AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ ಕೌಶಲ್​ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ

Raj Kaushal Funeral: ಪತಿ ರಾಜ್​ ಕೌಶಲ್​ ಅವರನ್ನು ಕಳೆದುಕೊಂಡ ನಟಿ ಮಂದಿರಾ ಬೇಡಿಗೆ ಇಡೀ ಬಾಲಿವುಡ್​ ಬಳಗ ಸಮಾಧಾನದ ಮಾತುಗಳನ್ನು ಹೇಳುತ್ತಿದೆ. ಮುಂಬೈನಲ್ಲಿ ರಾಜ್​ ಕೌಶಲ್​ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ರಾಜ್​ ಕೌಶಲ್​ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ
ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ
Follow us
TV9 Web
| Updated By: ಮದನ್​ ಕುಮಾರ್​

Updated on: Jul 01, 2021 | 9:50 AM

ಬಾಲಿವುಡ್​ನ ಖ್ಯಾತ ನಟಿ ಮಂದಿರಾ ಬೇಡಿ ಅವರ ಪತಿ ರಾಜ್​ ಕೌಶಲ್​ ಅವರು ಬುಧವಾರ (ಜೂ.30) ನಿಧನರಾದರು. ಕೇವಲ 49ನೇ ವಯಸ್ಸಿಗೆ ಅವರು ಹೃದಯಾಘಾತದಿಂದ ಅಸುನೀಗಿದ ಸುದ್ದಿ ಕೇಳಿ ಇಡೀ ಚಿತ್ರರಂಗಕ್ಕೆ ಆಘಾತ ಆಗಿದೆ. ಮುಂಬೈನಲ್ಲಿ ರಾಜ್​ ಕೌಶಲ್​ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ಸಂದರ್ಭದ ಫೋಟೋಗಳು ವೈರಲ್​ ಆಗಿವೆ. ಸಂಪ್ರದಾಯಕ್ಕೆ ಸೆಡ್ಡು ಹೊಡೆದ ಮಂದಿರಾ ಬೇಡಿ ಅವರು ಪತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಸಾಮಾನ್ಯವಾಗಿ ಮಹಿಳೆಯರು ಚಟ್ಟವನ್ನು ಹೊರುವುದಿಲ್ಲ. ಕೆಲವರ ಸಂಪ್ರದಾಯದ ಪ್ರಕಾರ ಸ್ತ್ರೀಯರು ಸ್ಮಶಾನಕ್ಕೂ ಬರುವಂತಿಲ್ಲ. ಈ ಎಲ್ಲ ಸಂಪ್ರದಾಯಗಳನ್ನು ಮಂದಿರಾ ಬೇಡಿ ಮುರಿಯುವ ಮೂಲಕ ದಿಟ್ಟತನ ಪ್ರದರ್ಶಿಸಿದ್ದಾರೆ. ಅಂತ್ಯ ಸಂಸ್ಕಾರದ ಸ್ಥಳಕ್ಕೆ ರಾಜ್​ ಕೌಶಲ್​ ಅವರ ಶವವನ್ನು ಸಾಗಿಸುವಾಗ ಮಂದಿರಾ ಕೂಡ ಪುರುಷರ ಜೊತೆ ಸೇರಿಕೊಂಡು ಪತಿಯ ಶವವನ್ನು ಹೊತ್ತು ಸಾಗಿದ್ದಾರೆ. ಅಲ್ಲದೆ, ತಾವೇ ನಿಂತು ಅಂತ್ಯಸಂಸ್ಕಾರ ಕೂಡ ನೆರವೇರಿಸಿದ್ದಾರೆ. ಅವರ ಈ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪತಿಯ ಅಗಲಿಕೆಯಿಂದ ತೀವ್ರ ದುಃಖ ಆವರಿಸಿದ್ದರೂ ಕೂಡ ಮಂದಿರಾ ಅವರು ಸ್ಟ್ರಾಂಗ್​ ಆಗಿದ್ದಂತೆ ಕಾಣಿಸಿದರು. ಅವರಿಗೆ ಇಡೀ ಬಾಲಿವುಡ್​ ಬಳಗ ಸಮಾಧಾನದ ಮಾತುಗಳನ್ನು ಹೇಳುತ್ತಿದೆ. ಅಕಾಲಿಕ ಮರಣಕ್ಕೆ ತುತ್ತಾದ ರಾಜ್​ ಕೌಶಲ್​ಗೆ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದ ರಾಜ್​ ಕೌಶಲ್​ ಜೊತೆ 1999ರಲ್ಲಿ ಮಂದಿರಾ ವಿವಾಹ ಆಗಿದ್ದರು. ಈ ದಂಪತಿಗೆ 2011ರಲ್ಲಿ ಗಂಡು ಮಗು ಜನಿಸಿತ್ತು. ಬಳಿಕ ಹೆಣ್ಣುಮಗುವೊಂದನ್ನು ದತ್ತು ಪಡೆದುಕೊಂಡಿದ್ದರು.

ನಿಧನರಾಗುವುದಕ್ಕೂ ಒಂದು ದಿನ ಮುಂಚೆ ನಟಿ ಮೌನಿ ರಾಯ್​ ಸೇರಿದಂತೆ ಚಿತ್ರರಂಗದ ಕೆಲವು ಸ್ನೇಹಿತರನ್ನು ರಾಜ್​ ಕೌಶಲ್​ ಭೇಟಿ ಮಾಡಿದ್ದರು. ನಿರ್ದೇಶಕ ಓನಿರ್​, ನಟಿಯರಾದ ನೇಹಾ ಧೂಪಿಯಾ, ಟಿಸ್ಕಾ ಚೋಪ್ರಾ, ನಟ ರೋಹಿತ್​ ಬೋಸ್​ ರಾಯ್​ ಸೇರಿದಂತೆ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ರಾಜ್​ ಕೌಶಲ್​ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಇದನ್ನೂ ಓದಿ:

ನಟಿ ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ನಿಧನ; 49 ವರ್ಷಕ್ಕೇ ಬದುಕು ಮುಗಿಸಿದ ಬಾಲಿವುಡ್ ಸಿನಿಮಾ ನಿರ್ಮಾಪಕ

Sanchari Vijay Final Rites : ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದ ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರ

ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!