Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೋಲ್ಪುರ: ರೈಲ್ವೇ ಟಿಕೆಟ್ ಕೌಂಟರ್​ನಲ್ಲಿ ಕಾರ್ಯ ನಿರ್ವಹಿಸಿದ ಮಿಸ್ಟರ್ ಮಾರುತಿ

Bangla: ಎಷ್ಟು ದಿನ ಅಂತ ಮರದಿಂದ ಮರಕ್ಕೆ ಜಿಗಿಯುವುದು, ನೇತಾಡುವುದು, ಸಿಕ್ಕ ಕಾಯಿಗಳನ್ನು ಹರಿದು ತಿನ್ನುವುದು. ದೇವಸ್ಥಾನಕ್ಕೆ ಬಂದ ಭಕ್ತರ ಚೀಲದಿಂದ ಹಣ್ಣುಕಾಯಿ ಕದಿಯುವುದು. ಮನುಷ್ಯರು ಆಟವಾಡಿಸಿದಂತೆ ಆಡುವುದು. ಮಕ್ಕಳಂತೆ ಮುದ್ದು ಮಾಡಿಸಿಕೊಂಡು ಇರುವುದು. ನಮಗೂ ಕಚೇರಿಗೆ ಹೋಗಿ ಕೆಲಸ ಮಾಡಬೇಕು ಎನ್ನಿಸುತ್ತದೆ ಎನ್ನುತ್ತಿದ್ದಾರೆ ಮಿಸ್ಟರ್ ಮಾರುತಿ.

Viral Video: ಬೋಲ್ಪುರ: ರೈಲ್ವೇ ಟಿಕೆಟ್ ಕೌಂಟರ್​ನಲ್ಲಿ ಕಾರ್ಯ ನಿರ್ವಹಿಸಿದ ಮಿಸ್ಟರ್ ಮಾರುತಿ
ಬಾಂಗ್ಲಾದ ಬೋಲ್ಪುರ ರೈಲ್ವೆ ಟಿಕೆಟ್​ ಕೌಂಟರಿನಲ್ಲಿ ಕಾರ್ಯನಿರತ ಮಿಸ್ಟರ್​ ಮಾರುತಿ
Follow us
ಶ್ರೀದೇವಿ ಕಳಸದ
|

Updated on: Sep 21, 2023 | 3:11 PM

Bolpur: ಹನುಮಂತನಿಗೆ ಗುಡಿ ಕಟ್ಟಿ ಪೂಜೆ ಮಾಡುತ್ತಾರೆ. ಕೋತಿಗೆ (Monkey) ಆಟವಾಡಿಸಿ ಹೊಟ್ಟೆ ಹೊರೆಯುತ್ತಾರೆ. ಕೋತಿಯನ್ನು ಸಾಕಿ ಮನೆಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಬೋಲ್ಪುರ ರೈಲ್ವೇ ನಿಲ್ದಾಣದ ಟಿಕೆಟ್​ ಕೌಂಟರಿನಲ್ಲಿ ಈ ಮಾರುತಿಗೆ ಉದ್ಯೋಗ ಕೊಟ್ಟವರು ಯಾರು? ಕೌಂಟರಿನ ಹೊರಗೆ ನೂರಾರು ಜನರು ಸರದಿಯಲ್ಲಿ ನಿಂತಿದ್ದಾರೆ. ಇನ್ನು ಯಾವಾಗ ಟಿಕೆಟ್​ ಸಿಗುತ್ತದೆಯೋ ಎಂದು ಚಡಪಡಿಸುತ್ತಿದ್ದಾರೆ. ಆದರೆ, ಕೌಂಟರಿನೊಳಗಿನ ಮಾರುತಿ ಮಾತ್ರ ಯಾವುದೋ ಪುಸ್ತಕವನ್ನು ನೋಡುತ್ತ, ಕೀಬೋರ್ಡ್​ನಲ್ಲಿ ಟೈಪ್ ಮಾಡುತ್ತ ಕೆಲಸದಲ್ಲಿ ಮುಳುಗಿದ್ದಾನೆ. ರೈಲ್ವೇ ಇಲಾಖೆಯು ಇಂಥ ನಿಷ್ಠಾವಂತ ಉದ್ಯೋಗಿಯನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲವೇನೋ.

ಇದನ್ನೂ ಓದಿ : Viral Video : ಜವಾನ್ ಜಮಾನಾ; ಬ್ರೂಕ್ಲಿನ್​ ಸೇತುವೆಯ ಮೇಲೆ ಚಲೇಯಾ ಡ್ಯಾನ್ಸ್​; ಕೃತಜ್ಞತೆ ಸಲ್ಲಿಸಿದ ಶಾರುಖ್​

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಂಗಗಳ ಈ ಆಟಗಳನ್ನು ನೋಡದವರು ಯಾರಿದ್ದಾರೆ? ಆದರೆ ಮನುಷ್ಯರಂತೆ ಕೆಲಸದಲ್ಲಿ ತೊಡಗಿಕೊಂಡರೆ ಗಾಬರಿ ಉಂಟಾಗುವುದಲ್ಲವೆ? ಅದರಲ್ಲಿಯೂ ಕಚೇರಿಯಲ್ಲಿ ಕುಳಿತು ಹೀಗೆ ಗಂಭೀರವಾಗಿ ಕುಳಿತು ಕಂಪ್ಯೂಟರ್​ ಬಳಸತೊಡಗಿದರೆ? ಆತಂಕ ಸಹಜವಾಗಿಯೇ ಉಂಟಾಗುತ್ತದೆ.

ಟಿಕೆಟ್ ಕೌಂಟರಿನ ಹೊರಗೆ ನಿಂತವರು ಟಿಕೆಟ್​ಗಾಗಿಯಷ್ಟೇ ನಿಲ್ಲದೇ, ಕೌಂಟರಿನೊಳಗಿನ ಕೌತುಕವನ್ನು ನೋಡಲು ಸಾಲುಗಟ್ಟಿದ್ದರು. ತಮ್ಮ ಮೊಬೈಲ್​ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದರು. ಕೆಲ ಮೂಲಗಳ ಪ್ರಕಾರ ಮಿಸ್ಟರ್ ಮಾರುತಿಯವರು ಅರ್ಧಗಂಟೆಗೂ ಹೆಚ್ಚು ಸಮಯ ಹೀಗೆ ಕಚೇರಿ ಕೆಲಸದಲ್ಲಿ ಮುಳುಗಿದ್ದರು. ಕೊನೆಗೆ ಅವರಿಗೆ ಪ್ರಿಯವಾದ ಬಿಸ್ಕೆಟ್​, ಬಾಳೆಹಣ್ಣು ತೋರಿಸಿ ಅವರನ್ನು ಹೊರಕರೆತರಲಾಯಿತು.

ಇದನ್ನೂ ಓದಿ : Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?

ಅಂತೂ ಗಿಡದಿಂದ ಗಿಡಕ್ಕೆ ನೆಗೆಯುವುದನ್ನು, ಗಿಡದಲ್ಲಿರುವ ಕಾಯಿಗಳನ್ನು ಕೀಳುವುದನ್ನು ಬಿಟ್ಟು ನಾಗರಿಕನಾಗಲು ಈ ಮಾರುತಿ ತಯಾರಿ ನಡೆಸಿರುವ ಹಾಗಿದೆ. ಈ ಘಟನೆಯ ಕುರಿತು ಟಿವಿ9 ಬಾಂಗ್ಲಾ ರೈಲ್ವೇ ಅಧಿಕಾರಿಗಳಿಗೆ ಸಂಪರ್ಕಿಸಿದಾಗ, ಅವರು ನಕ್ಕು ಸುಮ್ಮನಾದರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!