AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಾಟರಿ ಹೊಡೆಯಿತೋ!’ ಆರ್ಡರ್ ಮಾಡಿದ್ದು ಐಫೋನ್​ 13, ತಲುಪಿದ್ದು ಐಫೋನ್ 14

Iphone : ಪ್ರಾಮಾಣಿಕತೆಯಿಂದ ಗ್ರಾಹಕರು ಫೋನ್ ಹಿಂದಿರುಗಿಸಬೇಕು ಎಂದು ಒಬ್ಬರು, ಇಂಥ ಅದೃಷ್ಟ ನನಗೇ ಸಿಗಲಿ ಎಂದು ಮತ್ತೊಬ್ಬರು. ಈ ಟ್ವೀಟ್​ಗೆ ನೆಟ್ಟಿಗರ ಮಿಶ್ರಪ್ರತಿಕ್ರಿಯೆ ದೊರಕುತ್ತಿದೆ. ನೀವೇನಂತೀರಿ?

‘ಲಾಟರಿ ಹೊಡೆಯಿತೋ!’ ಆರ್ಡರ್ ಮಾಡಿದ್ದು ಐಫೋನ್​ 13, ತಲುಪಿದ್ದು ಐಫೋನ್ 14
Man Orders iPhone 13 From Flipkart Receives iPhone 14 Instead
TV9 Web
| Edited By: ಶ್ರೀದೇವಿ ಕಳಸದ|

Updated on: Oct 06, 2022 | 6:13 PM

Share

Trending : ಇತ್ತೀಚೆಗಷ್ಟೇ ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದವರಿಗೆ ಘಡಿ ಸೋಪ್​, ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದವರಿಗೆ ಒಂದು ಕೇಜಿ ಆಲೂಗಡ್ಡೆ ತಲುಪಿದ ವಿಷಯವನ್ನು ಓದಿದ್ದೀರಿ, ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ವಿಷಯ ಮಾತ್ರ ಸ್ವಲ್ಪ ಭಿನ್ನವಾಗಿದೆ. ವ್ಯಕ್ತಿಯೊಬ್ಬರು ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಐಫೋನ್13, ಆದರೆ ಅವರಿಗೆ ಫ್ಲಿಪ್​ಕಾರ್ಟ್​ ಮೂಲಕ ತಲುಪಿದ್ದು ಐಫೋನ್​14! ಯಾರಿಗೆ ತಾನೆ ಅಚ್ಚರಿಯಾಗದು ಇಂಥ ವಿಷಯ. ರಸೀದಿಯ ಸ್ಕ್ರೀನ್​ ಶಾಟ್​ ಈಗ ಅಂತರ್ಜಾಲದ ಪೂರ್ತಿ ಹರಿದಾಡುತ್ತಿದೆ. ಭಾರತೀಯ ಹಬ್ಬಗಳ ನೆಪದಲ್ಲಿ ಎಲ್ಲ ಆನ್​ಲೈನ್​ ಮಳಿಗೆಗಳು ರಿಯಾಯ್ತಿ ದರದಲ್ಲಿ ಮಾರಾಟಮೇಳ ನಡೆಸಿರುವುದರ ಫಲ ಮತ್ತು ಮಾಯೆ ಇದು!

ಅದೃಷ್ಟ ಎನ್ನುವುದು ಇದಕ್ಕೇ. ಬಯಸಿದವರಿಗೆ ಅದು ಸಿಗುವುದಿಲ್ಲ. ಅನಿರೀಕ್ಷಿತಾಗಿ ಅದು ಇನ್ನ್ಯಾರನ್ನೋ ದೊರಕಿರುತ್ತದೆ. ಅಶ್ವಿನ್​ ಹೆಗಡೆ ಎಂಬುವವರು ಆ ದಿನ ತನ್ನ ಫಾಲೋವರ್ ಒಬ್ಬರು ಐಫೋನ್ 13 ರ ಬದಲಿಗೆ ಐಫೋನ್ 14 ಅನ್ನು ಪಡೆದಿದ್ದಾರೆ ಎಂದು ಟ್ವೀಟ್ ಮಾಡಿ ಸ್ಕ್ರೀನ್ ಶಾಟ್ ಹಂಚಿಕೊಂಡರು. ಈ ಟ್ವೀಟ್​ ವೈರಲ್ ಆಗುತ್ತಿದ್ದಂತೆ ಅನೇಕರು ಇದನ್ನು ಮೊದಮೊದಲಿಗೆ ನಂಬಲಿಲ್ಲ. ಒಬ್ಬ ವ್ಯಕ್ತಿ ಆಪಲ್‌ ಸಂಸ್ಥೆಗೆ ತಮಾಷೆ ಮಾಡಿದ್ದಾರೆ- ‘ಐಫೋನ್​13 ಮತ್ತು ಐಫೋನ್14ರ ನಡುವೆ ಹೋಲಿಕೆ ಎಷ್ಟಿದೆಯೆಂದರೆ, 14 ಅನ್ನು 13 ಎಂದು ತಪ್ಪಾಗಿ ಭಾವಿಸಿ ಆರ್ಡರ್ ಮಾಡಿದ್ದಾರೆ. ಆಗ 13ರ ಬದಲಿಗೆ 14 ಅನ್ನು ಕಂಪೆನಿ ವಿತರಿಸಿದೆ’.

ಇನ್ನೊಬ್ಬರು, ‘ಐಫೋನ್ 13 ಬದಲಿಗೆ ಐಫೋನ್​14 ಪಡೆದ ವ್ಯಕ್ತಿ ಅದೃಷ್ಟವಂತ. ನಾನು ಇಂಥ ಅದೃಷ್ಟಶಾಲಿಯಾಗಲು ಬಯಸುತ್ತೇನೆ’ ಎಂದಿದ್ದಾರೆ. ಇನ್ನೂ ಕೆಲವರು, ಪ್ರಾಮಾಣಿಕತೆಯಿಂದ ಗ್ರಾಹಕರು ಫೋನ್ ಹಿಂದಿರುಗಿಸಬೇಕು ಎಂದಿದ್ದಾರೆ. ಮಗದೊಬ್ಬರು, ‘ಹಿಂದಿರುಗಿಸುವುದು ಒಳಿತು, ಯಾವುದೇ ರೀತಿಯ ವಾರೆಂಟಿಯನ್ನು ಕ್ಲೈಮ್ ಮಾಡಿಕೊಳ್ಳುವಾಗ ಸಮಸ್ಯೆ ಎದುರಾಗಬಹುದು’ ಎಂದಿದ್ದಾರೆ.

ಈ ಅದೃಷ್ಟ ನಿಮ್ಮದಾಗಿದ್ದರೆ ನೀವೇನು ಮಾಡುತ್ತಿದ್ದಿರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್