AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಾಸುದೇವ…. ನೈವೇದ್ಯ ತಯಾರಿಸಲು ಅನುಮತಿ ನೀಡು, ಕೃಷ್ಣನ ಅಪ್ಪಣೆ ಪಡೆದು ಪ್ರಸಾದ ಮಾಡುವ ವಿಶೇಷ ದೇವಾಲಯ

ಕೇರಳದ ದೇವಾಲಯಗಳು ತಮ್ಮ ಹಳೆಯ ಪೂಜಾ ಸಂಪ್ರದಾಯಗಳ ಪಾಲನೆಗೆ ಹೆಸರುವಾಸಿಯಾಗಿದೆ. ಹೀಗೆ ಹಿಂದಿನ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿರುವ ದೇವಾಲಯಗಳಲ್ಲಿ ಶ್ರೀ ಕೃಷ್ಣನ ವಿಶೇಷ ದೇವಾಲಯವೂ ಒಂದು. ಈ ದೇವಾಲಯದಲ್ಲಿ ಪ್ರತಿದಿನ ನೈವೇದ್ಯಕ್ಕೆ ಸಕ್ಕರೆಯನ್ನು ಸೇರಿಸುವ ಮೊದಲು ಅಡುಗೆ ಭಟ್ಟರು ಕೃಷ್ಣನ ಅನುಮತಿಯನ್ನು ಪಡೆಯಲು ವಾಸುದೇವೋ ಎಂದು ಜೋರಾಗಿ ಕೂಗುತ್ತಾರೆ. ಈ ಕುರಿತ ವಿಶೇಷ ವಿಡಿಯೊವೊಂದು ಇದೀಗ ವೈರಲ್‌ ಆಗುತ್ತಿದೆ.

Viral Video: ವಾಸುದೇವ.... ನೈವೇದ್ಯ ತಯಾರಿಸಲು ಅನುಮತಿ ನೀಡು, ಕೃಷ್ಣನ ಅಪ್ಪಣೆ ಪಡೆದು ಪ್ರಸಾದ ಮಾಡುವ ವಿಶೇಷ ದೇವಾಲಯ
ಅಂಬಲಪುಳ ಕೃಷ್ಣ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Jul 08, 2024 | 2:10 PM

Share

ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಹಲವಾರು ದೇವಾಲಯಗಳು ಕಾಣಸಿಗುತ್ತವೆ. ಈ ಪ್ರಖ್ಯಾತ ದೇವಸ್ಥಾನಗಳ ಪೈಕಿ ಅಂಬಲಪುಳ ಕೃಷ್ಣ ದೇವಾಲಯವೂ ಒಂದು. ಇಲ್ಲಿ ಪಾರ್ಥಸಾರಥಿಯ ರೂಪದಲ್ಲಿ ಒಂದು ಕೈಯಲ್ಲಿ ಶಂಖ ಹಾಗೂ ಮತ್ತೊಂದು ಕೈಯಲ್ಲಿ ಚವಟಿಯನ್ನು ಹಿಡಿದಿರುವ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನದ ಮತ್ತೊಂದು ವಿಶೇಷವೆಂದರೆ ಪಾಲ್ಪಾಯಸಂ. ಹಾಲು, ಅಕ್ಕಿ ಹಾಗೂ ಸಕ್ಕರೆಯಿಂದ ತಯಾರಿಸಿದ ಶ್ರೀ ಕೃಷ್ಣನಿಗೆ ಪ್ರಿಯವಾದ ಈ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಈ ನೈವೇದ್ಯದ ಇನ್ನೊಂದು ವಿಶೇಷವೆಂದರೆ, ಪ್ರತಿದಿನ ಇಲ್ಲಿ ನೈವೇದ್ಯಕ್ಕೆ ಸಕ್ಕರೆಯನ್ನು ಸೇರಿಸುವ ಮೊದಲು ಅಡುಗೆ ಭಟ್ಟರು ಕೃಷ್ಣನ ಅನುಮತಿಯನ್ನು ಪಡೆಯಲು ವಾಸುದೇವೋ ಎಂದು ಜೋರಾಗಿ ಕೂಗುತ್ತಾರೆ. ಈ ಕುರಿತ ಸುಂದರ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಅಂಬಲಪುಳ ಕೃಷ್ಣ ಈ ದೇವಾಲಯವು ಆಧ್ಯಾತ್ಮಿಕ ಮಹತ್ವದ ಜೊತೆಗೆ ಭಕ್ತರಿಗೆ ವಿತರಿಸುವ ರುಚಿಕರವಾದ ಪ್ರಸಾದಕ್ಕೂ ಹೆಸರುವಾಸಿಯಾಗಿದೆ. ಹೌದು ಈ ದೇವಾಲಯವು ಅಕ್ಕಿ, ಹಾಲು ಮತ್ತು ಸಕ್ಕರೆಯಿಂದ ತಯಾರಿಸಿದ ಪಲ್ಪಾಯಸಂ ಎಂಬ ವಿಶೇಷ ಪ್ರಸಾದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿದಿನ 100 ಲೀ ಗಳಷ್ಟು ಪ್ರಸಾದವನ್ನು ತಯಾರಿಸಲಾಗುತ್ತದೆ. ಹಳೆಯ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿರುವ ಈ ದೇವಾಲಯದಲ್ಲಿ ನೈವೇದ್ಯ ತಯಾರಿಸುವಾಗ ಕೊನೆಯಲ್ಲಿ ಆ ಪ್ರಸಾದಕ್ಕೆ ಸಕ್ಕರೆಯನ್ನು ಸೇರಿಸುವ ಸಂದರ್ಭದಲ್ಲಿ ಬಾಗಿಲ ಬಳಿ ನಿಂತು ಅಡುಗೆ ಭಟ್ಟರು “ವಾಸುದೇವೋ” ಎಂದು ಜೋರಾಗಿ ಕೂಗುವ ಮೂಲಕ ಶ್ರೀ ಕೃಷ್ಣನ ಅನುಮತಿಯನ್ನು ಪಡೆಯುತ್ತಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ( ಫೇಸ್​​​ಬುಕ್​​​ ವಿಡಿಯೋ)

ಈ ಕುರಿತ ಪೋಸ್ಟ್‌ ಒಂದನ್ನು Team Hindu United ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ದೇವಾಲಯದ ಬಾಗಿಲ ಬಳಿ ನಿಂತು ಅರ್ಚಕರೊಬ್ಬರು ವಾಸುದೇವೋ…… ಎಂದು ಕೂಗಿ ಹೇಳುವ ರೋಮಾಂಚನಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ; ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ದೇವರಂತೆ ಬಂದು ಆಕೆಯನ್ನು ಕಾಪಾಡಿದ ಬೀದಿ ನಾಯಿ

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ಈ ದೃಶ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Mon, 8 July 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!