AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂದಿರಾಳ ಕಷ್ಟದ ಸಮಯದಲ್ಲಿ ವಯಸ್ಸಾದ ತಂದೆ-ತಾಯಿ ಬಂಡೆಯಂತೆ ಆಕೆ ಹಿಂದೆ ನಿಂತಿದ್ದಾರೆ!

ಇದುವರೆಗೆ ತಮ್ಮ ಪತಿಯ ನೆನೆಪಿನಲ್ಲಿ ಅವರೊಂದಿಗಿನ ಫೋಟೋಗಳನ್ನು ಶೇರ್​ ಮಾಡುತ್ತಿದ್ದ ಮಂದಿರಾ ಮೊದಲಬಾರಿಗೆ ತಮ್ಮ ತಂದೆ-ತಾಯಿಯೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖವನ್ನು ಅವರು ರಾಜ್​ ಮತ್ತು ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಮಂದಿರಾಳ ಕಷ್ಟದ ಸಮಯದಲ್ಲಿ ವಯಸ್ಸಾದ ತಂದೆ-ತಾಯಿ ಬಂಡೆಯಂತೆ ಆಕೆ ಹಿಂದೆ ನಿಂತಿದ್ದಾರೆ!
ಅಪ್ಪ-ಅಮ್ಮ ಮತ್ತು ಮಕ್ಕಳೊಂದಿಗೆ ಮಂದಿರಾ ಬೇಡಿ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 21, 2021 | 10:17 PM

Share

ನವದೆಹಲಿ: ಇತ್ತೀಚಿಗಷ್ಟೇ ತಮ್ಮ ಪತಿ ರಾಜ್ ಕೌಶಲ್ ಅವರನ್ನು ಕಳೆದುಕೊಂಡು ಇನ್ನೂ ಆಘಾತದಿಂದ ಚೇತರಿಸಿಕೊಂಡಿರದ ಚಿತ್ರನಟಿ, ಮಾಡೆಲ್ ಮತ್ತು ಕ್ರೀಡಾ ನಿರೂಪಕಿ ಮಂದಿರಾ ಬೇಡಿ ಅವರು ಬುಧವಾರ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತಂದೆ-ತಾಯಿಯೊಂದಿಗೆ ತನ್ನ ಮತ್ತು ತನ್ನಿಬ್ಬರು ಮಕ್ಕಳ ಫೋಟೋ ಹಾಕಿ ಫ್ಯಾಮಿಲಿ ಅಂತ ಶೀರ್ಷಿಕೆ ನೀಡಿರುವುದು ಅವರ ಈಗಿನ ಸ್ಥಿತಿಯಲ್ಲಿ ವಯಸ್ಸಾಗಿರುವ ಅಪ್ಪ-ಅಮ್ಮ ನೀಡುತ್ತಿರುವ ಬೆಂಬಲ, ನೈತಿಕ ಸ್ಥೈರ್ಯವನ್ನು ವಿವರಿಸುತ್ತದೆ. ಅವರ ತಂದೆ ವೆರಿಂದರ್ ಸಿಂಗ್ ಬೇಡಿ, ತಾಯಿ ಗೀತಾ ಬೇಡಿ, ಮಗಳು ತಾರಾ, ಮಗ ವೀರ್ ಮತ್ತು ಅವರೊಂದಿಗೆ ಮುಗಳ್ನಗುತ್ತಾ ನಿಂತಿರುವ ಖುದ್ದು ಮಂದಿರಾ- ಫೋಟೋ ಬಹಳ ಅಪ್ಯಾಯವೆನಿಸುತ್ತದೆ.

ಈ ಫೋಟೋ ಕೆಳಗೆ ಮಂದಿರಾ: ‘ಇಲ್ಲಿ ನನಗೆ ಸಿಗುತ್ತಿರೋದು ಪ್ರೀತಿ ಮಾತ್ರ. ನನಗೆ ಬೆಂಬಲ, ಪ್ರೀತಿ ಮತ್ತು ವಾತ್ಸಲ್ಯ ನೀಡುತ್ತಿರುವ ನನ್ನ ಕುಟುಂಬಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ,’ ಎಂದು ಬರೆದಿದ್ದಾರೆ. ಪತಿಯ ಆಕಸ್ಮಿಕ ಮರಣದ ನಂತರ ತಮ್ಮ ಹಿತೈಷಿಗಳು, ಆಪ್ತರು, ಸ್ನೇಹಿತರು ಅವರಿಗೂ ಕೃತಜ್ಞತೆಗಳನ್ನು ಆಕೆ ಸಲ್ಲಿಸಿದ್ದರು.

View this post on Instagram

A post shared by Mandira Bedi (@mandirabedi)

ಮಂದಿರಾ ಅವರ ಫ್ಯಾಮಿಲಿ ಫೋಟೋ ಮನಮಿಡಿಯುವಂತಿದೆ.

ಇದುವರೆಗೆ ತಮ್ಮ ಪತಿಯ ನೆನೆಪಿನಲ್ಲಿ ಅವರೊಂದಿಗಿನ ಫೋಟೋಗಳನ್ನು ಶೇರ್​ ಮಾಡುತ್ತಿದ್ದ ಮಂದಿರಾ ಮೊದಲಬಾರಿಗೆ ತಮ್ಮ ತಂದೆ-ತಾಯಿಯೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖವನ್ನು ಅವರು ರಾಜ್​ ಮತ್ತು ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

View this post on Instagram

A post shared by Mandira Bedi (@mandirabedi)

ರಾಜ್​ಗೆ ತಾವು ಹೇಳಿದ ವಿದಾಯದ ನೋಟ್​ನಲ್ಲಿ ಮಂದಿರಾ, ಕರಳು ಮಿಡಿಯುವಂಥ ವಾಕ್ಯಗಳನ್ನು ಬರೆದಿದ್ದರು.

‘25 ವರ್ಷಗಳಿಂದ ನಾವು ಪರಸ್ಪರ ಅರ್ಥಮಾಡಿಕೊಂಡಿದ್ದೆವು, ನಮ್ಮ ಮದುವೆಯಾಗಿ 23 ವರ್ಷ ಕಳೆದವು, ಬದುಕಿನ ಪ್ರತಿಯೊಂದು ಸೆಣಸು, ಏರಿಳಿತದೊಂದಿಗೆ ಏಗುತ್ತಾ ನಾವು ಸಾಗಿದೆವು,’ ಎಂದು ಅವರು ಬರೆದಿದ್ದರು.

View this post on Instagram

A post shared by Mandira Bedi (@mandirabedi)

49 ವರ್ಷ ವಯಸ್ಸಿನವರಾಗಿದ್ದ ರಾಜ್ ಕೌಶಲ್ ಜುಲೈ 1ರಂದು ತೀವ್ರ ಹೃದಯಕ್ಕೊಳಗಾಗಿ ನಿಧನ ಹೊಂದಿದರು. ಅವರ ಅಂತ್ಯಸಂಸ್ಕಾರದ ಎಲ್ಲ ವಿಧಿಗಳನ್ನೂ ಮಂದಿರಾ ಅವವರೇ ಪೂರೈಸಿದ್ದಕ್ಕೆ ಕೆಲವರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು. ಇವರಿಬ್ಬರು ಮದುವೆಯಾಗಿದ್ದು 1999ರಲ್ಲಿ. ಅವರ ಮಗ ವೀರ್ ಹುಟ್ಟಿದ್ದು 2011 ರಲ್ಲಿ. ಅವನಿಗೆ ಈಗಿನ್ನೂ ಕೇವಲ 10 ಪ್ರಾಯ. ಮಗಳು ತಾರಾಳನ್ನು ಅವರು ಕಳೆದ ವರ್ಷ ಜುಲೈನಲ್ಲಿ ದತ್ತು ಪಡೆದಿದ್ದರು. ಅವಳಿಗೆ ಈಗ 4 ವರ್ಷ ವಯಸ್ಸು.

ಇದನ್ನೂ ಓದಿ: ರಾಜ್​ ಕೌಶಲ್​ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!