AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊಂಚ ಸ್ಲಿಪ್​ ಆದ್ರೆ ಬದುಕುಳಿಯುವುದೇ ಡೌಟು! ಯುವಕನ ಸ್ಟಂಟ್​ ವಿಡಿಯೋ ನೋಡಿದ್ರೆ ನೀವೂ ಬೆರಗಾಗ್ತೀರಾ

ಕೆಲವೊಂದು ಸ್ಟಂಟ್​ ವಿಡಿಯೋಗಳು ಕಣ್​ಕಟ್ಟುವಂತಿರುತ್ತದೆ. ಅಂತಹುದೇ ಒಂದು ಸ್ಟಂಟ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಕೊಂಚ ಸ್ಲಿಪ್​ ಆದ್ರೆ ಬದುಕುಳಿಯುವುದೇ ಡೌಟು! ಯುವಕನ ಸ್ಟಂಟ್​ ವಿಡಿಯೋ ನೋಡಿದ್ರೆ ನೀವೂ ಬೆರಗಾಗ್ತೀರಾ
ಯುವಕನ ಸ್ಟಂಟ್​ ವಿಡಿಯೋ ವೈರಲ್​
shruti hegde
|

Updated on: May 18, 2021 | 3:44 PM

Share

ಯುವಕರ ಸಾಹಸದ ಸ್ಟಂಟ್​ ವಿಡಿಯೋಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಯಾವುದೇ ಸಾಧನವಿಲ್ಲದೇ ಅದೆಷ್ಟೋ ಎತ್ತರದ ಕಟ್ಟಡವನ್ನು ಹತ್ತುವ ಯುವಕ, ಅಷ್ಟೇ ಎತ್ತರದಿಂದ ಕೆಳಗೆ ಹಾರಿ ಸ್ಟಂಟ್​ ಮಾಡುವ ಬಾಲಕ. ಹೀಗೆ ಅನೇಕ ವಿಡಿಯೋಗಳನ್ನು ನೋಡಿಯೇ ಇರುತ್ತೀರಿ. ಕೆಲವೊಂದು ವಿಡಿಯೋಗಳು ಕಣ್​ಕಟ್ಟುವಂತಿರುತ್ತದೆ. ಅಂತಹುದೇ ಒಂದು ಸ್ಟಂಟ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನೀವು ವಿಡಿಯೋದಲ್ಲಿ ನೋಡಬಹುದು. ಯುವಕನೊಬ್ಬ ಸೈಕಲ್​ನೊಂದಿಗೆ ಸಾಹಸ ಮಾಡುತ್ತಾನೆ. ಸೈಕಲ್​ ಏರಿದ ಯುವಕ ಸೈಕಲ್​ನ ಮುಂದಿನ ಚಕ್ರವನ್ನು ಮೇಲಕ್ಕೆ ಎತ್ತಿ, ಹಿಂದಿನ ಚಕ್ರದ ಮೂಲಕವೇ ಚಲಿಸುತ್ತಾನೆ. ಸೇತುವೆಯಲ್ಲಿ ಸಾಗುವ ಯುವಕ ಸೇತುವೆಯ ಮಧ್ಯದ ಅಂತರವನ್ನು ತಪ್ಪಿಸಿ, ಸೈಕಲ್​ ಹೊಡೆಯುತ್ತಾನೆ. ವಿಡಿಯೋ ನೋಡುತ್ತಿದ್ದಂತೆ ಆಶ್ಚರ್ಯವೆನಿಸುತ್ತದೆ.

ಅಪಾಯಕಾರಿಯಾದ ವಿಡಿಯೋ ಇದಾಗಿದೆ. ಟ್ವಿಟರ್​ನಲ್ಲಿ ಪೋಸ್ಟ್​ ಆಗುತ್ತಿದ್ದಂತೆಯೇ 60,000ಕ್ಕೂ ಹೆಚ್ಚು ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ಇಂತಹ ಸ್ಟಂಟ್​ ಮಾಡಲು ಹೋಗಿ ಅದೆಷ್ಟೋ ಜನ ಜೀವ ಕಳೆದುಕೊಂಡಿದ್ದಾರೆ. ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಕುರಿತಾಗಿ ನೆಟ್ಟಿಗರು ಆಕ್ಷೇಪ ಹೊರಹಾಕಿದ್ದಾರೆ.

ಸ್ಟಂಟ್​ ಮಾಡೋಕೆ ಹೋಗಿ ಅವಾಂತರ: ನೋಡನೋಡುತ್ತಿದ್ದಂತೆ ಪಲ್ಟಿಯಾದ ರೇಸ್​ ಕಾರ್ ರೇಸ್​ನಲ್ಲಿ ಪಾಲ್ಗೊಂಡ ಸ್ಪೋರ್ಟ್ಸ್ ಕಾರು ಪಲ್ಟಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಹೊರವಲಯದ ಸಂಕ್ಲಾಪುರ ಗ್ರಾಮದ ಬಳಿ ಈ ಹಿಂದೆ ನಡೆದಿತ್ತು. ವಿಜಯನಗರ ಅಕಾಡೆಮಿ ಆಫ್ ಮೋಟೋ ಸ್ಪೋರ್ಟ್ಸ್ ಎಂಬ ಖಾಸಗಿ ಸಂಸ್ಥೆ ಆಯೋಜನೆ ಮಾಡಿದ್ದ ಕಾರ್ ರೇಸ್​ನಲ್ಲಿ ಅವಘಡ ಸಂಭವಿಸಿತ್ತು. ರೇಸ್​ ವೇಳೆ ಕಾರು ಚಾಲಕ ಸ್ಟಂಟ್​ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ನೋಡ ನೋಡುತ್ತಿದ್ದಂತೇ ವಾಹನ ಪಲ್ಟಿಯಾಗಿದೆ. ಆದರೆ, ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಇದನ್ನೂ ಓದಿ: ಸ್ಟಂಟ್​ ಮಾಡೋಕೆ ಹೋಗಿ ಅವಾಂತರ: ನೋಡನೋಡುತ್ತಿದ್ದಂತೆ ಪಲ್ಟಿಯಾದ ರೇಸ್​ ಕಾರ್, ಮತ್ತೆ ಚಾಲಕನ ಕಥೆ?

Follow Us
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್