AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಲಸಿನಹಣ್ಣಿನ ವ್ಯಾಪಾರಿಯ ಜೀವನಪಾಠವನ್ನು ಒಪ್ಪದ ನೆಟ್ಟಿಗರು

Characters : ''ಚಪ್ಪಲಿ ಹೊಲಿಯೋದಾಗಿರಬಹುದು, ಪ್ರಧಾನಮಂತ್ರಿಯಾಗಿರಬಹುದು, ನಮ್ಮ ಪಾತ್ರ ನಾವು ನಿರ್ವಹಿಸಬೇಕಷ್ಟೇ. ಎಷ್ಟು ಕೋಟಿ ಇದ್ರೇನು? ಪುನೀತ್​ ರಾಜಕುಮಾರ್​ನ ಉಳಿಸ್ಕೊಳ್ಳೋಕಾಯ್ತಾ?'' ನೋಡಿ ಈ ವಿಡಿಯೋ.

Viral Video: ಹಲಸಿನಹಣ್ಣಿನ ವ್ಯಾಪಾರಿಯ ಜೀವನಪಾಠವನ್ನು ಒಪ್ಪದ ನೆಟ್ಟಿಗರು
ಶ್ರೀದೇವಿ ಕಳಸದ
|

Updated on: Jun 30, 2023 | 1:46 PM

Share

Life Lesson : ಒಬ್ಬೊಬ್ಬರೂ ಒಂದೊಂದು ಜೀವನ ತತ್ವವನ್ನು ಅಳವಡಿಸಿಕೊಂಡಿರುತ್ತಾರೆ. ಅವರ ಪಾಡಿಗೆ ಅವರು ಅಳವಡಿಸಿಕೊಂಡಿದ್ದರೆ ಸರಿ. ಆದರೆ ತಾವು ಅಂದುಕೊಂಡಿದ್ದೇ ಸರಿ ಮತ್ತದನ್ನು ಎಲ್ಲರೂ ಪಾಲಿಸಬೇಕು ಎನ್ನುವರ್ಥದಲ್ಲಿ ಹೇಳಹೊರಟರೆ? ಕೆಲವರು ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುತ್ತಾರೆ. ಇನ್ನೂ ಕೆಲವರು ಕಾಲು ಚಾಚುತ್ತ ಹಾಸಿಗೆಯನ್ನು ದೊಡ್ಡದು ಮಾಡಿಕೋ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಹಲಸಿನಹಣ್ಣಿನ ವ್ಯಾಪಾರಿ (Jackfruit Seller) ‘ಅವನ್ ಕಾರ್ ತಗಂಡ ನಾನ್ ತಗಣ್ಬೇಕು. ಅವನ್ ಬೈಕ್​ ತಗಂಡ ನಾ ತಗಣ್ಬೇಕು. ಇದು ಸಾರ್ ಇಂದಿನ ಸಿಚ್ಯುಯೇಶನ್. ಇದೇ ಜೀವನ ಅನ್ಕೊಂಬಿಟ್ಟಿದಾರೆ ಜನ, ಆದರೆ ಇದಲ್ಲ. ಹಾಗಿದ್ದರೆ ಮತ್ತೇನು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by BAHADDUR.CREATION (@bahaddur.creation)

ದೇವರು ಒಬ್ಬೊಬ್ಬರಿಗೂ ಒಂದು ಪಾತ್ರವನ್ನು ಕೊಟ್ಟಿರುತ್ತಾನೆ ಅದನ್ನು ನಿರ್ವಹಿಸುತ್ತ ಹೋಗಬೇಕಷ್ಟೇ ಎನ್ನುತ್ತಾನೆ ಈ ಬೀದಿಬದಿ ವ್ಯಾಪಾರಿ. ಆದರೆ ಒಂದೇ ಪಾತ್ರವನ್ನು ಬದುಕಿನುದ್ದಕ್ಕೂ ಮಾಡಲಾದೀತೇ? ನೆಟ್ಟಿಗರೊಬ್ಬರು, ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ, ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಛೆದೆ ಇರಬೇಕೆಂದು- ಮಾಡುವ ಕೆಲಸ ಮಾಡುತ್ತಲೇ ಬೆಳೆಯಬೇಕು’ ಎಂದಿದ್ದಾರೆ. ಭಾರತೀಯರ ಜ್ಞಾನಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಸಂಪ್ರದಾಯವನ್ನು ಸೀರೆಯುಟ್ಟೇ ಮುರಿದಿದ್ದಾರೆ ಈ ಪಂಚರತ್ನೆಯರು

ಕೆಲವರು ಸರಿಯಾಗಿ ಹೇಳ್ದೆ ಗುರು! ಎಂದಿದ್ದಾರೆ ಇನ್ನೂ ಕೆಲವರು ಜೀವನದಲ್ಲಿ ಯಶಸ್ಸು ಗಳಿಸಬೇಕು, ಮೇಲ್ಮಟ್ಟಕ್ಕೆ ಏರಬೇಕು, ನಮ್ಮ ಮುಂದಿನ ಪೀಳಿಗೆ ಶಿಕ್ಷಣ ಹೊಂದಬೇಕು ಎಂದರೆ ನಾವು ತುಂಬಾ ಕಷ್ಟಪಡಲೇಬೇಕು ಎಂದಿದ್ದಾರೆ ಇನ್ನೊಬ್ಬರು. ಗುರು, ನೀ ಸ್ವಲ್ಪ ಹೊಟ್ಟೆ ಇಳಿಸಿ ನೀಟ್ ಆಗಿ ಶೇವ್ ಮಾಡ್ಕೊಂಡಿದ್ರೆ ನಿನಗೆ ಕಡಿಮೆ ಬಜೆಟ್ಟಿನ ಸಿನೆಮಾದ ಹೀರೋ ಪಾತ್ರವನ್ನೇ ಕೊಡಿಸಬಹುದಿತ್ತು ಎಂದಿದ್ಧಾರೆ ಮಗದೊಬ್ಬರು. ಇವೆಲ್ಲಾ ಹೀಗೆ ರೀಲ್​ಗಾಗಿ ಡೈಲಾಗ್​ ಹೊಡೆಯೋಕೆ ಛಂದ. ನಿಜಜೀವನದಲ್ಲಿ ಮುಂದೆ ಬರಬೇಕಂದ್ರೆ ಮಂಡಿ ನೆಲಕ್ಕೆ ಊರಲೇಬೇಕು ಎಂದಿದ್ದಾರೆ ಅನೇಕರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ