AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿ ಈಗ ಮಾಡೆಲ್​: ರಾತ್ರಿ ಬೆಳಗಾಗುವಷ್ಟರಲ್ಲಿ ಫೋಟೋ ವೈರಲ್​

ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿಯೊಬ್ಬಳು ಮಾಡೆಲ್​ ಫೋಟೋಶೂಟ್​ ಮೂಲಕ ರಾತ್ರಿ ಬೆಳಗಾಗುವಷ್ಟರಲ್ಲಿ ​ಸುದ್ದಿಯಾಗಿದ್ದಾಳೆ. ಇವಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿ ಈಗ ಮಾಡೆಲ್​: ರಾತ್ರಿ ಬೆಳಗಾಗುವಷ್ಟರಲ್ಲಿ ಫೋಟೋ ವೈರಲ್​
ಮಾಡೆಲ್​ ಆದ ಬಲೂನ್​ ಮಾರುತ್ತಿದ್ದ ಬಾಲಕಿ
TV9 Web
| Edited By: |

Updated on:Mar 09, 2022 | 4:51 PM

Share

ಸಾಮಾಜಿಕ ಜಾಲತಾಣ (Social Media) ಯಾರನ್ನು ಬೇಕದಾರೂ ರಾತ್ರಿ ಬೆಳಗಾಗುವಷ್ಟರಲ್ಲಿ ದೊಡ್ಡ ಸ್ಟಾರ್​ ಆಗಿ ಮಾಡಬಹುದು. ಈಗಾಗಲೇ ಆ ರೀತಿಯ ಹಲವು ಘಟನೆಗಳು ನಡೆದಿದೆ. ರಾನು ಮಂಡಲ್​, ಕಚ್ಚಾ ಬಾದಾಮ್​ ಖ್ಯಾತಿಯ ಬುಬನ್​, ಸಹದೇವ್​ ದಿರ್ಡೋ ಹೀಗೆ ಹತ್ತಾರು ಮಂದಿ ಹೊಸ ಟ್ರೆಂಡ್​ಅನ್ನೇ ಸೃಷ್ಟಿ ಮಾಡಿದ್ದಾರೆ. ಇದೀಗ ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿಯೊಬ್ಬಳು ಮಾಡೆಲ್​ ಫೋಟೋಶೂಟ್​ ಮೂಲಕ ರಾತ್ರಿ ಬೆಳಗಾಗುವಷ್ಟರಲ್ಲಿ ​ಸುದ್ದಿಯಾಗಿದ್ದಾಳೆ. ಇವಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಪ್ರೋಟೋಗ್ರಫಿ ಹಾಗೂ ಮೇಕಪ್​ ಯಾರನ್ನೂ ಬೇಕಾದರೂ ಅಂದಗೊಳಿಸಿ ಮಾಡಲ್​ಗಳಂತೆ ಮಾಡುತ್ತದೆ. ಅದಕ್ಕೆ ಈಕೆ ಇನ್ನೊಂದು ಉದಾಹರಣೆ. ವೆಡ್ಡಿಂಗ್​ ಫೋಟೊಗ್ರಾಫರ್​ ಅರ್ಜುನ್ ಕೃಷ್ಣನ್ ಕೇರಳದ ಅಂಡಲೂರ್ ಕಾವು ಉತ್ಸವದಲ್ಲಿ ಕಿಸ್ಬು ಎಂಬ ಹುಡುಗಿಯನ್ನು ಗುರುತಿಸಿ ಫೋಟೋ ತೆಗೆದಿದ್ದಾರೆ. ಒಂದಷ್ಟು ಕ್ಯಾಂಡಿಡ್​ ಫೋಟೋಗಳನ್ನು ತೆಗೆದಿದ್ದಾರೆ. ನಂತರ ಅದನ್ನು ಅವಳ ತಾಯಿಗೆ ತೋರಿಸಿದ್ದರು. ಕ್ಲಿಕ್‌ಗಳನ್ನು ನೋಡಿದ ನಂತರ ತಾಯಿ-ಮಗಳು ಸಂತೋಷಗೊಂಡಿದ್ದರು.

ಅರ್ಜುನ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.  ಫೋಟೋಗಳನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿರು. ಆ ಬಳಿಕ ಅವರು ಕಿಸ್ಬು ಅವರ ಮೇಕ್ ಓವರ್ ಫೋಟೋಶೂಟ್‌ಗಾಗಿ ಅವರ ಕುಟುಂಬವನ್ನು ಸಂಪರ್ಕಿಸಿದರು. ರೆಮ್ಯಾ ಎಂಬ ಸ್ಟೈಲಿಸ್ಟ್ ಸಹಾಯದಿಂದ ಮೇಕ್ ಓವರ್  ಮಾಡಿಸಿ ಫೋಟೋಶೂಟ್​ ಮಾಡಿದ್ದಾರೆ. ಇವರ ಫೋಟೋಗಳು ಇದೀಗ ಎಲ್ಲರ ಮನಗೆದ್ದಿದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಬಾಲಕಿ ಇಂಟರ್​ನೆಟ್​ನಲ್ಲಿ ಹೊಸ ಅಲೆ ಎಬ್ಬಿಸಿದ್ದಾಳೆ. ಯಾವ ಮಾಡಲ್​ಗೂ ಕಮ್ಮಿ ಇಲ್ಲಿದಂತೆ ಫೋಟೋಗೆ ಪೋಸ್​ ನೀಡುವ ಮೂಲಕ ಜನರನ್ನು ಹುಬ್ಬೇರಿಸುವಂತೆ ಮಾಡಿದ್ದಾಳೆ.

 ಇದನ್ನೂ ಓದಿ:

ಶ್ರೀವಲ್ಲಿ ಹಾಡಿಗೆ ಜ್ವಾಲಾಗುಟ್ಟ ತಾಯಿಯ ಮಸ್ತ್​ ಸ್ಟೆಪ್​: ವಿಡಿಯೋ ಹಂಚಿಕೊಂಡ ಬ್ಯಾಡ್ಮಿಂಟನ್​ ತಾರೆ

Published On - 4:48 pm, Wed, 9 March 22

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ