AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ; ಈ ಫೋಟೋವನ್ನು ನೀವೂ ನೋಡಲೇಬೇಕು..!

ಒಫಿಯೋಫಾಗಸ್ ಹನ್ನಾ (Ophiophagus Hannah) ಎಂಬುದು ಕಾಳಿಂಗ ಸರ್ಪದ ವೈಜ್ಞಾನಿಕ ಹೆಸರು. Ophiophagus ಎಂಬ ಶಬ್ದ ಉತ್ಪತ್ತಿಯಾಗಿದ್ದು ಗ್ರೀಕ್​ನಿಂದ. ಹಾವು-ತಿನ್ನುವುದು ಎಂಬುದು ಈ ಪದದ ಅರ್ಥ.

Viral Photo: ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ; ಈ ಫೋಟೋವನ್ನು ನೀವೂ ನೋಡಲೇಬೇಕು..!
ಕಾಳಿಂಗ ಸರ್ಪ
TV9 Web
| Updated By: Lakshmi Hegde|

Updated on:Jul 21, 2021 | 3:56 PM

Share

ನಿಸರ್ಗವೆಂದರೆ ಅದು ಅಚ್ಚರಿ, ರಹಸ್ಯಗಳನ್ನೇ ತುಂಬಿಕೊಂಡಿರುವ ಒಂದು ಸುಂದರ ಅಂಶ. ಅದೆಷ್ಟೆಷ್ಟೋ ಹೊಸಹೊಸ ವಿಚಾರಗಳನ್ನು ಹೊರಸೂಸುತ್ತ ಇರುತ್ತದೆ. ಅದರಲ್ಲೂ ಈಗೀಗ ಈ ಇಂಟರ್​ನೆಟ್​, ಸಾಮಾಜಿಕ ಜಾಲತಾಣಗಳಿಂದಾಗಿ ಪ್ರಕೃತಿಯಲ್ಲಿ ನಡೆಯುವ ಅನೇಕಾನೇಕ ವಿಚಿತ್ರ, ಅಚ್ಚರಿಗಳು ಹಲವು ಜನರಿಗೆ ಸರಳವಾಗಿ ತಲುಪುತ್ತವೆ. ಅದರಲ್ಲೂ ಇತ್ತೀಚೆಗೆ ಕಾಳಿಂಗ ಸರ್ಪವೊಂದು (King Kobra)ಇನ್ನೊಂದು ಹಾವನ್ನು ತಿನ್ನುತ್ತಿರುವ ಅಪರೂಪದಲ್ಲಿ ಅಪರೂಪವೆಂಬಂಥ ಫೋಟೋವೊಂದು ಟ್ವಿಟರ್​ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಶಾಕ್​ ಆಗಿದ್ದಾರೆ.

ಸದಾ ಪ್ರಕೃತಿಗೆ ಸಂಬಂಧಪಟ್ಟ ಒಂದಿಲ್ಲೊಂದು ವಿಭಿನ್ನ ಪೋಸ್ಟ್​ಗಳನ್ನು ಶೇರ್ ಮಾಡುವ ಭಾರತೀಯ ಅರಣ್ಯ ಸಂರಕ್ಷಣಾಧಿಕಾರಿ (IFS) ಪರ್ವೀನ್​ ಕಸ್ವಾನ್​ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಕಾಳಿಂಗ ಸರ್ಪದ ತೀಕ್ಷ್ಣ ಕಣ್ಣು ಮತ್ತು ಅದರ ಬಾಯಲ್ಲಿರುವ ಇನ್ನೊಂದು ನಾಗರ ಹಾವು ನಿಜಕ್ಕೂ ಭಯಹುಟ್ಟಿಸುವಂತಿದೆ. ಅಂದಹಾಗೆ ಈ ಫೋಟೋ ತೆಗೆದವರೂ ಪರ್ವೀನ್​ ಕಸ್ವಾನ್​ ಅವರೇ.

King Kobra

ಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ

ಫೋಟೋದೊಂದಿಗೆ ಕಾಳಿಂಗ ಸರ್ಪದ ಬಗ್ಗೆ ತುಸು ಮಾಹಿತಿಯನ್ನೂ ಅವರು ಶೇರ್​ ಮಾಡಿಕೊಂಡಿದ್ದಾರೆ. ಒಫಿಯೋಫಾಗಸ್ ಹನ್ನಾ (Ophiophagus Hannah) ಎಂಬುದು ಕಾಳಿಂಗ ಸರ್ಪದ ವೈಜ್ಞಾನಿಕ ಹೆಸರು. Ophiophagus ಎಂಬ ಶಬ್ದ ಉತ್ಪತ್ತಿಯಾಗಿದ್ದು ಗ್ರೀಕ್​ನಿಂದ. ಹಾವು-ತಿನ್ನುವುದು ಎಂಬುದು ಈ ಪದದ ಅರ್ಥ. Hannah ಅಂದರೆ ಗ್ರೀಕ್​ ಪುರಾಣದಲ್ಲಿ ಮರಗಳಲ್ಲಿ ವಾಸಿಸುವ ಅಪ್ಸರೆಯರು. ಕಾಳಿಂಗ ಸರ್ಪಗಳಿಗೆ ಈ ಹೆಸರು ಅನ್ವರ್ಥದಂತಿದೆ ಎಂದು ಪರ್ವೀನ್​ ಕಸ್ವಾನ್​ ತಿಳಿಸಿದ್ದಾರೆ. ಹಾಗೇ, ಗೂಡು ಕಟ್ಟುವ ಏಕೈಕ ಹಾವೆಂದರೆ ಅದು ಕಾಳಿಂಗ ಸರ್ಪ. ಬೇರೆ ಹಾವುಗಳಿಗೆ ಹೋಲಿಸಿದರೆ ಕಿಂಗ್​ ಕೋಬ್ರಾ ತುಂಬ ತಿಂಡಿಪೋತ ಹಾವು ಎಂದೂ ಹೇಳಿದ್ದಾರೆ.

ಪರ್ವೀನ್ ಶೇರ್ ಮಾಡಿದ ಅದ್ಭುತ ಫೋಟೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅನೇಕರು ಅವರನ್ನು ಹೊಗಳಿದ್ದಾರೆ. ಇನ್ನೂ ಅನೇಕರು ತಾವು ಅಕ್ಷರಶಃ ಶಾಕ್​ ಆಗಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಲಾಸ್ಟಿಕ್​ ಬಾಟಲ್, ಒಡೆದ ಕೋಳಿ ಮೊಟ್ಟೆಯಲ್ಲಿ ಅರಳಿದ ಹಸಿರು; ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ

Published On - 3:53 pm, Wed, 21 July 21

ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು