ಆರ್ಡರ್​ ಮಾಡಿದ್ದು 1 ಲಕ್ಷ ರೂ. ಬೆಲೆಯ ಐಫೋನ್​​, ಆನ್ಲೈನ್​ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್​

ಇಂಗ್ಲೆಂಡ್​ನ ಡೇನಿಯಲ್​ ಎನ್ನುವ ವ್ಯಕ್ತಿ 1 ಲಕ್ಷ ರೂಗಳ ಆಪಲ್​ 13 ಐಫೋನ್ಅನ್ನು ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದರು. ಆದರೆ ಡೆಲಿವರಿಯಾದ ಕವರ್​ನಲ್ಲಿ 2 ಕ್ಯಾಡ್ಬರಿ ಚಾಕೋಲೇಟ್​ ಟಾಯ್ಲೆಟ್​ ಕವರ್​ನಲ್ಲಿ ಸುತ್ತಿಕೊಂಡಿತ್ತು. ಇದನ್ನು ನೋಡಿ ಡೇನಿಯಲ್​ ಗಾಬರಿಗೊಂಡಿದ್ದಾರೆ.

ಆರ್ಡರ್​ ಮಾಡಿದ್ದು 1 ಲಕ್ಷ ರೂ. ಬೆಲೆಯ ಐಫೋನ್​​, ಆನ್ಲೈನ್​ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್​
Follow us
| Updated By: Digi Tech Desk

Updated on:Dec 28, 2021 | 1:18 PM

ಹಲವು ಬಾರಿ ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದು ಒಂದು ವಸ್ತುವಾದರೆ, ಕೈಗೆ ಸಿಗುವುದು ಬೇರೆ ಯಾವುದೋ ವಸ್ತವಾದ ಹಲವು ಘಟನೆಗಳು ಈ ಹಿಂದೆ ನಡೆದಿದೆ. ಇದೀಗ ಅಂಥಹದ್ದೆ ಒಂದು ಘಟನೆ ಆಪಲ್​ ಐಫೋನ್​ ವಿಷಯದಲ್ಲಿ ನಡೆದಿದೆ.  ಇಂಗ್ಲೆಂಡ್​ನ ಡೇನಿಯಲ್​ ಎನ್ನುವ ವ್ಯಕ್ತಿ 1 ಲಕ್ಷ ರೂಗಳ ಆಪಲ್​ 13 ಐಫೋನ್ಅನ್ನು ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದರು. ಆದರೆ ಡೆಲಿವರಿಯಾದ ಕವರ್​ನಲ್ಲಿ 2 ಕ್ಯಾಡ್ಬರಿ ಚಾಕೋಲೇಟ್​ ಟಾಯ್ಲೆಟ್​ ಕವರ್​ನಲ್ಲಿ ಸುತ್ತಿಕೊಂಡಿತ್ತು. ಇದನ್ನು ನೋಡಿ ಡೇನಿಯಲ್​ ಗಾಬರಿಗೊಂಡಿದ್ದಾರೆ.

ಡಿಸೆಂಬರ್​2ರಂದು ಐಪೋನ್​ಅನ್ನು ಆರ್ಡರ್​ ಮಾಡಿದ  ಡೇನಿಯಲ್ ಅವರು ಡಿ. 17ರವರೆಗೆ ಕಾದಿದ್ದರು. ಆದರೆ ಆರ್ಡರ್​ ಬರದ ಕಾರಣದ  ಟ್ರ್ಯಾಕಿಂಗ್​ ಚೆಕ್​ ಮಡಿದ ವೇಳೆ ಸ್ಟಾಕ್​ ಖಾಲಿಯಾದ ಕಾರಣ ತಡವಾಗುತ್ತದೆ ಎಂದು ಮೆಸೇಜ್​ ನೋಡಿದ್ದರು. ಕೊನೆಗೂ ಡಿ.17ರಂದು ಪಾರ್ಸಲ್​ ಬಂದಿದ್ದನ್ನು ನೀಡಿ ಡೇನಿಯಲ್​ ಸಂತಸಗೊಂಡಿದ್ದರು. ಖುಷಿಯಿಂದ ಪ್ಯಾಕ್​ ಓಪನ್​ ಮಾಡಿದಾಗ ಡೇನಿಯಲ್​ ಶಾಕ್​ಆಗಿದ್ದರು. ಯಾಕೆಂದರೆ ಪಾರ್ಸಲ್​ನಲ್ಲಿ ಎರಡು ವೈಟ್ ಓರಿಯೋ ಚಾಕೋಲೆಟ್​ಗಳು ಟಾಯ್ಲೆಟ್​ ಪೇಪರ್​ನಲ್ಲು ಸುತ್ತಿಕೊಂಡಿದ್ದವು.

ಈ ಕುರಿತು ಡೇನಿಯಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪೋನ್​ಗಾಗಿ ಕಾದು ಸುಸ್ತಾಗಿ ಕೊನೆಗೆ 24 ಮೈಲಿ ದೂರ ಹೋಗಿ ಅವರ ಪಾರ್ಸಲ್​ ಡೆಲಿವರಿ ಆಗುವ ಅಂಗಡಿಗೇ ಹೋಗಿ ಕೆಳಿದೆ. ಆಗ ಅವರು ನನ್ನ ಹೆಸರಿನಲ್ಲಿ ಬಂದಿದ್ದ ಬಾಕ್ಸ್​ ಕೊಟ್ಟರು. ಬಾಕ್ಸ್​ ಸ್ವಲ್ಪ ಹರಿದಿತ್ತು ಆದರೆ ಭಾರವಾಗಿತ್ತು. ಹೀಗಾಗಿ ಮೊಬೈಲ್​ ಇರಬಹುದೆಂದು ಭಾವಿಸಿದೆ. ಆದರೆ ಅದರಲ್ಲಿ 2 ಚಾಕಲೋಟ್​ಗಳು ಟಾಯ್ಲೆಟದದ ಪೇಪರ್​ನಲ್ಲಿ ಸುತ್ತಿಕೊಂಡಿತ್ತು. ಅಲ್ಲದೆ ತಾನು 1 ಲಕ್ಷರೂಗಳನ್ನು ಪಾವತಿ ಮಾಡಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ.

ಈ ಕುರಿತು ಅವರು ಗ್ರಾಹಕ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದು ತನಿಖೆ ಆರಂಭವಾಗಿದೆ. ಇದು ಇಂಗ್ಲೆಂಡ್​ನಲ್ಲಿ ನಡೆದ ಘಟನೆಯಾದರೂ ಭಾರತದಲ್ಲೂ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ನಡೆಯುತ್ತಲೂ ಇವೆ. ಹೀಗಾಗಿ ಆನ್ಲೈನ್​ ಆರ್ಡರ್​ ಮಾಡುವುದಕ್ಕೂ ಮೊದಲು ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ:

Viral Video: ಸಿಡಿಲು ಬಡಿದು ಸ್ಪೋಟಗೊಂಡ ವ್ಯಕ್ತಿ; ನೆಟ್ಟಿಗರಲ್ಲಿ ಭಯ ಹುಟ್ಟಿಸಿದ ವಿಡಿಯೋ ನೋಡಿ

Published On - 10:02 am, Tue, 28 December 21

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ