AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಚಲಿಸುವ ಕಲ್ಯಾಣ ಮಂಟಪ; ಬಂತೈ ಬಂತೈ ಮನೆಗೇ ಬಂತೈ, ವಧುವರರು ತಯಾರೇ?

Marriage Hall On Wheels : ಈ ಮೊಬೈಲ್​ ಕಲ್ಯಾಣ ಮಂಟಪವು 200 ಜನರಿಗೆ ಮೀಸಲಾಗಿದೆ. 40/30 ಚದರ ಅಡಿಗಳನ್ನು ಹೊಂದಿರುವ ಇದು ಆಧುನಿಕ ಒಳಾಂಗಣ ವಿನ್ಯಾಸವನ್ನೂ ಹೊಂದಿದೆ. ಎಸಿ, ಲೈಟ್​, ಫರ್ನಿಚರ್ಸ್, ಡೈನಿಂಗ್​ ವ್ಯವಸ್ಥೆ ಎಲ್ಲವೂ ಇಲ್ಲಿದೆ.

Viral Video : ಚಲಿಸುವ ಕಲ್ಯಾಣ ಮಂಟಪ; ಬಂತೈ ಬಂತೈ ಮನೆಗೇ ಬಂತೈ, ವಧುವರರು ತಯಾರೇ?
ಚಲಿಸುವ ಕಲ್ಯಾಣ ಮಂಟಪ
TV9 Web
| Edited By: ಶ್ರೀದೇವಿ ಕಳಸದ|

Updated on:Sep 26, 2022 | 4:14 PM

Share

Viral Video : ‘ಮದುವೆ ಮಾಡಿನೋಡು ಮನೆ ಕಟ್ಟಿ ನೋಡು‘ ಈ ಹಳೆಯ ಗಾದೆ ಈಗಲೂ ಹಸಿಹಸಿಯಾಗಿಯೇ ಇದೆ. ಏಕೆಂದರೆ ಈ ಎರಡೂ ಸಂಗತಿಗಳು ನೀರಿಳಿಸಿಬಿಡುತ್ತವೆ. ಮದುವೆಯನ್ನು ಸರಳಗೊಳಿಸಬೇಕು ಎಂದು ಎಷ್ಟೆಲ್ಲ ನವನವೀನ ಪರಿಕಲ್ಪನೆಗಳನ್ನು ರೂಪಿಸಿದರೂ ಮನೆಮಂದಿಯೆಲ್ಲಾ ಹೈರಾಣುಗೊಳ್ಳುವುದು ಇನ್ನೂ ನಿಂತಿಲ್ಲ. ಆದರೂ ಈ ಸಂಗತಿಗಳನ್ನು ಹಗೂರಗೊಳಿಸಲು ಸಾಕಷ್ಟು ಅನ್ವೇಷಣೆಗಳು ಚಾಲ್ತಿಯಲ್ಲಿ ಇದ್ದೇ ಇರುತ್ತವೆ. ಇದೀಗ ಮದುವೆಗೆ ಸಂಬಂಧಿಸಿ ಒಂದು ಹೊಸ ಪರಿಕಲ್ಪನೆಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ವಾಹ್​​ ಎಂದಿದ್ದಾರೆ. ಈ ವಿಡಿಯೋ ನೋಡಿ ಕಲ್ಯಾಣ ಮಂಟಪವೇ ನೀವಿದ್ದಲ್ಲಿ ಬರುತ್ತದೆ! ಟ್ವಿಟರ್​ ನಲ್ಲಿ ಅವರು ಪೋಸ್ಟ್ ಮಾಡುತ್ತಿದ್ದಂತೆ ವೈರಲ್ ಆಗುತ್ತಿದೆ.

ಮೊಬೈಲ್​ ವಾಶ್​ರೂಮ್, ಮೊಬೈಲ್​ ಕ್ಲಿನಿಕ್, ಮೊಬೈಲ್​ ಸ್ಟೋರ್ಸ್​ ಹೀಗೆ ಇದ್ದಲ್ಲಿಗೇ ಎಲ್ಲವೂ ಚಲಿಸುವಂಥ ಕಾಲದಲ್ಲಿ ಹೊಸದಾದ ಸೇರ್ಪಡೆ ಈ ಮೊಬೈಲ್​ ಮ್ಯಾರೇಜ್ ಹಾಲ್​.  ‘ಈ ಪರಿಕಲ್ಪನೆಯನ್ನು ವಿನ್ಯಾಸ ಮಾಡಿದ ವ್ಯಕ್ತಿಯನ್ನು ಭೇಟಿಮಾಡಲು ನಾನು ಇಚ್ಛಿಸುತ್ತೇನೆ. ಸೃಜನಶೀಲತೆ ಮತ್ತು ವಿಚಾರಪೂರ್ಣತೆಯಿಂದ ಇದು ಕೂಡಿದೆ. ದೂರದ ಪ್ರದೇಶಗಳಿಗೆ ಅನುಕೂಲಕಾರಿಯಾಗಿದೆ ಮತ್ತು ಪರಿಸರಸ್ನೇಹಿಯೂ ಆಗಿದೆ. ಜನಸಂಖ್ಯೆ ಹೆಚ್ಚಿರುವಂಥ ದೇಶಗಳಲ್ಲಿ ಈ ಮಾದರಿ ಅನುಕೂಲ’ ಎಂಬ ನೋಟ್​ನೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ ಆನಂದ.

ಈ ಮೊಬೈಲ್​ ಕಲ್ಯಾಣ ಮಂಟಪವು 200 ಜನರಿಗೆ ಮೀಸಲಾಗಿದೆ. 40/30 ಚದರ ಅಡಿಗಳನ್ನು ಹೊಂದಿರುವ ಇದು ಆಧುನಿಕ ಒಳಾಂಗಣ ವಿನ್ಯಾಸವನ್ನೂ ಹೊಂದಿದೆ. ಎಸಿ, ಲೈಟ್​, ಫರ್ನಿಚರ್ಸ್, ಡೈನಿಂಗ್​ ವ್ಯವಸ್ಥೆ ಎಲ್ಲವೂ ಇಲ್ಲಿದೆ. ಹಾಗಾಗಿ ನೆಟ್ಟಗರು ಈ ಪರಿಕಲ್ಪನೆಯನ್ನು ಬಹುವಾಗಿ ಮೆಚ್ಚಿದ್ದಾರೆ.

ನಮ್ಮ ಸುತ್ತಮುತ್ತಲೂ ಇಂಥ ಅನೇಕ ಅಪರೂಪದ ಸಂಗತಿ, ವಿಚಾರ, ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ನಮಗೆ ಅವುಗಳ ಕಡೆಗೆ ಗಮನ ಕಡಿಮೆಯೇ. ಆದರೆ ಒಮ್ಮೆ ಅಂತರ್ಜಾಲದಲ್ಲಿ ಇಂಥ ಆವಿಷ್ಕಾರಗಳ ಪ್ರದರ್ಶನವಾಯಿತೋ ಆಗಲೇ ನಾವೂ ವಾಹ್​, ಕ್ಯಾ ಬಾತ್​ ಹೈ ಎನ್ನುತ್ತೇವೆ. ಏಕೆಂದರೆ ನಾವು ಮಲಗಿದಾಗ ಬಿಟ್ಟು ಉಳಿದೆಲ್ಲ ಸಮಯದಲ್ಲಿಯೂ ಮೊಬೈಲ್​ನಲ್ಲಿಯೇ ಕಣ್ಣು ನೆಟ್ಟಿರುತ್ತೇವಲ್ಲ!

ಈ ವಿಷಯ ಬಿಡಿ, ನಿಮ್ಮ ಮನೆಯ ಮದುವೆಗಳಿಗೂ ಈ ಐಡಿಯಾ ಚೆನ್ನಾಗಿದೆಯಲ್ಲವಾ? ಈಗಲೇ ಬುಕ್ ಮಾಡಿ ಮತ್ತೆ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:12 pm, Mon, 26 September 22

Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ