AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೋಲ್ಪುರ: ರೈಲ್ವೇ ಟಿಕೆಟ್ ಕೌಂಟರ್​ನಲ್ಲಿ ಕಾರ್ಯ ನಿರ್ವಹಿಸಿದ ಮಿಸ್ಟರ್ ಮಾರುತಿ

Bangla: ಎಷ್ಟು ದಿನ ಅಂತ ಮರದಿಂದ ಮರಕ್ಕೆ ಜಿಗಿಯುವುದು, ನೇತಾಡುವುದು, ಸಿಕ್ಕ ಕಾಯಿಗಳನ್ನು ಹರಿದು ತಿನ್ನುವುದು. ದೇವಸ್ಥಾನಕ್ಕೆ ಬಂದ ಭಕ್ತರ ಚೀಲದಿಂದ ಹಣ್ಣುಕಾಯಿ ಕದಿಯುವುದು. ಮನುಷ್ಯರು ಆಟವಾಡಿಸಿದಂತೆ ಆಡುವುದು. ಮಕ್ಕಳಂತೆ ಮುದ್ದು ಮಾಡಿಸಿಕೊಂಡು ಇರುವುದು. ನಮಗೂ ಕಚೇರಿಗೆ ಹೋಗಿ ಕೆಲಸ ಮಾಡಬೇಕು ಎನ್ನಿಸುತ್ತದೆ ಎನ್ನುತ್ತಿದ್ದಾರೆ ಮಿಸ್ಟರ್ ಮಾರುತಿ.

Viral Video: ಬೋಲ್ಪುರ: ರೈಲ್ವೇ ಟಿಕೆಟ್ ಕೌಂಟರ್​ನಲ್ಲಿ ಕಾರ್ಯ ನಿರ್ವಹಿಸಿದ ಮಿಸ್ಟರ್ ಮಾರುತಿ
ಬಾಂಗ್ಲಾದ ಬೋಲ್ಪುರ ರೈಲ್ವೆ ಟಿಕೆಟ್​ ಕೌಂಟರಿನಲ್ಲಿ ಕಾರ್ಯನಿರತ ಮಿಸ್ಟರ್​ ಮಾರುತಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Sep 21, 2023 | 3:11 PM

Share

Bolpur: ಹನುಮಂತನಿಗೆ ಗುಡಿ ಕಟ್ಟಿ ಪೂಜೆ ಮಾಡುತ್ತಾರೆ. ಕೋತಿಗೆ (Monkey) ಆಟವಾಡಿಸಿ ಹೊಟ್ಟೆ ಹೊರೆಯುತ್ತಾರೆ. ಕೋತಿಯನ್ನು ಸಾಕಿ ಮನೆಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಬೋಲ್ಪುರ ರೈಲ್ವೇ ನಿಲ್ದಾಣದ ಟಿಕೆಟ್​ ಕೌಂಟರಿನಲ್ಲಿ ಈ ಮಾರುತಿಗೆ ಉದ್ಯೋಗ ಕೊಟ್ಟವರು ಯಾರು? ಕೌಂಟರಿನ ಹೊರಗೆ ನೂರಾರು ಜನರು ಸರದಿಯಲ್ಲಿ ನಿಂತಿದ್ದಾರೆ. ಇನ್ನು ಯಾವಾಗ ಟಿಕೆಟ್​ ಸಿಗುತ್ತದೆಯೋ ಎಂದು ಚಡಪಡಿಸುತ್ತಿದ್ದಾರೆ. ಆದರೆ, ಕೌಂಟರಿನೊಳಗಿನ ಮಾರುತಿ ಮಾತ್ರ ಯಾವುದೋ ಪುಸ್ತಕವನ್ನು ನೋಡುತ್ತ, ಕೀಬೋರ್ಡ್​ನಲ್ಲಿ ಟೈಪ್ ಮಾಡುತ್ತ ಕೆಲಸದಲ್ಲಿ ಮುಳುಗಿದ್ದಾನೆ. ರೈಲ್ವೇ ಇಲಾಖೆಯು ಇಂಥ ನಿಷ್ಠಾವಂತ ಉದ್ಯೋಗಿಯನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲವೇನೋ.

ಇದನ್ನೂ ಓದಿ : Viral Video : ಜವಾನ್ ಜಮಾನಾ; ಬ್ರೂಕ್ಲಿನ್​ ಸೇತುವೆಯ ಮೇಲೆ ಚಲೇಯಾ ಡ್ಯಾನ್ಸ್​; ಕೃತಜ್ಞತೆ ಸಲ್ಲಿಸಿದ ಶಾರುಖ್​

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಂಗಗಳ ಈ ಆಟಗಳನ್ನು ನೋಡದವರು ಯಾರಿದ್ದಾರೆ? ಆದರೆ ಮನುಷ್ಯರಂತೆ ಕೆಲಸದಲ್ಲಿ ತೊಡಗಿಕೊಂಡರೆ ಗಾಬರಿ ಉಂಟಾಗುವುದಲ್ಲವೆ? ಅದರಲ್ಲಿಯೂ ಕಚೇರಿಯಲ್ಲಿ ಕುಳಿತು ಹೀಗೆ ಗಂಭೀರವಾಗಿ ಕುಳಿತು ಕಂಪ್ಯೂಟರ್​ ಬಳಸತೊಡಗಿದರೆ? ಆತಂಕ ಸಹಜವಾಗಿಯೇ ಉಂಟಾಗುತ್ತದೆ.

ಟಿಕೆಟ್ ಕೌಂಟರಿನ ಹೊರಗೆ ನಿಂತವರು ಟಿಕೆಟ್​ಗಾಗಿಯಷ್ಟೇ ನಿಲ್ಲದೇ, ಕೌಂಟರಿನೊಳಗಿನ ಕೌತುಕವನ್ನು ನೋಡಲು ಸಾಲುಗಟ್ಟಿದ್ದರು. ತಮ್ಮ ಮೊಬೈಲ್​ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದರು. ಕೆಲ ಮೂಲಗಳ ಪ್ರಕಾರ ಮಿಸ್ಟರ್ ಮಾರುತಿಯವರು ಅರ್ಧಗಂಟೆಗೂ ಹೆಚ್ಚು ಸಮಯ ಹೀಗೆ ಕಚೇರಿ ಕೆಲಸದಲ್ಲಿ ಮುಳುಗಿದ್ದರು. ಕೊನೆಗೆ ಅವರಿಗೆ ಪ್ರಿಯವಾದ ಬಿಸ್ಕೆಟ್​, ಬಾಳೆಹಣ್ಣು ತೋರಿಸಿ ಅವರನ್ನು ಹೊರಕರೆತರಲಾಯಿತು.

ಇದನ್ನೂ ಓದಿ : Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?

ಅಂತೂ ಗಿಡದಿಂದ ಗಿಡಕ್ಕೆ ನೆಗೆಯುವುದನ್ನು, ಗಿಡದಲ್ಲಿರುವ ಕಾಯಿಗಳನ್ನು ಕೀಳುವುದನ್ನು ಬಿಟ್ಟು ನಾಗರಿಕನಾಗಲು ಈ ಮಾರುತಿ ತಯಾರಿ ನಡೆಸಿರುವ ಹಾಗಿದೆ. ಈ ಘಟನೆಯ ಕುರಿತು ಟಿವಿ9 ಬಾಂಗ್ಲಾ ರೈಲ್ವೇ ಅಧಿಕಾರಿಗಳಿಗೆ ಸಂಪರ್ಕಿಸಿದಾಗ, ಅವರು ನಕ್ಕು ಸುಮ್ಮನಾದರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!