ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಪಿಂಕ್​ ಟೀ: ವಿಡಿಯೋ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಈ ಪಿಂಕ್​ ಟೀ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಉತ್ತರ ಭಾರತದಲ್ಲಿ ಇದನ್ನು ನೂನ್​ ಛಾಯ್​ ಎಂದೇ ಕರೆಯುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಪಿಂಕ್​ ಟೀ: ವಿಡಿಯೋ ನೋಡಿ
ಪಿಂಕ್​ ಟೀ
Follow us
| Updated By: Pavitra Bhat Jigalemane

Updated on: Mar 12, 2022 | 3:57 PM

ಚಹಾ (Tea) ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಭಾರತೀಯರಿಗೆ ಟೀ ಎಂದರೆ ವಿಶೇಷ ಪ್ರೀತಿ. ಶುಂಠಿ ಟೀ, ಏಲಕ್ಕಿ ಟೀ ಹೀಗಿ ನಾನಾ ವಿಧದ ಟೀಯ ಬಗ್ಗೆ ಕೇಳಿದ್ದೇವೆ. ಆದರೆ ಎಂದಾದರೂ ಪಿಂಕ್​ ಟೀ ಬಗ್ಗೆ ಕೇಳಿದ್ದಿರಾ? ಹೌದು ಸಾಮಾಜಿಕ ಜಾಲತಾಣದಲ್ಲಿ ಈ ಪಿಂಕ್​ ಟೀ (Pink Tea) ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಉತ್ತರ ಭಾರತದಲ್ಲಿ ಇದನ್ನು ನೂನ್​ ಛಾಯ್ (Noon Chai​) ಎಂದೇ ಕರೆಯುತ್ತಾರೆ. ಕಾಶ್ಮೀರ ಮತ್ತು ಲಡಾಖ್​ನಲ್ಲಿ ಈ ಟೀ ಯನ್ನು ತಯಾರಿಸಲಾಗುತ್ತದೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ.

ಇನ್ಸ್ಟಾಗ್ರಾಮ್​ ರೀಲ್ಸ್​ನಲ್ಲಿ @yumyumindia, ಎನ್ನುವ ಬಳಕೆದಾರರು ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಶ್ಮೀರ, ಲಡಾಖ್​ ಮಾತ್ರವಲ್ಲದೆ ಭಾರತದ ಹಲವೆಡೆ ಈ ಪಿಂಕ್​ ಟೀಯನ್ನು ತಯಾರಿಸಲಾಗುತ್ತಿದೆ. ಲಕ್ನೋದ ಬೀದಿ ಬದಿ ವ್ಯಾಪಾರಿಯೊಬ್ಬ ಈ ಪಿಂಕ್​ ಟೀ ತಯಾರಿಸಿ ಆಹಾರ ಪ್ರಿಯರಿಗೆ ನೀಡುತ್ತಿದ್ದಾನೆ. ಈ ಪಿಂಕ್​ ಟೀಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋ ನೋಡಿ ಹಲವರು ಒಮ್ಮೆಯಾದರೂ ಟೇಸ್ಟ್​ ಮಾಡಬೇಕು ಎಂದು ಕಾಮೆಂಟ್​ ಮಾಡಿದ್ದಾರೆ. ವೈರಲ್​ ಆದ ವಿಡಿಯೋ 4.5 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು ಸಾವಿರಾರು ಕಾಮೆಂಟ್​ಗಳು ಬಂದಿವೆ.

ಸಾಂಪ್ರದಾಯಿಕವಾಗಿ ಮಧ್ಯಾಹ್ನದ ಚಹಾವು ಉಪ್ಪಾಗಿರುತ್ತದೆ. ಮಧ್ಯಾಹ್ನ ಎಂದರೆ ಕಾಶ್ಮೀರಿ ಮತ್ತು ಗುಡ್ಡಗಾಡು ಪ್ರದೇಶಗಳ ಪ್ರಾದೇಶಿಕ ಉಪಭಾಷೆಗಳಲ್ಲಿ ಉಪ್ಪು ಎಂದರ್ಥ. ಆದರೆ ಅನೇಕ ಜನರು ಈಗ ಉಪ್ಪು ಪಾನೀಯಗಳ ಪರಿಚಯವಿಲ್ಲದವರ ರುಚಿಗೆ ಸರಿಹೊಂದುವಂತೆ ಬೆಣ್ಣೆ, ಹಾಲಿನ ಕೆನೆಯನ್ನು ಸೇರಿಸಿ ಸಿಹಿಯಾಗಿ ಈ ಪಿಂಕ್​ ಟೀಯನ್ನು ತಯಾರಿಸಲಾಗುತ್ತಿದೆ.

ಇದನ್ನೂ ಓದಿ:

Viral Video: ಬೇಸಿಗೆಗೆ ತಂಪು ನೀಡುವ ಐಸ್​ ಗೋಲಗಪ್ಪಾ ನೋಡಿ ಮೂಗು ಮುರಿದ ನೆಟ್ಟಿಗರು

ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಗ್ರೆನೇಡ್ ಎಸೆದು ಬೆದರಿಕೆ
ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಗ್ರೆನೇಡ್ ಎಸೆದು ಬೆದರಿಕೆ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ