AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಾಟರಿ ಹೊಡೆಯಿತೋ!’ ಆರ್ಡರ್ ಮಾಡಿದ್ದು ಐಫೋನ್​ 13, ತಲುಪಿದ್ದು ಐಫೋನ್ 14

Iphone : ಪ್ರಾಮಾಣಿಕತೆಯಿಂದ ಗ್ರಾಹಕರು ಫೋನ್ ಹಿಂದಿರುಗಿಸಬೇಕು ಎಂದು ಒಬ್ಬರು, ಇಂಥ ಅದೃಷ್ಟ ನನಗೇ ಸಿಗಲಿ ಎಂದು ಮತ್ತೊಬ್ಬರು. ಈ ಟ್ವೀಟ್​ಗೆ ನೆಟ್ಟಿಗರ ಮಿಶ್ರಪ್ರತಿಕ್ರಿಯೆ ದೊರಕುತ್ತಿದೆ. ನೀವೇನಂತೀರಿ?

‘ಲಾಟರಿ ಹೊಡೆಯಿತೋ!’ ಆರ್ಡರ್ ಮಾಡಿದ್ದು ಐಫೋನ್​ 13, ತಲುಪಿದ್ದು ಐಫೋನ್ 14
Man Orders iPhone 13 From Flipkart Receives iPhone 14 Instead
TV9 Web
| Edited By: |

Updated on: Oct 06, 2022 | 6:13 PM

Share

Trending : ಇತ್ತೀಚೆಗಷ್ಟೇ ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದವರಿಗೆ ಘಡಿ ಸೋಪ್​, ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದವರಿಗೆ ಒಂದು ಕೇಜಿ ಆಲೂಗಡ್ಡೆ ತಲುಪಿದ ವಿಷಯವನ್ನು ಓದಿದ್ದೀರಿ, ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ವಿಷಯ ಮಾತ್ರ ಸ್ವಲ್ಪ ಭಿನ್ನವಾಗಿದೆ. ವ್ಯಕ್ತಿಯೊಬ್ಬರು ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಐಫೋನ್13, ಆದರೆ ಅವರಿಗೆ ಫ್ಲಿಪ್​ಕಾರ್ಟ್​ ಮೂಲಕ ತಲುಪಿದ್ದು ಐಫೋನ್​14! ಯಾರಿಗೆ ತಾನೆ ಅಚ್ಚರಿಯಾಗದು ಇಂಥ ವಿಷಯ. ರಸೀದಿಯ ಸ್ಕ್ರೀನ್​ ಶಾಟ್​ ಈಗ ಅಂತರ್ಜಾಲದ ಪೂರ್ತಿ ಹರಿದಾಡುತ್ತಿದೆ. ಭಾರತೀಯ ಹಬ್ಬಗಳ ನೆಪದಲ್ಲಿ ಎಲ್ಲ ಆನ್​ಲೈನ್​ ಮಳಿಗೆಗಳು ರಿಯಾಯ್ತಿ ದರದಲ್ಲಿ ಮಾರಾಟಮೇಳ ನಡೆಸಿರುವುದರ ಫಲ ಮತ್ತು ಮಾಯೆ ಇದು!

ಅದೃಷ್ಟ ಎನ್ನುವುದು ಇದಕ್ಕೇ. ಬಯಸಿದವರಿಗೆ ಅದು ಸಿಗುವುದಿಲ್ಲ. ಅನಿರೀಕ್ಷಿತಾಗಿ ಅದು ಇನ್ನ್ಯಾರನ್ನೋ ದೊರಕಿರುತ್ತದೆ. ಅಶ್ವಿನ್​ ಹೆಗಡೆ ಎಂಬುವವರು ಆ ದಿನ ತನ್ನ ಫಾಲೋವರ್ ಒಬ್ಬರು ಐಫೋನ್ 13 ರ ಬದಲಿಗೆ ಐಫೋನ್ 14 ಅನ್ನು ಪಡೆದಿದ್ದಾರೆ ಎಂದು ಟ್ವೀಟ್ ಮಾಡಿ ಸ್ಕ್ರೀನ್ ಶಾಟ್ ಹಂಚಿಕೊಂಡರು. ಈ ಟ್ವೀಟ್​ ವೈರಲ್ ಆಗುತ್ತಿದ್ದಂತೆ ಅನೇಕರು ಇದನ್ನು ಮೊದಮೊದಲಿಗೆ ನಂಬಲಿಲ್ಲ. ಒಬ್ಬ ವ್ಯಕ್ತಿ ಆಪಲ್‌ ಸಂಸ್ಥೆಗೆ ತಮಾಷೆ ಮಾಡಿದ್ದಾರೆ- ‘ಐಫೋನ್​13 ಮತ್ತು ಐಫೋನ್14ರ ನಡುವೆ ಹೋಲಿಕೆ ಎಷ್ಟಿದೆಯೆಂದರೆ, 14 ಅನ್ನು 13 ಎಂದು ತಪ್ಪಾಗಿ ಭಾವಿಸಿ ಆರ್ಡರ್ ಮಾಡಿದ್ದಾರೆ. ಆಗ 13ರ ಬದಲಿಗೆ 14 ಅನ್ನು ಕಂಪೆನಿ ವಿತರಿಸಿದೆ’.

ಇನ್ನೊಬ್ಬರು, ‘ಐಫೋನ್ 13 ಬದಲಿಗೆ ಐಫೋನ್​14 ಪಡೆದ ವ್ಯಕ್ತಿ ಅದೃಷ್ಟವಂತ. ನಾನು ಇಂಥ ಅದೃಷ್ಟಶಾಲಿಯಾಗಲು ಬಯಸುತ್ತೇನೆ’ ಎಂದಿದ್ದಾರೆ. ಇನ್ನೂ ಕೆಲವರು, ಪ್ರಾಮಾಣಿಕತೆಯಿಂದ ಗ್ರಾಹಕರು ಫೋನ್ ಹಿಂದಿರುಗಿಸಬೇಕು ಎಂದಿದ್ದಾರೆ. ಮಗದೊಬ್ಬರು, ‘ಹಿಂದಿರುಗಿಸುವುದು ಒಳಿತು, ಯಾವುದೇ ರೀತಿಯ ವಾರೆಂಟಿಯನ್ನು ಕ್ಲೈಮ್ ಮಾಡಿಕೊಳ್ಳುವಾಗ ಸಮಸ್ಯೆ ಎದುರಾಗಬಹುದು’ ಎಂದಿದ್ದಾರೆ.

ಈ ಅದೃಷ್ಟ ನಿಮ್ಮದಾಗಿದ್ದರೆ ನೀವೇನು ಮಾಡುತ್ತಿದ್ದಿರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್