AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಕ ಹೊಂದಾಣಿಕೆ ಆಗಿಲ್ಲ ಅಂತಲ್ಲ, ವರನ ಸಿಬಿಲ್‌ ಸ್ಕೋರ್‌ ಕಡಿಮೆಯಿದೆ ಎಂದು ಮದುವೆ ರದ್ದುಗೊಳಿಸಿದ ವಧು

ಸಾಮಾನ್ಯವಾಗಿ ಮದುವೆ ಮಾಡುವಾಗ ಜಾತಕ ಹೊಂದಾಣಿಕೆ ಆಗುತ್ತದೆಯೇ ಎಂಬುದನ್ನು ನೋಡುತ್ತಾರೆ. ಹೀಗೆ ಕೆಲವರು ಜಾತಕ ಕೂಡಿ ಬರದಿದ್ದರೆ ಒಂದಾ ಆ ಸಂಬಂಧವನ್ನೇ ಬೇಡ ಎಂದು ಹೇಳ್ತಾರೆ ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಜಾತಕ ಹೊಂದಾಣಿಕೆ ಆಗಿಲ್ಲ ಅಂತಲ್ಲ, ಬದಲಿಗೆ ವರನ ಸಿಬಿಲ್‌ ಸ್ಕೋರ್‌ ಕಡಿಮೆಯಿದೆ ಎಂದು ವಧುವಿನ ಕಡೆಯವರು ನಿಶ್ಚಯವಾಗಿದ್ದ ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದಾರೆ. ಈ ಸುದ್ದಿ ಇದೀಗ ಭಾರಿ ವೈರಲ್‌ ಆಗುತ್ತಿದೆ.

ಜಾತಕ ಹೊಂದಾಣಿಕೆ ಆಗಿಲ್ಲ ಅಂತಲ್ಲ, ವರನ ಸಿಬಿಲ್‌ ಸ್ಕೋರ್‌ ಕಡಿಮೆಯಿದೆ ಎಂದು ಮದುವೆ ರದ್ದುಗೊಳಿಸಿದ ವಧು
Low Cibil Score Rejected Marriage,
ಮಾಲಾಶ್ರೀ ಅಂಚನ್​
| Edited By: |

Updated on:Feb 10, 2025 | 3:48 PM

Share

ಹಿಂದೆಲ್ಲಾ ಒಂದು ಮದುವೆ ಮಾಡ್ಬೇಕಂದ್ರೆ ಹುಡುಗ ಹುಡುಗಿಯ ಜಾತಕ ಹೊಂದಾಣಿಕೆಯಾಗುತ್ತದೆಯೇ, ಗುಣಗಳು ಕೂಡಿ ಬರುತ್ತದೆಯೇ, ಹುಡುಗ ಹುಡುಗಿ ಸಂಸ್ಕಾರವಂತರೇ ಎಂಬುದನ್ನು ಪರಿಶೀಲಿಸುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ, ಜಾತಕ ಹೊಂದಾಣಿಕೆ ಆಗಿಲ್ಲ ಅಂದ್ರೂ ಪರವಾಗಿಲ್ಲ ಹುಡುಗ ಸ್ಥಿತಿವಂತನಾಗಿದ್ರೆ ಅಥವಾ ಆತ ಒಳ್ಳೆಯ ಕೆಲಸದಲ್ಲಿದ್ರೆ ಆತನಿಗೆಯೇ ಮಗಳನ್ನು ಮದುವೆ ಮಾಡಿ ಕೊಡ್ತಾರೆ. ಇನ್ನೂ ಹುಡುಗನಿಗೆ ಕಮ್ಮಿ ಸಂಬಳ ಇದೆ ಅಂದ್ರೆ ಮದುವೆ ಮಾಡಲು ಕೂಡಾ ಹಿಂದೆ ಮುಂದೆ ನೋಡ್ತಾರೆ. ಇಲ್ಲೊಂದು ಇದಕ್ಕೆ ನಿದರ್ಶನದಂತಿರು ಘಟನೆ ನಡೆದಿದ್ದು, ವರನ ಸಿಬಿಲ್‌ ಸ್ಕೋರ್‌ ಕಡಿಮೆಯಿದೆ ಎಂದು ವಧುವಿನ ಕಡೆಯವರು ನಿಶ್ಚಯವಾಗಿದ್ದ ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದಾರೆ. ಈ ಸುದ್ದಿ ಇದೀಗ ಭಾರಿ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಪ್ರಕರಣ ಮಹಾರಾಷ್ಟ್ರದ ಮೂರ್ತಿಜಾಪುರ ಎಂಬಲ್ಲಿ ನಡೆದಿದ್ದು, ಹುಡುಗನ ಸಿಬಿಲ್‌ ಸ್ಕೋರ್‌ ಕಡಿಮೆಯಿದೆ ಎಂಬ ಕಾರಣಕ್ಕೆ ವಧುವಿನ ಕುಟುಂಬಸ್ಥರು ನಿಶ್ಚಯವಾಗಿದ್ದ ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದಾರೆ. ಹುಡುಗಿ ನೋಡುವ ಸಂಪ್ರದಾಯದ ಬಳಿಕ ಎರಡೂ ಕುಟುಂಬಗಳಿಗೂ ಸಂಬಂಧ ಒಪ್ಪಿಗೆಯಾಗಿತ್ತು. ಮದುವೆ ಕೂಡಾ ಬಹುತೇಕ ಕನ್ಫರ್ಮ್‌ ಆಗಿತ್ತು. ಆದರೆ ಕೊನೆಯ ಸುತ್ತಿನ ಮಾತುಕತೆಗೂ ಮುನ್ನ ಹುಡುಗಿಯ ಮಾವ ವರನ ಸಿಬಿಲ್‌ ಸ್ಕೋರ್‌ ಪರಿಶೀಲಿಸಲು ಒತ್ತಾಯಿಸಿದ್ದು, ಹೀಗೆ ಪರೀಕ್ಷಿಸಿದಾಗ ಸಿಬಿಲ್‌ ಸ್ಕೋರ್‌ ಕಡಿಮೆಯಿರುವುದನ್ನು ಕಂಡು ವಧುವಿನ ಕಡೆಯವರು ಮದುವೆ ಬೇಡವೇ ಬೇಡ ಎಂದು ಹೇಳಿದ್ದಾರೆ.

ಸಿಬಿಲ್‌ ಸ್ಕೋರ್‌ ಪರೀಕ್ಷಿಸಿದ ಸಂದರ್ಭದಲ್ಲಿ ಹುಡುಗ ಅನೇಕ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾನೆ ಮತ್ತು ಅವನ ಆರ್ಥಿಕ ಸ್ಥಿತಿ ಅಷ್ಟಾಗಿ ಚೆನ್ನಾಗಿರಲಿಲ್ಲ ಎಂಬುದು ಹುಡುಗಿಯ ಕುಟುಂಬಕ್ಕೆ ಗೊತ್ತಾಗಿದೆ. ಇದನ್ನು ನೋಡಿ ಶಾಕ್‌ ಆದ ಹುಡುಗಿ ಮನೆಯವರು ʼಹುಡುಗ ಈಗಾಗಲೇ ಸಾಲದಲ್ಲಿದ್ದಾನೆ, ಇವನಿಗೆ ನಮ್ಮ ಮನೆ ಮಗಳನ್ನು ಮದುವೆ ಮಾಡಿ ಕೊಟ್ರೆ ಆಕೆ ಭವಿಷ್ಯ ಏನಾಗಬೇಡʼ ಎಂದು ಕಳವಳ ವ್ಯಕ್ತಪಡಿಸಿ ಮನೆ ಮಗಳ ಭವಿಷ್ಯದ ದೃಷ್ಟಿಯಿಂದ ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದಾರೆ.

ಇದನ್ನೂ ಓದಿ: ದಮ್ಮಯ್ಯ ಶರ್ಟ್‌ ಬಿಟ್ಬಿಡೋ ನನ್ನಮ್ಮ ಬೈತಾರೆ; ಬಟ್ಟೆನಾ ಎಳಿಬೇಡವೆಂದು ಹುಲಿಯ ಮುಂದೆ ಗೋಗರೆದ ಬಾಲಕ

CIBIL ಸ್ಕೋರ್ ಎಂದರೇನು?

CIBIL ಸ್ಕೋರ್‌ನ್ನು ಕ್ರೆಡಿಟ್ ಸ್ಕೋರ್ ಎಂದೂ ಕರೆಯಲಾಗುತ್ತದೆ. ಇದು ವ್ಯಕ್ತಿಯ ಸಾಲದ ಅರ್ಹತೆ ಅಥವಾ ವ್ಯಕ್ತಿ ಸಾಲ ಪಡೆಯಲು ಅರ್ಹತೆಯನ್ನು ಹೊಂದಿದ್ದಾನೆಯೇ ಎಂಬುದನ್ನು ನಿರ್ಧರಿಸುತ್ತದೆ. ಈ ಅಂಕವು 300 ರಿಂದ 900 ರ ನಡುವೆ ಇರುತ್ತದೆ. 700 ಕ್ಕಿಂತ ಹೆಚ್ಚಿನ ಅಂಕಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. CIBIL ಸ್ಕೋರ್ ಅನ್ನು ವ್ಯಕ್ತಿಯ ಹಿಂದಿನ ಕ್ರೆಡಿಟ್ ಇತಿಹಾಸವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ, ಇದರಲ್ಲಿ ಅವನು ತೆಗೆದುಕೊಂಡ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಪಾವತಿ ಇತಿಹಾಸವೂ ಸೇರಿದೆ. ಯಾರಿಗಾದರೂ ಸಾಲ ನೀಡುವ ಮೊದಲು ಬ್ಯಾಂಕುಗಳು CIBIL ಸ್ಕೋರ್ ಅನ್ನು ಪರಿಶೀಲಿಸುತ್ತವೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Mon, 10 February 25

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!