುತ್ತವೆ. ನಿಮಗೂ ಈಗ ಈ ಹೋಟೆಲ್​​ಗಳಿಗೆ ಹೋಗಬೇಕೆಂಬ ಮನಸ್ಸಾಗುತ್ತಿದೆಯೇ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:40 pm, Mon, 24 July 23

Follow Us
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ