AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhimashankar Wildlife Reserve: ರಾತ್ರಿಯಲ್ಲಿ ಹೊಳೆಯುವ ಮಾಂತ್ರಿಕ ಕಾಡು ಎಲ್ಲಿದೆ ಗೊತ್ತಾ?

ರಾತ್ರಿ ವೇಳೆ ಈ ಕಾಡು ಮಾಯಾಲೋಕದಂತೆ ಕಾಣುತ್ತದೆ. ಎಲ್ಲೋ ಮರದ ಕಾಂಡದ ಮೇಲೆ, ಎಲ್ಲೋ ಪೊದೆಯ ಮಧ್ಯದಲ್ಲಿ ಎಲೆಗಳ ರಾಶಿಯ ಮಧ್ಯದಲ್ಲಿ ಬೆಳಕಿನ ಹೊಳಪನ್ನು ನೋಡಿದರೆ ನಿಮಗೂ ಆಶ್ಚರ್ಯವಾಗುತ್ತದೆ. ಆದರೆ ಈ ಕಾಡಿನಲ್ಲಿ ರಾತ್ರಿಯಲ್ಲಿ ಹೊಳೆಯುವಂತದ್ದು ಏನು ಇದೆ? ಇದು ಮಾಂತ್ರಿಕ ಪ್ರಪಂಚದ ಭಾಗವೇ?

Bhimashankar Wildlife Reserve: ರಾತ್ರಿಯಲ್ಲಿ ಹೊಳೆಯುವ ಮಾಂತ್ರಿಕ ಕಾಡು ಎಲ್ಲಿದೆ ಗೊತ್ತಾ?
Bhimashankar Wildlife Sanctuary
ಅಕ್ಷತಾ ವರ್ಕಾಡಿ
|

Updated on: May 18, 2024 | 5:58 PM

Share

ಇಲ್ಲಿಯವರೆಗೆ ನೀವು ಅನೇಕ ಕಾಡುಗಳನ್ನು ನೋಡಿರುತ್ತೀರಿ. ಆದರೆ ರಾತ್ರಿಯಲ್ಲಿ ಹೊಳೆಯುವ ಅಂತಹ ಕಾಡಿನ ಬಗ್ಗೆ ನಿಮಗೆ ತಿಳಿದಿದೆಯೇ? ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿರುವ ಭೀಮಾಶಂಕರ ವನ್ಯಜೀವಿ ಮೀಸಲು ಪ್ರದೇಶದಲ್ಲಿ ಅಂತಹ ಒಂದು ಸ್ಥಳವಿದೆ. ಈ ಕಾಡು ರಾತ್ರಿ ಹೊತ್ತು ಬೆಳಕಿನಿಂದ ಮಿನುಗುವುದರಿಂದ ಸಾಕಷ್ಟು ಖ್ಯಾತಿಯನ್ನು ಪಡೆದಿದೆ. ಈ ಜಾಗಕ್ಕೆ ನೀವು ರಾತ್ರಿ ಹೊತ್ತು ಹೋದರೆ ಯಾವುದೋ ಮಾಂತ್ರಿಕ ಜಾಗಕ್ಕೆ ಬಂದಂತೆ ಭಾಸವಾಗುವುದಂತೂ ಖಂಡಿತಾ. ವಿಶೇಷವಾಗಿ ಮುಂಗಾರು ಮಳೆಯ ಪ್ರಾರಂಭದೊಂದಿಗೆ, ಈ ಕಾಡಿನ ಹೊಳಪು ಹೆಚ್ಚಾಗುತ್ತದೆ. ಆದ್ದರಿಂದ, ನೀವು ಸಹ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಈ ಸ್ಥಳದ ತಿಳಿಯಿರಿ.

ಮಳೆಗಾಲದಲ್ಲಿ ಇಲ್ಲಿ ವಿಭಿನ್ನ ನೋಟ ಕಂಡುಬರುತ್ತದೆ. ರಾತ್ರಿ ವೇಳೆ ಈ ಕಾಡು ಮಾಯಾಲೋಕದಂತೆ ಕಾಣುತ್ತದೆ. ಎಲ್ಲೋ ಮರದ ಕಾಂಡದ ಮೇಲೆ, ಎಲ್ಲೋ ಪೊದೆಯ ಮಧ್ಯದಲ್ಲಿ ಮತ್ತು ಎಲ್ಲೋ ಮರದಿಂದ ಬೀಳುವ ಎಲೆಗಳ ರಾಶಿಯ ಮಧ್ಯದಲ್ಲಿ ಬೆಳಕಿನ ಹೊಳಪನ್ನು ನೋಡಿದರೆ ನಿಮಗೂ ಆಶ್ಚರ್ಯವಾಗುತ್ತದೆ. ಆದರೆ ಈ ಕಾಡಿನಲ್ಲಿ ರಾತ್ರಿಯಲ್ಲಿ ಹೊಳೆಯುವಂತದ್ದು ಏನು ಇದೆ? ಇದು ಮಾಂತ್ರಿಕ ಪ್ರಪಂಚದ ಭಾಗವೇ?

ಇದನ್ನೂ ಓದಿ: ಧಗಧಗನೆ ಹೊತ್ತಿ ಉರಿದ ಬುಲೆಟ್ ಬೈಕ್, ಬೆಂಕಿ ನಂದಿಸುವಾಗ ಪೆಟ್ರೋಲ್ ಟ್ಯಾಂಕ್ ಸ್ಫೋಟ, 10 ಮಂದಿಗೆ ಗಾಯ

ಹೊಳೆಯುವ ಅಣಬೆಗಳು:

ವಾಸ್ತವವಾಗಿ, ಈ ಕಾಡಿನಲ್ಲಿ ಯಾವುದೇ ಮ್ಯಾಜಿಕ್ ಇಲ್ಲ. ರಾತ್ರಿಯ ಕತ್ತಲಲ್ಲಿ ಭೀಮಾಶಂಕರ ವನ್ಯಜೀವಿ ಸಂರಕ್ಷಿತ ಪ್ರದೇಶವು ಹೊಳೆಯುತ್ತಿರುವುದಕ್ಕೆ ಕಾರಣ ಮೈಸಿನಾ ಶಿಲೀಂಧ್ರ. ಇದು ಒಂದು ರೀತಿಯ ಮಶ್ರೂಮ್ ಆಗಿದೆ, ಇದನ್ನು ಅನೇಕ ಬಾರಿ ಜನರು ಪಾಚಿ ಎಂದು ತಪ್ಪಾಗಿ ಭಾವಿಸುತ್ತಾರೆ. ಈ ಕಾಡಿನಲ್ಲಿ, ಇದೇ ಅಣಬೆ ರಾತ್ರಿಯ ಕತ್ತಲೆಯಲ್ಲಿ ಮಣ್ಣು ಮತ್ತು ಎಲೆಗಳ ರಾಶಿಯ ನಡುವೆ ಹೊಳೆಯುತ್ತಿರುವುದು ಕಂಡುಬರುತ್ತದೆ. ಈ ಮಶ್ರೂಮ್ ಲೂಸಿಫೆರೇಸ್ ಎಂಬ ವಿಶೇಷ ರೀತಿಯ ಕಿಣ್ವವನ್ನು ಉತ್ಪಾದಿಸುತ್ತದೆ. ಇದು ಮರದಲ್ಲಿರುವ ಲೂಸಿಫೆರಿನ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ, ಅದು ಹೊಳೆಯಲು ಪ್ರಾರಂಭಿಸುತ್ತದೆ. ಲೂಸಿಫೆರಿನ್ ಅನ್ನು ಬೆಳಕು ಹೊರಸೂಸುವ ಸಂಯುಕ್ತವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?