AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಹಾರಾಷ್ಟ್ರ, ಮಧ್ಯಪ್ರದೇಶದ ವಿವಿಧ ಭಾಗದಲ್ಲಿ ಆಗಸದಲ್ಲಿ ಕಾಣಿಸಿಕೊಂಡ ಅದ್ಭುತ ಬೆಳಕು; ಏನೆಂಬುದೇ ಅರ್ಥವಾಗಿಲ್ಲವೆಂದ ನೆಟ್ಟಿಗರು !

ಉಲ್ಕೆಗಳನ್ನು ಸಾಮಾನ್ಯವಾಗಿ ಶೂಟಿಂಗ್​ ಸ್ಟಾರ್ಸ್​ ಎಂದು ಕರೆಯಲಾಗುತ್ತದೆ. ಇವು ಸೆಕೆಂಡ್​ಗೆ ಸುಮಾರು 30-60 ಕಿಮೀಯಷ್ಟು ಪ್ರಚಂಡ ವೇಗದಲ್ಲಿ ಭೂವಾತಾವರಣವನ್ನು ಪ್ರವೇಶಿಸುವ ಕಲ್ಲಿನಂತ ವಸ್ತುಗಳು.

Video: ಮಹಾರಾಷ್ಟ್ರ, ಮಧ್ಯಪ್ರದೇಶದ ವಿವಿಧ ಭಾಗದಲ್ಲಿ ಆಗಸದಲ್ಲಿ ಕಾಣಿಸಿಕೊಂಡ ಅದ್ಭುತ ಬೆಳಕು; ಏನೆಂಬುದೇ ಅರ್ಥವಾಗಿಲ್ಲವೆಂದ ನೆಟ್ಟಿಗರು !
ಆಗಸದಲ್ಲಿ ಕಾಣಿಸಿಕೊಂಡ ಕೌತುಕ
TV9 Web
| Updated By: Lakshmi Hegde|

Updated on:Apr 03, 2022 | 3:55 PM

Share

ರಾತ್ರಿ ಆಕಾಶ ನೋಡುತ್ತ ಕುಳಿತರೆ ಅಲ್ಲಿ ಸಾವಿರ ಕೌತುಕಗಳು ಕಾಣಿಸುತ್ತವೆ. ಹಾಗೇ ನಿನ್ನೆ ರಾತ್ರಿ ಮಹಾರಾಷ್ಟ್ರ, ಗುಜರಾತ್​ ಮತ್ತು ಮಧ್ಯಪ್ರದೇಶಗ ಹಲವು ಭಾಗಗಳಲ್ಲಿ ಆಗಸದಲ್ಲಿ ಒಂದು ಅದ್ಭುತ ಕಾಣಿಸಿಕೊಂಡಿದ್ದು, ಅದರ ವಿಡಿಯೋಗಳು ವೈರಲ್ ಆಗುತ್ತಿವೆ. ಥೇಟ್​ ಉಲ್ಕಾಪಾತದಂತೆ ಕಾಣಿಸುವ ಬೆಳಕಿನ ಚಲನೆ ಅದು. ಬೆಳಕನ್ನೇ ಬಾಲವಾಗಿ ಹೊಂದಿರುವ ಏನೋ ಒಂದು ವೇಗವಾಗಿ ಕಪ್ಪು ಆಕಾಶದಲ್ಲಿ ಚಲಿಸುವ ದೃಶ್ಯ ತುಂಬ ಮನಮೋಹಕ ಎನ್ನಿಸದೆ ಇರದು. ಈ ದೃಶ್ಯ ಮಹಾರಾಷ್ಟ್ರದ ನಾಗ್ಪುರ, ಮಧ್ಯಪ್ರದೇಶದ ಝಬುವಾ, ಬರ್ವಾನಿ ಜಿಲ್ಲೆ ಸೇರಿ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದಾಗಿ ಎಎನ್​ಐ ವರದಿ ಮಾಡಿದೆ. ಇದೊಂದು ಅಸಾಧಾರಣ ದೃಶ್ಯ ಎಂದೇ ಪರಿಗಣಿಸಲಾಗಿದೆ. 

ಉಲ್ಕೆಗಳನ್ನು ಸಾಮಾನ್ಯವಾಗಿ ಶೂಟಿಂಗ್​ ಸ್ಟಾರ್ಸ್​ ಎಂದು ಕರೆಯಲಾಗುತ್ತದೆ. ಇವು ಸೆಕೆಂಡ್​ಗೆ ಸುಮಾರು 30-60 ಕಿಮೀಯಷ್ಟು ಪ್ರಚಂಡ ವೇಗದಲ್ಲಿ ಭೂವಾತಾವರಣವನ್ನು ಪ್ರವೇಶಿಸುವ ಕಲ್ಲಿನಂತ ವಸ್ತುಗಳು. ಈ ಉಲ್ಕೆಗಳು ಭೂಮಿಯನ್ನು ಪ್ರವೇಶಿಸುವ ಪ್ರಕ್ರಿಯೆಗೆ ಉಲ್ಕಾಪಾತ ಎನ್ನಲಾಗುತ್ತದೆ. ಅಂದಹಾಗೇ, ನಿನ್ನೆ ಆಕಾಶದಲ್ಲಿ ಕಾಣಿಸಿಕೊಂಡ ತೀವ್ರ ಬೆಳಕು ಉಲ್ಕಾಪಾತವಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಖಗೋಳಶಾಸ್ತ್ರಜ್ಞ ಜೊನಾಥನ್ ಮೆಕ್ಡೊವೆಲ್ ಟ್ವೀಟ್ ಮಾಡಿ, ನನಗನ್ನಿಸುವ ಪ್ರಕಾರ ಇದು ಉಲ್ಕಾಪಾತವಲ್ಲ. ಇದು 2021ರ ಫೆಬ್ರವರಿಯಲ್ಲಿ ಉಡಾವಣೆಗೊಂಡ ಚೀನಾದ ರಾಕೆಟ್​ ಚಾಂಗ್ ಝೆಂಗ್ 3ಬಿ  ( ಕ್ರಮ ಸಂಖ್ಯೆ Y77 )ಯ ಮೂರನೇ ಹಂತ. ಅಂದರೆ ಅದು ಭೂಮಿಗೆ ವಾಪಸ್​ ಮರಳಿದೆ. ಭೂಮಿಗೆ ವಾಪಸ್​ ಬರುವುದಕ್ಕೂ ಮೊದಲು ಹೀಗೆ ಆಕಾಶದಲ್ಲಿ ಚಲಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್ 2022 ಪಾಯಿಂಟ್ ಟೇಬಲ್​ನಲ್ಲಿ ದೊಡ್ಡ ಬದಲಾವಣೆ: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಕೈಯಲ್ಲಿದೆ?

Published On - 10:01 am, Sun, 3 April 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!