Viral Video: ಬೇಸಿಗೆಗೆ ತಂಪು ನೀಡುವ ಐಸ್​ ಗೋಲಗಪ್ಪಾ ನೋಡಿ ಮೂಗು ಮುರಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಈ ಐಸ್​ ಗೋಲಗಪ್ಪಾದ ವಿಡಿಯೋವೊಂದು ಸಖತ್​ ಸದ್ದು ಮಾಡುತ್ತಿದೆ. ಆದರೆ ಹಲವು ಹೊಸ ರುಚಿಯನ್ನು ನೋಡಿ ಮೂಗು ಮುರಿದಿದ್ದಾರೆ.

Viral Video: ಬೇಸಿಗೆಗೆ ತಂಪು ನೀಡುವ ಐಸ್​ ಗೋಲಗಪ್ಪಾ ನೋಡಿ ಮೂಗು ಮುರಿದ ನೆಟ್ಟಿಗರು
ಐಸ್​ ಗೋಲಗಪ್ಪಾ
Follow us
| Updated By: Pavitra Bhat Jigalemane

Updated on: Mar 12, 2022 | 3:11 PM

ಬೇಸಿಗೆಯ ಬಿಸಿಲಿಗೆ ತಂಪನೆಯ ಅನುಭವವಾಗಲು ಕೋಲ್ಡ್​ ಜ್ಯೂಸ್​, ಐಸ್​​ಕ್ರೀಮ್​ ಎಳೆನೀರಿನಂತಹ ಆಹಾರಗಳ ಮೊರೆಹೋಗುತ್ತೇವೆ. ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಸೆಕೆ ಜಾಸ್ತಿಯಾಗುತ್ತದೆ. ಹೀಗಾಗಿ ತಂಪನೆಯ ಆಹಾರಗಳೆಡೆ ಗಮನ ಹೋಗುತ್ತದೆ. ಇಲ್ಲೊಂದು ವಿಭಿನ್ನ ಆಹಾರ ಬೇಸಿಗೆಯ ಬಿಸಲಿಗೆ ತಂಪು ನೀಡುವಂತಿದೆ. ಆದರೂ ಅದನ್ನು ನೋಡಿ ನೆಟ್ಟಿಗರು ಮೂಗು ಮುರಿದಿದ್ದಾರೆ.  ಅದೇನು ಅಂತೀರಾ ಅದುವೇ ಐಸ್​ ಗೋಲಗಪ್ಪಾ (Ice Gol Gappa) . ಸಾಮಾಜಿಕ ಜಾಲತಾಣದಲ್ಲಿ ಈ ಐಸ್​ ಗೋಲಗಪ್ಪಾದ ವಿಡಿಯೋವೊಂದು ಸಖತ್​ ಸದ್ದು ಮಾಡುತ್ತಿದೆ.

ಇನ್ಸ್ಟಾಗ್ರಾಮ್​ನಲ್ಲಿ ಫುಡ್​ ಬ್ಲಾಗರ್​ ಒಬ್ಬರು ಈ ಐಸ್​ ಗೋಲಗಪ್ಪಾದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲು ಐಸ್​ ಕ್ಯೂಬ್​ ಅನ್ನು ತುರಿದು ನಂತರ ಅದನ್ನು ಪೂರಿ ಒಳಗೆ ತುಂಬಿಸಲಾಗುತ್ತದೆ. ನಂತರ ಅದಕ್ಕೆ ಸಾಸ್​ ಹಾಕಿ ನೀಡಲಾಗುತ್ತದೆ.  ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಇಂಡಿಯಾ ಆಫೀಷಿಯಲ್​ ಖಾತೆ ಹಂಚಿಕೊಂಡಿದೆ. ಸದ್ಯ ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್​ ಮಾಡಿದ್ದಾರೆ. ಐಸ್ ಗೊಲಗಪ್ಪಾ ನೋಡಿ ಹಲವರು ಮೂಗು ಮುರಿದಿದ್ದಾರೆ.

ಸದ್ಯ ವೈರಲ್​ ಆದ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀವ್ಸ್​​ ಗಳಿಸಿದ್ದು, 5 ಸಾವಿರಕ್ಕೂ ಅಧಿಕ ಲೈಕ್ಸ್​ ಗಳಿಸಿದೆ. ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎನ್ನುವುದನ್ನು ಹೇಳಲಾಗಿಲ್ಲ. ಐಸ್​ ಗೋಲಗಪ್ಪಾ ಎಂದು ಕ್ಯಾಪ್ಷನ್​ ನೀಡಲಾಗಿದೆ.

ಇದನ್ನೂ ಓದಿ:

ಪಾರ್ಶ್ವವಾಯು ಬಳಿಕ ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು: ವಿಚಿತ್ರ ಕಾಯಿಲೆಗೆ ತುತ್ತಾದ ವ್ಯಕ್ತಿ

ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಗ್ರೆನೇಡ್ ಎಸೆದು ಬೆದರಿಕೆ
ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಗ್ರೆನೇಡ್ ಎಸೆದು ಬೆದರಿಕೆ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ