AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಾರಕರಿಗಳು ಪಂಢರಪುರಕ್ಕೆ ಹೊರಟಿದ್ಧಾರೆ; ನೀವೂ ಬರ್ತೀರೇನು?

Pandharpur : ಟೊಂಕದ ಮ್ಯಾಲೆ ಕೈ ಇಟ್ಟಾನ, ಭಕ್ತಿ ಸುಂಕಾ ಬೇಡತಾನ, ಅಂಕ ಇಲ್ಲ ಡೊಂಕ ಇಲ್ಲ ಅಭಂಗ ಪದದವಗ... ಬೇಂದ್ರೆಯವರ ಈ ಕವನವನ್ನು ನೆನೆಯುತ್ತ ನಡೆಯಿರಿ ಯಾತ್ರೆಗೆ. ಮಕ್ಕಳ ಹೆಜ್ಜೆ ಅನುಸರಿಸಿದವರಿಗೆ ಖಂಡಿತ ಒಳ್ಳೆಯದಾಗುತ್ತದೆ.

Viral Video: ವಾರಕರಿಗಳು ಪಂಢರಪುರಕ್ಕೆ ಹೊರಟಿದ್ಧಾರೆ; ನೀವೂ ಬರ್ತೀರೇನು?
ಪುಟಾಣಿ ವಾರಕರಿ
ಶ್ರೀದೇವಿ ಕಳಸದ
|

Updated on:Jun 30, 2023 | 12:21 PM

Share

Warkari : ಕೇಸರಿಬಣ್ಣದ ಕಚ್ಚೆಸೀರೆಯುಟ್ಟು, ಹಸಿರು ಗಾಜಿನ ಬಳೆ ಧರಿಸಿ, ಮುಡಿಗೆ ಮಲ್ಲಿಗೆ ದಂಡೆ ಸುತ್ತಿ, ಕೊರಳಲ್ಲಿ ಆಭರಣ ಧರಿಸಿ, ಎರಡೂ ಕೈಯಿಂದ ವಿಠ್ಠಲ ರುಕ್ಮಾಯಿಯ ಮೂರ್ತಿ ಹಿಡಿದುಕೊಂಡು ಹೆಜ್ಜೆ ಹಾಕುವ ಈ ವಾರಕರಿ ಪೋರಿ ವಾಟ್ಸಾಪ್ಪಿನಲ್ಲಿ (WhatsApp) ಭಲೇ ಓಡಾಡುತ್ತಿದ್ದಾಳೆ. ಮುಸುಕು ಹಾಕಿದ ಮುಗಿಲು ಮಬ್ಬು ಹಿಡಿಸಿರುವ ಈ ಹೊತ್ತಿನಲ್ಲಿ ಈ ಬಟ್ಟಲುಗಣ್ಣಿನ ಹೆಣ್ಣುಮಗು ನೋಡಿದವರೆಲ್ಲರಲ್ಲಿಯೂ ಚೈತನ್ಯ ತಾನಾಗಿಯೇ ಮೂಡುತ್ತದೆ. ಮಹಾರಾಷ್ಟ್ರದ ಪಂಢರಪುರಕ್ಕೊಮ್ಮೆ ಹೋಗಬೇಕು ಎಂದೇನಾದರೂ ನೀವಂದುಕೊಂಡಿದ್ದರೆ ಈಗಿದು ಸೂಕ್ತ ಸಮಯ. ಈ ಪೋರಿಯ ಹಸಿರು ಸೆರಗಿನ ಚುಂಗನ್ನು ಹಿಡಿಯಿರಿ. ಕಣ್ಣುಮುಚ್ಚಿ ಭಜನೆಯಲ್ಲಿ ಮುಳುಗಿ; ಮಕ್ಕಳ ಹೆಜ್ಜೆ ಅನುಸರಿಸಿದವರಿಗೆ ಖಂಡಿತ ಒಳ್ಳೆಯದಾಗುತ್ತದೆ.

ವಾರಕರಿ ಇದು ಭಕ್ತಿ ಪಂಥಗಳಲ್ಲೊಂದು. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇದು ಚಾಲ್ತಿಯಲ್ಲಿರುವ ಭಕ್ತಿಮಾರ್ಗಗಳ ಒಂದು ಎಸಳು. ವಾರಕರಿ ಎಂಬ ಪದ ಮರಾಠಿ ಮೂಲದ್ದು. ಇದರ ಅರ್ಥ ಮತ್ತೆ ಮತ್ತೆ ಯಾತ್ರೆಗೈಯ್ಯುವರು. ಈ ಪಂಥವನ್ನು ಅನುಸರಿಸುವವರು ವರ್ಷಕ್ಕೆ ಎರಡು ಸಲ ಪಂಢರಪುರಕ್ಕೆ ಯಾತ್ರೆ ಕೈಗೊಳ್ಳುತ್ತಾರೆ. ಒಂದು ಬಾರಿ ಆಷಾಢ ಮತ್ತು ಇನ್ನೊಂದು ಬಾರಿ ಕಾರ್ತೀಕದಲ್ಲಿ. ಈ ಎರಡೂ ಮಾಸಗಳ ಶುಕ್ಲಪಕ್ಷದ ಏಕಾದಶಿಯಂದು ಗುಂಪಾಗಿ ನೂರಾರು ಮೈಲಿ ನಡೆದುಕೊಂಡು ಜನರು ಯಾತ್ರೆ ಹೊರಟುಬಿಡುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಸಂದರ್ಭದಲ್ಲಿ ಅನೇಕರು ಮಕ್ಕಳಿಗೆ ವಾರಕರಿ ವೇಷ ಹಾಕಿ ಸಂಭ್ರಮಿಸುತ್ತಾರೆ. ಭಜನೆಗಳನ್ನು ಕಲಿಸಿಕೊಡುತ್ತಾರೆ. ಈ ಮೇಲಿನ ಪೋಸ್ಟ್​ನಲ್ಲಿರುವ ಮಗು ಮಹಾರಾಷ್ಟ್ರದ ಗಾಯಕಿ ಪ್ರಿಯಾಂಕಾ ಬಾರ್ವೆ (Priyanka Barve) ಮತ್ತು ಸರೋದ್​ ವಾದಕ ಸಾರಂಗ್​ ಅವರ ಮಗ. ವಾರಕರಿ ವೇಷದಲ್ಲಿ ಮುದ್ದಾಗಿ ಕಾಣುತ್ತಿರುವ ಈ ಮಗುವಿಗೆ ಅನೇಕರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ : Viral: ಲೂಯೀಸ್ ವ್ಯೂಟ್ಟನ್; ಅಕ್ಕಿಕಾಳಿಗಿಂತಲೂ ಚಿಕ್ಕ ಚೀಲ, ರೂ. 51 ಲಕ್ಷಕ್ಕೆ ಮಾರಾಟ

ಆಷಾಢ ಏಕಾದಶಿಯಿಂದ ಮೂರು ವಾರಗಳವರೆಗೆ ಪ್ರತೀ ವರ್ಷ ನಡೆಯುವ ಈ ಪಂಢರಪುರ ಯಾತ್ರೆಯಲ್ಲಿ ಸುಮಾರು 20 ಲಕ್ಷ ಭಕ್ತರು ಪಾಲ್ಗೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಾಂಕ್ರಾಮಿಕ ರೋಗಗಳು ಅನೇಕರನ್ನು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಪೊಲೀಸರು ಯಾತ್ರಾರ್ಥಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸುಮಾರು 5.5 ಲಕ್ಷ ಯಾತ್ರಾರ್ಥಿಗಳ ಆರೋಗ್ಯ ತಪಾಸಣೆಯು ಈಗಾಗಲೇ ಪೂರ್ಣಗೊಂಡಿದ್ದು  ಉಳಿದವರ ತಪಾಸಣೆ ನಡೆಯುತ್ತಿದೆ.

ನೀವೂ ಹೊರಡುತ್ತೀರೋ ಪುರಂದರ, ತುಕಾರಾಮ, ಜ್ಞಾನೇಶ್ವರರ ವಿಠೋಬನ ದರ್ಶನಕ್ಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:53 am, Fri, 30 June 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?