AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕಬ್ಬನ್​ಪೇಟೆ ಟಿಫನ್ ರೂಮಿನಿಂದ ಶುರುವಾದ ಇವರ ತಿಂಡಿಯಾನ

Bengaluru : ತುಪ್ಪದಲ್ಲಿ ಹುರಿದ ಬಟನ್​ ಮಶ್ರೂಮ್, ಆಲೂಗಡ್ಡೆ ತುಂಡುಗಳಿಂದ ಕೂಡಿದ ಮಸಾಲೆಯುಕ್ತ ಅಣಬೆ ಪುಲಾಬ್ ತಿನ್ನಲು ಭಾನುವಾರಕ್ಕಾಗಿ ಕಾಯಬೇಕು. ಬಾಳೆಎಲೆ ಮೇಲೆ ಚಟ್ನಿಯೊಂದಿಗೆ ಹಬೆಯಾಡುವ ಈ ಪುಲಾವ್ ತಿನ್ನುವುದೇ ಸ್ವರ್ಗ!

Viral: ಕಬ್ಬನ್​ಪೇಟೆ ಟಿಫನ್ ರೂಮಿನಿಂದ ಶುರುವಾದ ಇವರ ತಿಂಡಿಯಾನ
ಬಸವನಗುಡಿಯ ಕಬ್ಬನಪೇಟೆ ಟಿಫಿನ್ ರೂಮಿಗೆ ಹೋಗಿದ್ದ ತಿಂಡಿಪ್ರಿಯರು
ಶ್ರೀದೇವಿ ಕಳಸದ
|

Updated on:Jul 24, 2023 | 3:47 PM

Share

Tiffin : ಹೋಟೆಲ್​ಗೆ ಹೋದರೆ ಎಷ್ಟು ಜನ ಹೋಗುತ್ತೀರಿ? ಕೆಲ ಸ್ನೇಹಿತರೊಡನೆ ಅಥವಾ ಕುಟುಂಬದವರೊಂದಿಗೆ. ಆದರೆ ನಿಮ್ಮ ಅಕ್ಕಪಕ್ಕದ ಮನೆಯವರನ್ನೂ ಸೇರಿಸಿಕೊಂಡು ಹೋಗಿದ್ದಿದೆಯೇ? ಇದೀಗ ವೈರಲ್ ಆಗಿರುವ ಈ ಟ್ವೀಟ್​ ಥ್ರೆಡ್​ ನೋಡಿ. ಮೇಲಿನ ಫೋಟೋದಲ್ಲಿರುವವರೆಲ್ಲರೂ ಭಾನುವಾರದಂದು ತಿಂಡಿ ತಿನ್ನಲೆಂದು ಒಟ್ಟಾಗಿ ಹೊರಟಿದ್ದಾರೆ. ಅವರು ಮೊದಲು ಹೋಗಿದ್ದು ಬಸವನಗುಡಿಯಲ್ಲಿರುವ ಕಬ್ಬನ್​ಪೇಟೆ ಟಿಫನ್​ ರೂಮಿಗೆ. ಮೋಹನ್​ ಎನ್ನುವವರು ನಡೆಸುವ ಈ ಹೋಟೆಲ್​ನಲ್ಲಿ ಭಾನುವಾರ (Sunday)ದ ಅಣಬೆ ಪುಲಾವ್​ ಮತ್ತು ಸಬ್ಬಸಿಗೆ ಇಡ್ಲಿ, ಮಸಾಲೆ ದೋಸೆ ಮತ್ತು ರೈಸ್​ಬಾತ್​ಗಳಿಗಾಗಿ ಇವರು ದಾಂಗುಡಿ ಇಟ್ಟಿದ್ದಾರೆ.

ತೆಗೆದುಕೊಂಡ ಆರ್ಡರ್​ಗಳ ಪಟ್ಟಿ ಮೋಹನ್ ಅವರಿಗೆ ಚೆನ್ನಾಗಿ ನೆನಪಿರುತ್ತದೆಯಾದ್ದರಿಂದ ಬಿಲ್ ಮಾಡಲು ಅವರಿಗೆ ಅನುಕೂಲವಾಗುತ್ತದೆ. ಇಲ್ಲಿ ಸಬ್ಬಸಿಗೆ ಇಡ್ಲಿಗೆ ಕೊಡುವ ಚಟ್ನಿ ಬಹಳ ರುಚಿಯಾಗಿರುತ್ತದೆ. ಜೊತೆಗೆ ಆಲೂಗಡ್ಡೆ ಸಾಗೂ ಕೂಡ ಕೊಡುತ್ತಾರೆ. ಮೃದುವಾದ ಈ ಇಡ್ಲಿಗಳೊಂದಿಗೆ ಇದೆಲ್ಲವನ್ನೂ ಸವಿಯುವುದೆಂದರೆ ಸ್ವರ್ಗ.

ಇನ್ನು ಭಾನುವಾರ ಮಾತ್ರ ಮಾಡುವ ಅಣಬೆ ಪುಲಾವ್ ಸಾಕಷ್ಟು ಬಟನ್​ ಮಶ್ರೂಮ್​​ ತುಪ್ಪದಲ್ಲಿ ಹುರಿದ ಆಲೂಗಡ್ಡೆ ತುಂಡುಗಳು ಮತ್ತು​ ಮಸಾಲೆಯಿಂದ ಕೂಡಿರುತ್ತದೆ. ಚಟ್ನಿಯೊಂದಿಗೆ ಹಬೆಯಾಡುವ ಈ ಪುಲಾವ್ ಅನ್ನು ಬಾಳೆ ಎಲೆಯಲ್ಲಿ ಮುಂಜಾನೆ ಹೊತ್ತಿನಲ್ಲಿ ತಿನ್ನುವುದು ಅತ್ಯಂತ ಸೊಗಸು.

ಈ ತಿಂಡಿ ಮತ್ತು ಹೋಟೆಲ್​ಗಳ ಹೆಸರುಗಳ ಥ್ರೆಡ್​ ಬೆಳೆಯುತ್ತಲೇ ಹೋಗುತ್ತದೆ. ಟ್ವೀಟ್ ಮಾಡಿರುವ ಫೋಟೋಗಳು ನಿಮ್ಮ ಬಾಯಲ್ಲಿ ನೀರೂರಿಸತೊಡಗುತ್ತವೆ. ನಿಮಗೂ ಈಗ ಈ ಹೋಟೆಲ್​​ಗಳಿಗೆ ಹೋಗಬೇಕೆಂಬ ಮನಸ್ಸಾಗುತ್ತಿದೆಯೇ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:40 pm, Mon, 24 July 23

ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?