AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್​​ನಲ್ಲಿ ಕೆಲಸಕ್ಕಾಗಿ 39 ಬಾರಿ ಪ್ರಯತ್ನಿಸಿದ; ಮರಳಿ ಯತ್ನವ ಮಾಡಿ ಕೆಲಸ ಗಿಟ್ಟಿಸಿಕೊಂಡ ಯುವಕನ ಕತೆ ಇಲ್ಲಿದೆ

ಗೂಗಲ್​​ಗೆ ಕಳುಹಿಸಿರುವ ಇಮೇಲ್​​ಗಳ ಸ್ಕ್ರೀನ್​​ಶಾಟ್ ನೋಡಿದರೆ ಕೋಹೆನ್ 2019 ಆಗಸ್ಟ್ 25ರಂದು ಮೊದಲ ಬಾರಿ ಇಮೇಲ್ ಕಳುಹಿಸಿದ್ದು, ಅದು ತಿರಸ್ಕೃತವಾಗಿತ್ತು. ಇದಾದನಂತರ ಅವರು 2019 ಸೆಪ್ಟೆಂಬರ್​​ನಲ್ಲಿ ಎರಡು ಬಾರಿ ಇಮೇಲ್ ಕಳುಹಿಸಿದ್ದು ಅದೆರಡೂ ತಿರಸ್ಕೃತವಾಗಿದೆ.

ಗೂಗಲ್​​ನಲ್ಲಿ ಕೆಲಸಕ್ಕಾಗಿ 39 ಬಾರಿ ಪ್ರಯತ್ನಿಸಿದ; ಮರಳಿ ಯತ್ನವ ಮಾಡಿ ಕೆಲಸ ಗಿಟ್ಟಿಸಿಕೊಂಡ ಯುವಕನ ಕತೆ ಇಲ್ಲಿದೆ
ಲಿಂಕ್ಡ್ ಇನ್ ಪೋಸ್ಟ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Jul 27, 2022 | 5:31 PM

Share

ಗೂಗಲ್​​ನಲ್ಲಿ (Google) ಕೆಲಸ ಗಿಟ್ಟಿಸಬೇಕೆಂಬ ಅದಮ್ಯ ಆಸೆಯಿಂದ ಟೈಲರ್ ಕೋಹೆನ್ (Tyler Cohen ) ಎಂಬ ಯುವಕ ಮತ್ತೆ ಮತ್ತೆ ಗೂಗಲ್​​ಗೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದ. ಅದು ಒಂದು ಅಥವಾ ಎರಡು ಬಾರಿ ಅಲ್ಲ ಬರೋಬ್ಬರಿ 39 ಬಾರಿ. ಅಂತೂ ಕೊನೆಗೆ ಆತನ ಕನಸು ಈಡೇರಿದ್ದು ಗೂಗಲ್​​ನಲ್ಲಿ ಕೆಲಸ ಸಿಕ್ಕಿದೆ. ಗೂಗಲ್ ಜತೆ ಇಮೇಲ್ ಸಂವಹನ ಮಾಡಿದ್ದರ ಸ್ಕ್ರೀನ್ ಶಾಟ್​​ನ್ನು ಲಿಂಕ್ಡ್​​ಇನ್​​ನಲ್ಲಿ ಶೇರ್ ಮಾಡಿರುವ ಟೈಲರ್ ಕೋಹೆನ್ , ಜುಲೈ 19ರಂದು ನನಗೆ ಗೂಗಲ್​​ ನಲ್ಲಿ ಕೆಲಸ ಸಿಕ್ಕಿದೆ ಎಂದಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ವಾಸಿಸುತ್ತಿರುವ ಕೋಹೆನ್, ಗೂಗಲ್​​ನಲ್ಲಿ ಕೆಲಸ ಸಿಗುವುದಕ್ಕಿಂತ ಮುನ್ನ ಡೋರ್​​ಡಾಶ್​​ನಲ್ಲಿ ಸ್ಟ್ರಾಟಜಿ ಆಂಡ್ ಓಪರೇಷನ್ ವಿಭಾಗದಲ್ಲಿ ಅಸೋಸಿಯೇಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಪರಿಶ್ರಮ ಮತ್ತು ಹುಚ್ಚುತನ ನಡುವೆ ತೆಳುವಾದ ಗೆರೆಯೊಂದಿದೆ. ನನ್ನಲ್ಲಿ ಇರುವುದು ಯಾವುದು ಎಂಬುದನ್ನು ನಾನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇನೆ. 39 ನಿರಾಕರಣೆ, 1 ಸ್ವೀಕೃತಿ ಎಂದು ಲಿಂಕ್ಡ್ ಇನ್ ನಲ್ಲಿ ಈತ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಜತೆ #acceptedoffer, #application ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದು 36,000ಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದು 259 ಮಂದಿ ಶೇರ್ ಮಾಡಿದ್ದಾರೆ. ಗೂಗಲ್​​ಗೆ ಕಳುಹಿಸಿರುವ ಇಮೇಲ್​​ಗಳ ಸ್ಕ್ರೀನ್​​ಶಾಟ್ ನೋಡಿದರೆ ಕೋಹೆನ್ 2019 ಆಗಸ್ಟ್ 25ರಂದು ಮೊದಲ ಬಾರಿ ಇಮೇಲ್ ಕಳುಹಿಸಿದ್ದು, ಅದು ತಿರಸ್ಕೃತವಾಗಿತ್ತು. ಇದಾದನಂತರ ಅವರು 2019 ಸೆಪ್ಟೆಂಬರ್​​ನಲ್ಲಿ ಎರಡು ಬಾರಿ ಇಮೇಲ್ ಕಳುಹಿಸಿದ್ದು ಅದೆರಡೂ ತಿರಸ್ಕೃತವಾಗಿದೆ. ಆಮೇಲೆ 2002 ಜೂನ್ ತಿಂಗಳಲ್ಲಿ ಮತ್ತೆ ಇಮೇಲ್ ಕಳುಹಿಸಿದ್ದು, ಹೀಗೆ ಹಲವಾರು ಇಮೇಲ್ ಕಳುಹಿಸಿದ ನಂತರ 2022 ಜುಲೈ 19 ರಂದು ಗೂಗಲ್ ಅವರಿಗೆ ಕೆಲಸ ನೀಡಿದೆ.

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ