AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಶ್ವವಾಯು ಬಳಿಕ ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು: ವಿಚಿತ್ರ ಕಾಯಿಲೆಗೆ ತುತ್ತಾದ ವ್ಯಕ್ತಿ

ವ್ಯಕ್ತಿಯೊಬ್ಬನ ನಾಲಿಗೆಯ ಮೇಲೆ ಕಪ್ಪು ಕೂದಲು ಬೆಳೆದಿದೆ. ವೈದ್ಯರನ್ನು ಇದನ್ನು ನೋಡಿ ವ್ಯಕ್ತಿ ಲಿಂಗುವ ವಿಲೋಸಾ ನಿಗ್ರಾ ಅಥವಾ ಕಪ್ಪು ಕೂದಲುಳ್ಳ ನಾಲಿಗೆ ಎನ್ನುವ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ಹೇಳಿದ್ದಾರೆ.

ಪಾರ್ಶ್ವವಾಯು ಬಳಿಕ ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು: ವಿಚಿತ್ರ ಕಾಯಿಲೆಗೆ ತುತ್ತಾದ ವ್ಯಕ್ತಿ
ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು
TV9 Web
| Edited By: |

Updated on:Mar 12, 2022 | 11:49 AM

Share

ಕೆಲವೊಮ್ಮೆ ದೇಹದಲ್ಲಿನ ಅಸಹಜ ಬೆಳವಣಿಗೆಗಳು ವಿಕಾರವಾಗಿ ಕಾಣುವಂತೆ ಮಾಡುತ್ತದೆ. ಮಾರಕ ಕಾಯಿಲೆಗೆ ತುತ್ತಾದ ಮೇಲೆ ಅದರಿಂದಾಗುವ ಪರಿಣಾಮಗಳು ಭಯಾನಕವಾಗಿರುತ್ತದೆ. ಅಂತಹದ್ದೆ ಒಂದು ಘಟನೆಯ ಕುರಿತು ವರದಿಯಾಗಿದೆ. ವ್ಯಕ್ತಿಯೊಬ್ಬನ ನಾಲಿಗೆಯ ಮೇಲೆ ಕಪ್ಪು ಕೂದಲು ಬೆಳೆದಿದೆ. ವೈದ್ಯರನ್ನು ಇದನ್ನು ನೋಡಿ ವ್ಯಕ್ತಿ ಲಿಂಗುವ ವಿಲೋಸಾ ನಿಗ್ರಾ ಅಥವಾ ಕಪ್ಪು ಕೂದಲುಳ್ಳ ನಾಲಿಗೆ ಎನ್ನುವ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ಹೇಳಿದ್ದಾರೆ.  50 ವರ್ಷದ ವ್ಯಕ್ತಿಯಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಈ ಕುರಿತು ಟೈಮ್ಸ್​ ನೌ ವರದಿ ಮಾಡಿದೆ.

ಈ ಸಮಸ್ಯೆ ಕಾಣಿಸಿಕೊಳ್ಳುವ ಕೆಲವು ತಿಂಗಳ ಹಿಂದೆ ವ್ಯಕ್ತಿ ದೇಹದ ಎಡಭಾಗದಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅದಾದ ಬಳಿಕ 2 ತಿಂಗಳ ನಂತರ ನಾಲಿಗೆಯ ಮೇಲೆ ಕಪ್ಪು ಬಣ್ಣ ಕಾಣಿಸಿಕೊಳ್ಳಲು ಆರಂಭವಾಗಿತ್ತು. ನಂತರ ಚಿಕ್ಕ ಕೂದಲು ಬೆಳೆಯಲು ಆರಂಭವಾಗಿತ್ತು. ಇದನ್ನು ಗಮನಿಸಿದ ವ್ಯಕ್ತಿ  ಚರ್ಮರೋಗ ವೈದ್ಯರನ್ನು ಸಂಪರ್ಕಿಸಿದಾಗ ಕಪ್ಪು ಕೂದಲುಳ್ಳ ನಾಲಿಗೆ ಸಮಸ್ಯೆಗೆ ತುತ್ತಾಗಿರುವುದು ಪತ್ತೆಯಾಗಿದೆ.

ಮಾರ್ಚ್ 9 ರಂದು JAMA ಡರ್ಮಟಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಪ್ರಕರಣದ ವರದಿಯ ಪ್ರಕಾರ ದಪ್ಪ, ಕಪ್ಪು ಲೇಪನವು ಮಧ್ಯದ ಗೆರೆ ಮತ್ತು ನಾಲಿಗೆಯ ಹಿಂಭಾಗದ ಬಳಿ ಹಳದಿ ಗೆರೆಗಳಿಂದ ಕೂಡಿದೆ. ಆಹಾರದ ಕೆಲವು ಅಂಶಗಳು ಕೂದಲಿನ ಮಧ್ಯದಲ್ಲಿ ಸಿಲುಕಿಕೊಂಡು ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದನು ಎನ್ನಲಾಗಿದ್ದು ವೈದ್ಯರು ಅದನ್ನು ಸ್ವಚ್ಛಗೊಳಿಸಿ  ಚಿಕಿತ್ಸೆ ನೀಡಿದ್ದಾರೆ. ನಾಲಿಗೆಯ ಹೊರ ಅಂಚುಗಳು, ತುದಿಯಲ್ಲಿ 1 ಮಿಲಿ ಮಿಟರ್​ನಷ್ಟು ಉದ್ದದ ಕೂದಲು ಬೆಳೆದಿದೆ. ಸರಿಯಾಗಿ ಬ್ರಷ್​ ಮಾಡಿ, ಸ್ವಚ್ಛಗೊಳಿಸಿಕೊಳ್ಳದಿದ್ದರೆ ಕೂದಲು ಹೆಚ್ಚು ಉದ್ದವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ವೈದ್ಯರ ಹೇಳಿಕೆ ಉಲ್ಲೇಖಿಸಿ ಎಂದು ವರದಿ ತಿಳಿಸಿದೆ. ಸದ್ಯ ವ್ಯಕ್ತಿಯ ನಾಲಿಗೆಯ ಮೇಲೆ ಕೂದಲು ಬೆಳೆದ ವಿಚಾರ ಜಗತ್ತಿನೆಲ್ಲಡೆ ವೈರಲ್​ ಆಗಿದೆ.

 ಇದನ್ನೂ ಓದಿ:

Viral Story: ಇಂಜಿನಿಯರಿಂಗ್​ ಓದಿ ಕಂಪನಿ ಉದ್ಯೋಗ ಬಿಟ್ಟು ಬಿರಿಯಾನಿ​ ಅಂಗಡಿ ತೆರೆದ​ ಯುವಕರು

Published On - 11:47 am, Sat, 12 March 22

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!